ಜ್ಯೋತಿಷ್ಯದ ಪ್ರಕಾರ ಮಂಗಳವನ್ನು ಗ್ರಹಗಳ ಅಧಿಪತಿ ಎಂದು ಪರಿಗಣಿಸಲಾಗುತ್ತದೆ. ಈ ಮಂಗಳವನ್ನು ಧೈರ್ಯ ಮತ್ತು ಶೌರ್ಯದ ಅಂಶವೆಂದು ಪರಿಗಣಿಸಲಾಗಿದೆ. ಮಂಗಳ ಒಂದು ರಾಶಿಯನ್ನು ಸಂಕ್ರಮಿಸಿದಾಗ, ಅದರ ಪರಿಣಾಮ ದ್ವಾದಶಿ ರಾಶಿಗಳ ಮೇಲೆ ಉಂಟಾಗುತ್ತದೆ.
ಈ ಮಂಗಳ ಪ್ರಸ್ತುತ ಮಿಥುನ ರಾಶಿಯಲ್ಲಿ ಸಂಚರಿಸುತ್ತಿದೆ. ಜೊತೆಗೆ ಮೇ 10ರಂದು ಮಂಗಳ ಕರ್ಕಾಟಕಕ್ಕೆ ಹೋಗಲಿದೆ. ಕಟಕ ರಾಶಿಯು ಮಂಗಳನ ದುರ್ಬಲ ರಾಶಿಯಾಗಿದೆ.
ಮಂಗಳ ಈ ರಾಶಿಯನ್ನು ಸಂಕ್ರಮಿಸುವುದರಿಂದ ತುಂಬಾ ಕೆಟ್ಟದಾದ ದರಿದ್ರ ಯೋಗ ಉಂಟಾಗುತ್ತದೆ. ಈ ದರಿದ್ರ ಯೋಗದಿಂದಾಗಿ, ಕೆಲವು ರಾಶಿಚಕ್ರದವರು ತಮ್ಮ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಈ ದರಿದ್ರ ಯೋಗವು ಅಶುಭ ಯೋಗವಾಗಿದೆ. ಇದು ಪ್ರಯೋಜನಕಾರಿ ಪರಿಣಾಮಗಳಿಗಿಂತ ಹೆಚ್ಚು ತೊಂದರೆಗಳನ್ನು ಉಂಟುಮಾಡುತ್ತದೆ. ಕರ್ಕಾಟಕ ರಾಶಿಯಲ್ಲಿ ಮಂಗಳ ಸಂಚಾರದಿಂದ ಉಂಟಾಗುವ ದರಿದ್ರ ಯೋಗದಿಂದ ಯಾವ ರಾಶಿಯ ಜನರು ಬಹಳಷ್ಟು ಸಮಸ್ಯೆಗಳನ್ನು ಎದುರಿಸಲಿದ್ದಾರೆ ಎಂಬುದನ್ನು ನೋಡೋಣ.
ಮಿಥುನ ರಾಶಿಯವರ ಮೇಲೆ ಶತ್ರುಗಳ ಪ್ರಾಬಲ್ಯ ಹೆಚ್ಚಳ
ಮಿಥುನ ರಾಶಿಯವರಿಗೆ ದರಿದ್ರ ಯೋಗ ಅನೇಕ ಸಮಸ್ಯೆಗಳನ್ನು ಉಂಟುಮಾಡಬಹುದು. ಅನಗತ್ಯ ವಿಷಯಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುವುದು ಸಮಸ್ಯೆಗಳಿಗೆ ಕಾರಣವಾಗಬಹುದು. ಆದಾಯ ಕಡಿಮೆ ಇರುತ್ತದೆ ಮತ್ತು ಖರ್ಚು ಅಧಿಕವಾಗಿರುತ್ತದೆ. ಸಾಲ ಪಡೆಯುವ ವಾತಾವರಣವೂ ಇರುತ್ತದೆ. ಈ ಅವಧಿಯಲ್ಲಿ ವ್ಯಾಪಾರಿಗಳು ಹೂಡಿಕೆ ಮಾಡುವುದನ್ನು ತಪ್ಪಿಸಬೇಕು. ಇಲ್ಲದಿದ್ದರೆ ನೀವು ನಷ್ಟವನ್ನು ಎದುರಿಸಬಹುದು. ಜೊತೆಗೆ ಹೆಚ್ಚು ತಾಳ್ಮೆಯಿಂದಿರಿ. ಇತರರೊಂದಿಗೆ ಮಾತನಾಡುವಾಗ ಸಂಯಮವನ್ನು ಕಾಪಾಡಿಕೊಳ್ಳಲು ಸಲಹೆ ನೀಡಲಾಗುತ್ತದೆ. ಈ ಅವಧಿಯಲ್ಲಿ ಶತ್ರುಗಳು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸುತ್ತಾರೆ.
ತುಲಾ ರಾಶಿಯವರ ಆದಾಯದಲ್ಲಿ ಅನೇಕ ಅಡೆತಡೆ
ತುಲಾ ರಾಶಿಯವರು ದರಿದ್ರ ಯೋಗದಿಂದ ಹಲವಾರು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಈ ಅವಧಿಯಲ್ಲಿ ನೀವು ಆದಾಯದಲ್ಲಿ ಅನೇಕ ಅಡೆತಡೆಗಳನ್ನು ಎದುರಿಸಬಹುದು. ಈ ಅವಧಿಯಲ್ಲಿ ಹೂಡಿಕೆ ಮಾಡುವುದನ್ನು ತಪ್ಪಿಸಿ. ಇಲ್ಲದಿದ್ದರೆ ನಷ್ಟವನ್ನು ಎದುರಿಸಬೇಕಾಗುತ್ತದೆ. ಜೊತೆಗೆ ಈ ಮಸಯದಲ್ಲಿ ಕುಟುಂಬದ ಖರ್ಚು ಹೆಚ್ಚಾಗುತ್ತದೆ. ಎಚ್ಚರಿಕೆಯಿಂದ ಖರ್ಚು ಮಾಡಲು ಸಲಹೆ ನೀಡಲಾಗುತ್ತದೆ. ಇಲ್ಲದಿದ್ದರೆ, ನೀವು ಹಣದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಮಕರ ರಾಶಿಯವರು ಮೋಸ ಹೋಗುವ ಸಾಧ್ಯತೆ
ಮಕರ ರಾಶಿಯವರಿಗೆ ದರಿದ್ರ ಯೋಗ ಕೆಟ್ಟ ಫಲಿತಾಂಶಗಳನ್ನು ನೀಡುತ್ತದೆ. ಈ ರಾಶಿಚಕ್ರದವರು ತುಂಬಾ ಜಾಗರೂಕರಾಗಿರಬೇಕು. ಅನೇಕ ಜನರು ನಿಮ್ಮನ್ನು ಮೋಸಗೊಳಿಸಲು ಪ್ರಯತ್ನಿಸುತ್ತಾರೆ. ಹಣಕಾಸಿನ ಸ್ಥಿತಿಯು ಕೆಟ್ಟದಾಗಿ ಪರಿಣಾಮ ಬೀರುತ್ತದೆ. ವೈವಾಹಿಕ ಜೀವನದಲ್ಲಿ ಸಾಕಷ್ಟು ಉದ್ವಿಗ್ನತೆ ಇರುತ್ತದೆ. ತಾಳ್ಮೆಯಿಂದಿರಲು ಪ್ರಯತ್ನಿಸಿ. ಇಲ್ಲದಿದ್ದರೆ ಸಂಬಂಧದಲ್ಲಿ ಬಿರುಕು ಮೂಡುವ ಸಾಧ್ಯತೆ ಇದೆ.
ಮೀನ ರಾಶಿಯವರಿಗೆ ದೈಹಿಕ ಮತ್ತು ಮಾನಸಿಕ ಸಮಸ್ಯೆ
ಮೀನ ರಾಶಿಯವರು ದರಿದ್ರ ಯೋಗದಿಂದ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಈ ರಾಶಿಚಕ್ರದವರು ಈ ಸಮಯದಲ್ಲಿ ಮಾಡುವ ಎಲ್ಲಾ ಕೆಲಸಗಳಲ್ಲಿ ಬಹಳ ಜಾಗರೂಕರಾಗಿರಬೇಕು. ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಎದುರಿಸಬಹುದು. ಹಣದ ಸಮಸ್ಯೆಗಳನ್ನು ಎದುರಿಸಬಹುದು. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ತಜ್ಞರನ್ನು ಸಂಪರ್ಕಿಸಿ. ಸಮಸ್ಯೆಗಳ ಪರಿಹಾರಕ್ಕೆ ನ್ಯಾಯಾಲಯದ ಮೊರೆ ಹೋಗುವ ಬದಲು ಸಂವಾದದ ಮೂಲಕ ಪರಿಹರಿಸಲು ಪ್ರಯತ್ನಿಸಿ.
- oneindia