ವಿದೇಶ

26 ವರ್ಷಕ್ಕೆ 22 ಮಗುವಿನ ತಾಯಿ ಈ ಯುವತಿ! 105 ಮಕ್ಕಳನ್ನು ಪಡೆಯುವುದೇ ಈಕೆಯ ಗುರಿ

26 ವರ್ಷ ವಯಸ್ಸಿನ ಕ್ರಿಸ್ಟಿನಾ ಓಜ್‌ಟುರ್ಕ್ ಎಂಬ ಯುವತಿ ತನ್ನ 58 ವರ್ಷ ವಯಸ್ಸಿನ ಪತಿ ಗ್ಯಾಲಿಪ್​ನೊಂದಿಗೆ 22 ಮಗುವನ್ನು ಆರೈಕೆ ಮಾಡುತ್ತಿದ್ದು, ಕೇವಲ 26ನೇ ವಯಸ್ಸಿಗೆ 22 ಮಕ್ಕಳಿಗೆ ತಾಯಿಯಾಗಿರುವುದು ಅನೇಕರಲ್ಲಿ ಭಾರೀ ಅಚ್ಚರಿಯನ್ನು ಮೂಡಿಸಿದೆ. 2020ರಿಂದ ಇಲ್ಲಿಯವರೆಗೆ 22 ಶಿಶುಗಳನ್ನು ಸ್ವಾಗತಿಸಿರುವ ಈ ದಂಪತಿ, 105 ಮಕ್ಕಳನ್ನು ಹೊಂದುವ ಮೂಲಕ ತಮ್ಮ ಕುಟುಂಬವನ್ನು ಮತ್ತಷ್ಟು ವಿಸ್ತರಿಸುವ ಕನಸು ಕಂಡಿದೆ. ಪ್ರಸ್ತುತ ಜಾರ್ಜಿಯಾದಲ್ಲಿ ನೆಲೆಸಿರುವ ಕ್ರಿಸ್ಟಿನಾ ಒಜ್ಟುರ್ಕ್ ಮತ್ತು ಅವರ ಮಿಲಿಯನೇರ್ ಪತಿ ಗ್ಯಾಲಿಪ್ ಸದ್ಯ 22 ಮಗುವಿನ ಪೋಷಕರು. ಕ್ರಿಸ್ಟಿನಾ ತನ್ನ ಮೊದಲ …

Read More »

ಇಟಲಿಗೆ ಓದಲು ಹೋಗಿದ್ದ ಭಾರತೀಯ ಮೂಲದ ವಿದ್ಯಾರ್ಥಿ ಶವವಾಗಿ ಪತ್ತೆ; ಕಾರಣ ನಿಗೂಢ

ಭಾರತ ಮೂಲದ ವಿದ್ಯಾರ್ಥಿಯೊಬ್ಬ ಇಟಲಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯ ರಾಮ್ ರಾವುತ್ ಶವವಾಗಿ ಪತ್ತೆಯಾದ ವಿದ್ಯಾರ್ಥಿ. ರಾಮ್ ರಾವುತ್ ಜ.2 ರಂದು ಸಾವನ್ನಪ್ಪಿದ್ದು, ಪೋಷಕರು ಆತನ ಮೊಬೈಲ್ ಗೆ ಕರೆ ಮಾಡಿದ ವೇಳೆ ಘಟನೆ ಬೆಳಕಿಗೆ ಬಂದಿದೆ.   ರಾವುತ್ ಎಂಬಿಎ ಓದಲು ಇಟಲಿಗೆ ಹೋಗಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಹೊಸ ವರ್ಷದ ಶುಭಾಶಯಗಳನ್ನು ತಿಳಿಸಲು ರಾವುತ್ ಅವರ ಪೋಷಕರು ಕರೆ ಮಾಡಿದಾಗ ಘಟನೆ ಬೆಳಕಿಗೆ ಬಂದಿದೆ. ಕರೆ ಮಾಡಿದ ವೇಳೆ ಮಗ ಫೋನ್ ಸ್ವೀಕರಿಸಲಿಲ್ಲ. ಆ ಬಳಿಕ ಪೋಷಕರು …

Read More »

ಇಸ್ರೇಲ್‌ನಲ್ಲಿ ಮಹಿಳೆಯರ ಮೇಲೆ ಹಮಾಸ್‌ ನಡೆಸಿದ ಕ್ರೌರ್ಯದಿಂದ ಬೇಸರ: ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮುಸ್ಲಿಂ ಯುವತಿ

ಇಸ್ರೇಲ್‌ನಲ್ಲಿ ಹಮಾಸ್ ಭಯೋತ್ಪಾದಕರು ನಡೆಸುತ್ತಿರುವ ದೌರ್ಜನ್ಯವನ್ನು ಟಿವಿಯಲ್ಲಿ ನೋಡಿ ಮುಸ್ಕಾನ್ ಸಿದ್ದಿಕಿ ಎಂಬ ಯುವತಿ ಇಸ್ಲಾಂ ಧರ್ಮವನ್ನು ತೊರೆದು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾಳೆ. ಮುಸ್ಕಾನ್ ಹದಿನೈದು ದಿನಗಳ ಹಿಂದೆ ಹಿಂದೂ ಧರ್ಮಕ್ಕೆ ಮತಾಂತರಗೊಂಡು, ಹಿಂದೂ ಶಿಶುಪಾಲ್ ಮೌರ್ಯ ಅವರನ್ನು ವಿವಾಹವಾದರು. ರಾಷ್ಟ್ರೀಯ ಹಿಂದೂ ಶೇರ್ ಸೇನಾ ಮುಖ್ಯಸ್ಥ ವಿಕಾರ್ ಹಿಂದೂ ಅವರ ಸಮ್ಮುಖದಲ್ಲಿ ಹಿಂದೂ ಸಂಪ್ರದಾಯದಂತೆ ಇಬ್ಬರೂ ವಿವಾಹವಾದರು. 23 ವರ್ಷದ ಮುಸ್ಕಾನ್ ಶಹಜಹಾನ್‌ಪುರದ ಕತ್ರಾದಲ್ಲಿ ವಾಸಿಸುತ್ತಿದ್ದರೆ, ಆಕೆಯ ಪತಿ ಮಹೋಲಿ ಪೊಲೀಸ್ ಠಾಣೆ ವ್ಯಾಪ್ತಿಯ ಮಹೋಲಿ ಚಾಡಿಯಾ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ಕಾರ್ಖಾನೆಯೊಂದರಲ್ಲಿ ಕೆಲಸ …

Read More »

ಪಠಾಣ್ ಕೋಟ್ ದಾಳಿ ಮಾಸ್ಟರ್ ಮೈಂಡ್ ಶಾಹಿದ್ ಲತೀಫ್ನನ್ನು ಗುಂಡಿಕ್ಕಿ ಹತ್ಯೆ

ಕರಾಚಿ: ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಒಬ್ಬನಾದ ಮತ್ತು ಪಠಾಣ್ಕೋಟ್ ದಾಳಿಯ ಮಾಸ್ಟರ್ ಮೈಂಡ್ ಶಾಹಿದ್ ಲತೀಫ್ ಪಾಕಿಸ್ತಾನದಲ್ಲಿ ಕೊಲ್ಲಲ್ಪಟ್ಟಿದ್ದಾನೆ ಎನ್ನಲಾಗಿದೆ. ಸಿಯಾಲ್ಕೋಟ್ನಲ್ಲಿ ಅಪರಿಚಿತ ದಾಳಿಕೋರರು ಅವರನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ವರದಿಯಾಗಿದೆ. ಶಾಹಿದ್ ಲತೀಫ್ ಭಾರತದಲ್ಲಿ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆಯಡಿ ಆರೋಪಗಳನ್ನು ಎದುರಿಸುತ್ತಿದ್ದ ಮತ್ತು ಭಾರತ ಸರ್ಕಾರವು ಅವನನ್ನು ಭಯೋತ್ಪಾದಕ ಎಂದು ಪಟ್ಟಿ ಮಾಡಿತ್ತು. ಶಾಹಿದ್ ಲತೀಫ್ ನಿಷೇಧಿತ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ (ಜೆಇಎಂ) ನ ಪ್ರಮುಖ ಸದಸ್ಯನಾಗಿದ್ದನು. ಭಾರತದಲ್ಲಿ 16 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಿದ ನಂತರ ಲತೀಫ್ ನನ್ನು …

Read More »

ಮದುವೆ ಸಮಾರಂಭದಲ್ಲಿ ಅಗ್ನಿ ಅವಘಡ: ವಧು-ವರ ಸೇರಿ 100ಕ್ಕೂ ಹೆಚ್ಚು ಜನರು ಸಾವು..!

ಬಾಗ್ದಾದ್: ಮದುವೆ ಸಮಾರಂಭದಲ್ಲಿ ಏಕಾಏಕಿ ಬೆಂಕಿ ಹೊತ್ತಿ ಉರಿದ ಪರಿಣಾಮ ಸುಮಾರು 100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು 150ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಇರಾಕ್‌ನ ನಿನೆವೆ ಪ್ರಾಂತ್ಯದ ಹಮ್ದನಿಯಾ ಜಿಲ್ಲೆಯಲ್ಲಿ ನಡೆದಿದೆ. ಹಮ್ದನಿಯಾ ಜಿಲ್ಲೆಯ ಮೊಸುಲ್ ನಗರದ ಹೊರಗೆ ನಿನ್ನೆ (ಮಂಗಳವಾರ) ರಾತ್ರಿ 10:45 ಗಂಟೆ ಸುಮಾರಿಗೆ ಮದುವೆ ಸಮಾರಂಭದ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಸುಮಾರು 113 ಜನರು ಮೃತಪಟ್ಟರೇ, 150ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಮದುವೆಯಲ್ಲಿ ಸುಮಾರು 1000 ಸಾವಿರ ಜನರು ಭಾಗವಹಿಸಿದ್ದರು ಎಂದು ಹೇಳಲಾಗುತ್ತಿದೆ. ಮದುವೆ …

Read More »

ಎರಡು ಖಾಸಗಿ ವಿಮಾನಗಳು ಪರಸ್ಪರ ಡಿಕ್ಕಿ: ಐವರ ದುರ್ಮರಣ

ಡುರಾಂಗೊ: ಎರಡು ಖಾಸಗಿ ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಮಗು ಸೇರಿದಂತೆ ಐವರು ಸಾವನ್ನಪ್ಪಿದ ಘಟನೆ ಮೆಕ್ಸಿಕನ್​​ ಉತ್ತರ ರಾಜ್ಯದ ಡುರಾಂಗೊದಲ್ಲಿ ನಡೆದಿದೆ. ರಾಜ್ಯ ಭದ್ರತಾ ಸಚಿವಾಲಯದ ಪ್ರಕಾರ, ಡಿಕ್ಕಿ ಹೊಡೆದುಕೊಂಡ ಎರಡು ವಿಮಾನಗಳು ಸೆಸ್ನಾ ವಿಮಾನಗಳಾಗಿದ್ದು, ಒಂದು ಟೇಕ್​ ಆಫ್​​ ಆಗುವಾಗ ಮತ್ತು ಮತ್ತೊಂದು ಇಳಿಯುವಾಗ ಅಪಘಾತ ಸಂಭವಿಸಿದೆ. ಡಿಕ್ಕಿ ಹೊಡೆದ ರಭಸಕ್ಕೆ ಎರಡು ವಿಮಾಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ ಮಗು ಸೇರಿ ಐವರು ಸಾವನ್ನಪ್ಪಿದ್ದಾರೆ. ಸದ್ಯ ಈ ಅಪಘಾತದ ಬಗ್ಗೆ ತನಿಖೆ ನಡೆಯುತ್ತಿದೆ.

Read More »

ಚೀನಾದಲ್ಲಿ ಮತ್ತೊಂದು ಆತಂಕಕಾರಿ ಕೊರೋನಾ ವೈರಸ್ ಪತ್ತೆ: ವೈರಾಣುತಜ್ಞರಿಂದ ಅಪಾಯದ ಎಚ್ಚರಿಕೆ

ಬಿಜಿಂಗ್: ಈಗಾಗಲೇ ಚೀನಾ ಕೋವಿಡ್-19 ನಿಂದ ತತ್ತರಿಸಿ ಹೋಗಿತ್ತು. ಈಗ ಮತ್ತೊಂದು ಆಘಾತಕಾರಿ ಕೊರೋನಾ ವೈರಸ್ ಚೀನಾದಲ್ಲಿ ಪತ್ತೆಯಾಗಿದೆ. ಅಲ್ಲದೇ ಇದು ವ್ಯಾಪಕವಾಗಿ ಹರಡೋ ವೈರಸ್, ಎಚ್ಚರಿಕೆಯಿಂದ ಇರುವಂತೆ ವೈರಾಣುತಜ್ಞರು ಎಚ್ಚರಿಸಿದ್ದಾರೆ. ಭವಿಷ್ಯದಲ್ಲಿ ಹೊರಹೊಮ್ಮುತ್ತಿರುವ ಮತ್ತೊಂದು ಕೋವಿಡ್ -19 ಮಾದರಿಯ ವೈರಸ್ ಹರಡುವುದರ ವಿರುದ್ಧ ಚೀನಾದ ಪ್ರಮುಖ ವೈರಾಲಜಿಸ್ಟ್ ಅಪಾಯಕಾರಿ ಎಚ್ಚರಿಕೆ ನೀಡಿದ್ದಾರೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.   ಬ್ಯಾಟ್ ವುಮನ್” ಎಂದು ಪ್ರಸಿದ್ಧರಾದ ಶಿ ಝೆಂಗ್ಲಿ, ಒಂದು ಅಧ್ಯಯನದಲ್ಲಿ, ಪ್ರಾಣಿಗಳಿಂದ ಹುಟ್ಟುವ ವೈರಸ್ ಗಳನ್ನು ವ್ಯಾಪಕವಾಗಿ ಸಂಶೋಧಿಸಿದರು. …

Read More »

ಮದುವೆಯಲ್ಲಿ ಡ್ಯಾನ್ಸ್ ಮಾಡುವಾಗ ಗುಂಡು ಹಾರಿಸಿದ ಸಂಬಂಧಿ, ವರ ಸ್ಥಳದಲ್ಲೇ ಸಾವು

ಸಾಮಾನ್ಯವಾಗಿ ಜನರು ಮದುವೆಗಳಲ್ಲಿ ಸಂತೋಷದಿಂದ ಗನ್ ಹಿಡಿದು ಫೈರಿಂಗ್ ಮಾಡುತ್ತಾರೆ. ಕೆಲವೊಮ್ಮೆ ದುರದೃಷ್ಟವಶಾತ್ ಘಟನೆಗಳು ಸಂಭವಿಸುತ್ತವೆ. ಅಂತದ್ದೇ ಇಲ್ಲೊಂದು ಒಂದು ದುರ್ಘಟನೆ ಸಂಭವಿಸಿದೆ. ಮದುವೆ ಸಮಾರಂಭದಲ್ಲಿ ಶೇಖ್ ಕೈಯಲ್ಲಿ ಗನ್ ಹಿಡಿದು ಮನಬಂದಂತೆ ಗುಂಡು ಹಾರಿಸುತ್ತಿದ್ದ. ಇದೇ ವೇಳೆ ಬಂದೂಕುಧಾರಿ ಶೇಖ್ ಏಕಾಏಕಿ ಹಾರಿಸಿದ ಗುಂಡು ವರನ ಎದೆಗೆ ತಗುಲಿ ವರನು ಗಾಯಗೊಂಡು ನೀರಿನ ಮೇಲೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವರದಿಯ ಪ್ರಕಾರ, ಕಳೆದ ತಿಂಗಳು ಆಗಸ್ಟ್‌ನಲ್ಲಿ ಜೋರ್ಡಾನ್‌ನ ಮಾನ್ ಗವರ್ನರೇಟ್‌ನಲ್ಲಿ ನಡೆದ ಮದುವೆಯ ಪಾರ್ಟಿಯಲ್ಲಿ …

Read More »

ತಾಯಿ ಹೋಮ್‌ವರ್ಕ್ ಮಾಡು ಅಂದಿದ್ಕೆ ಪೊಲೀಸ್ ಠಾಣೆಗೆ ಹೋಗಿ ಕಂಪ್ಲೇಂಟ್‌ ಕೊಟ್ಟ 10 ವರ್ಷದ ಬಾಲಕ..!

ಮಕ್ಕಳ ಹೃದಯವು ತುಂಬಾ ಪರಿಶುದ್ಧವಾಗಿರುತ್ತದೆ ಮತ್ತು ಅವರು ತಮ್ಮ ಹೃದಯದಲ್ಲಿ ಏನನ್ನೂಇಟ್ಟುಕೊಳ್ಳುವುದಿಲ್ಲ ಎಂದು ಹೇಳಲಾಗುತ್ತದೆ. ಚೀನಾದಲ್ಲಿ ವಿಚಿತ್ರ ಘಟನೆಯೊಂದು ನಡೆದಿದ್ದು, ಇದು ನಿಮ್ಮ ಆಲೋಚನೆಯನ್ನು ಬದಲಾಯಿಸುತ್ತದೆ.   ಇಲ್ಲಿ 10 ವರ್ಷದ ಮಗು ತನ್ನ ತಾಯಿಯ ಬಗ್ಗೆ ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿ ತನ್ನನ್ನು ಅನಾಥಾಶ್ರಮಕ್ಕೆ ಸೇರಿಸುವಂತೆ ಮನವಿ ಮಾಡಿದ್ದಾನೆ. ಚೀನಾದ ಚಾಂಗ್‌ಕಿಂಗ್ ಎಂಬ ಸ್ಥಳದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಇಲ್ಲಿ ಮಗುವೊಂದು ಸದ್ದು ಮಾಡುತ್ತಾ ಹುಯಿಕ್ಸಿಂಗ್ ಪೊಲೀಸ್ ಠಾಣೆಯನ್ನು ತಲುಪಿತು. ಅವನು ಇಬ್ಬರು ಪೊಲೀಸರ ಬಳಿಗೆ ಹೋಗಿ ತನ್ನ ಕಥೆಯನ್ನು …

Read More »

ಪ್ರೀತಿಗಾಗಿ 2484 ಕೋಟಿ ಪಿತ್ರಾರ್ಜಿತ ಆಸ್ತಿ ತ್ಯಜಿಸಿದ ಯುವತಿ

ಮಲೇಶಿಯಾ:ಮಲೇಷಿಯಾದ ಮಹಿಳೆಯೊಬ್ಬರು $ 300 ಮಿಲಿಯನ್ (₹2,484 ಕೋಟಿ) ಪಿತ್ರಾರ್ಜಿತ ಆಸ್ತಿಯನ್ನು ತ್ಯಜಿಸಿದ್ದಾಳೆ ಮತ್ತು ತನ್ನ ಪ್ರೇಮಿಯೊಂದಿಗೆ ಇರಲು ನಿರ್ಧರಿಸಿದ್ದಾಳೆ. ಆಧುನಿಕ ಪ್ರೇಮಕಥೆಯು ಭೌತಿಕ ಸಂಪತ್ತಿನ ಮೇಲೆ ಪ್ರೀತಿಯ ಶಕ್ತಿಯನ್ನು ಪ್ರದರ್ಶಿಸುವ ಜಗತ್ತನ್ನು ಪ್ರಭಾವಿಸಿದೆ. ಏಂಜಲೀನ್ ಫ್ರಾನ್ಸಿಸ್ ಮಲೇಷ್ಯಾದ ಅತ್ಯಂತ ಶ್ರೀಮಂತ ಮತ್ತು ಪ್ರಮುಖ ಕುಟುಂಬಗಳಿಂದ ಬಂದವರು. ಆಕೆಯ ತಂದೆ ಖೂ ಕೇ ಪೆಂಗ್ ಅವರು ಮಲೇಷ್ಯಾದಲ್ಲಿ ಗುರುತಿಸಲ್ಪಟ್ಟ ವ್ಯಾಪಾರ ಉದ್ಯಮಿಯಾಗಿದ್ದು, ಆಕೆಯ ಪಿತ್ರಾರ್ಜಿತ ಆಸ್ತಿ ಬೇಕಾ ಅಥವಾ ಅವಳ ಪ್ರೇಮಿ ಬೇಕಾ ಎರಡರಲ್ಲಿ ಒಂದನ್ನು ಆಯ್ಕೆ ಮಾಡಲು ಕೇಳಿಕೊಂಡರು ಮತ್ತು ಏಂಜಲೀನ್ ಫ್ರಾನ್ಸಿಸ್ …

Read More »

You cannot copy content of this page.