February 18, 2025
WhatsApp Image 2024-09-12 at 9.44.40 AM
ಬಂಟ್ವಾಳ : ಶರಣ್ ಪಂಪ್ವೆಲ್ ನೀಡಿದ ಹೇಳಿಕೆಯೊಂದಕ್ಕೆ ಸವಾಲೆಸೆದು ಬೆದರಿಕೆ ಹಾಕಿ ಆಡಿಯೋ ಹರಿಬಿಟ್ಟ ಪುರಸಭೆಯ ಮಾಜಿ ಅಧ್ಯಕ್ಷನ  ವಿರುದ್ದ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲಿ ನಾಗಮಂಗಲದಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಜರಂಗದಳ ಪ್ರಾಂತ ಸಹಕಾರ್ಯದರ್ಶಿ ಹಿಂದೂ ನಾಯಕ ಶರಣ್ ಪಂಪ್ ವೆಲ್ ಅವರು ಖಂಡನೆ ಹೇಳಿಕೆಯನ್ನು ನೀಡಿದ್ದರು. ಆ ಹೇಳಿಕೆಯಲ್ಲಿ ಹಿಂದೂಗಳು ರಾಜ್ಯದ ಹಿಂದೂ ಸಮಾಜ ಮನಸ್ಸು ಮಾಡಿದ್ರೆ ಈದ್‌ ಮಿಲಾದ್‌ ಮೆರವಣಿಗೆ ಹೋಗಲು ಸಾಧ್ಯವಿಲ್ಲ ಎಂದಿದ್ದರು.
ಈ‌ ಹೇಳಿಕೆಗೆ ಸಂಬಂಧಿಸಿದಂತೆ ಬಂಟ್ವಾಳ ಪುರಸಭೆಯ ಮಾಜಿ ಅಧ್ಯಕ್ಷ ಮಹಮ್ಮದ್ ಶರೀಫ್ ಎಂಬಾತ ಪಂಪ್ ವೆಲ್ ಅವರಿಗೆ ಬಗ್ಗೆ ಆಡಿಯೋ ಮೂಲಕ ಬೆದರಿಕೆ ಹಾಕಿದ್ದಾರೆ. ಇದು ಇಡೀ ಹಿಂದೂ ಸಮಾಜದ ಮೇಲೆ ಬೆದರಿಕೆಯಾಗಿದ್ದು, ಈತನನ್ನು ಬಂಧಿಸಿ ಕಾನೂನು ಕ್ರಮಕೈಗೊಳ್ಳುವಂತೆ   ವಿಶ್ವ ಹಿಂದೂ ಪರಿಷತ್, ಬಜರಂಗದಳ ಬಂಟ್ವಾಳ ಪ್ರಖಂಡದ ವತಿಯಿಂದ ಪೋಲೀಸ್ ಠಾಣೆಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ.

About The Author

Leave a Reply

Your email address will not be published. Required fields are marked *

You cannot copy content of this page.