ಸುರತ್ಕಲ್: ಲಾರಿ ಢಿಕ್ಕಿ; ಮೆಡಿಕಲ್‌ ರೆಪ್‌ ಮೃತ್ಯು

ಸುರತ್ಕಲ್: ಲಾರಿ ಢಿಕ್ಕಿ ಹೊಡೆದ ಪರಿಣಾಮ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಪಣಂಬೂರಿನಲ್ಲಿ ನಡೆದಿದೆ.

ಮೃತರನ್ನು ಸುರತ್ಕಲ್‌ ಹೊಸಬೆಟ್ಟು ನಿವಾಸಿ ಅಂಬರೀಷ್ ರಾವ್‌ ( 61) ಎಂದು ಗುರುತಿಸಲಾಗಿದೆ.

ಮೆಡಿಕಲ್‌ ರೆಪ್‌ ಆಗಿದ್ದ ಅಂಬರೀಷ್ ಕೆಲಸ ಮುಗಿಸಿಕೊಂಡು ಮನೆಗೆ ಕಡೆ ಬರುತ್ತಿದ್ದ ವೇಳೆ ಪಣಂಬೂರು ದೇವಸ್ಥಾನದ ಬಳಿ ಅದೇ ರಸ್ತೆಯಾಗಿ ಬಂದ ಲಾರಿ ಅವರಿಗೆ ಢಿಕ್ಕಿ ಹೊಡೆಯಿತೆನ್ನಲಾಗಿದೆ. ಘಟನೆಯಿಂದ ಗಂಭೀರ ಗಾಯಗೊಂಡಿದ್ದ ಅವರನ್ನು ವಾಹನ ಸವಾರರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರು. ಆದರೂ, ಅವರು ಚಿಕಿತ್ಸೆಗೆ ಸ್ಪಂದಿಸದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಅಂಬರೀಷ್‌ ಕಳೆದ ಮೂವತ್ತು ವರ್ಷಗಳಿಂದ ಔಷಧಗಳ ಮಾರಾಟಗಾರರಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Check Also

ಬೆಳ್ತಂಗಡಿ: ಮನೆ ಬಳಿ ಕಟ್ಟಿ ಹಾಕಿದ ಕರುಗಳನ್ನು ಕೊಂದು ತಿಂದ ಚಿರತೆ, ಸ್ಥಳೀಯರಲ್ಲಿ ಆತಂಕ

ಬೆಳ್ತಂಗಡಿ: ಮನೆ ಬಳಿ ಕಟ್ಟಿ ಹಾಕಿದ ಎರಡು ಕರುಗಳನ್ನು ಚಿರತೆ ದಾಳಿ ನಡೆಸಿ ಕೊಂದು ಹಾಕಿದ ಘಟನೆ ಬೆಳ್ತಂಗಡಿಯ ಮುಂಡೂರು ಬಳಿ …

Leave a Reply

Your email address will not be published. Required fields are marked *

You cannot copy content of this page.