May 13, 2026
image (96)

ಪುಣೆ: ಮಹಾರಾಷ್ಟ್ರ-ಕರ್ನಾಟಕ ಗಡಿಭಾಗದ ಸಾಂಗ್ಲಿ ಜಿಲ್ಲೆಯಲ್ಲಿ ಮಂಗಳವಾರ ಸಂಜೆ ಸಂಭವಿಸಿದ ಭೀಕರ ಅವಘಡದಲ್ಲಿ ದೇವಸ್ಥಾನದ ಗೋಡೆ ಕುಸಿದು ಆರು ಮಂದಿ ಭಕ್ತರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಂಗಳವಾರ ಸಂಜೆ ಸುರಿದ ಭಾರೀ ಗಾಳಿ-ಮಳೆಯ ಆರ್ಭಟ ಈ ದುರಂತಕ್ಕೆ ಕಾರಣವಾಗಿದೆ.

ಮೋಠೆವಾಡಿ ಗ್ರಾಮದ ಪ್ರಸಿದ್ಧ ಮುರಗಾಬಾಯಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಸುಮಾರು 350ಕ್ಕೂ ಹೆಚ್ಚು ಭಕ್ತರು ದೇವಸ್ಥಾನದಲ್ಲಿ ನೆರೆದಿದ್ದರು. ಸಂಜೆ 5 ಗಂಟೆಯ ಸುಮಾರಿಗೆ ಏಕಾಏಕಿ ಬಿರುಗಾಳಿ ಸಹಿತ ಮಳೆ ಆರಂಭವಾಯಿತು. ಮಳೆಯಿಂದ ರಕ್ಷಣೆ ಪಡೆಯಲು ಭಕ್ತರು ದೇವಸ್ಥಾನದ ಆವರಣದ ಗೋಡೆಯ ಆಶ್ರಯ ಪಡೆದಿದ್ದರು. ಈ ವೇಳೆ ಬಿರುಗಾಳಿಗೆ ಸಮೀಪದ ಶೀಟಿನ ಶೆಡ್ ಹಾರಿಬಂದು ಗೋಡೆಗೆ ಬಡಿದ ಪರಿಣಾಮ, ನಿರ್ಮಾಣ ಹಂತದಲ್ಲಿದ್ದ  ಗೋಡೆ ಭಕ್ತರ ಮೇಲೆ ಉರುಳಿ ಬಿದ್ದಿದೆ.

ಮೋಠೆವಾಡಿ ಗ್ರಾಮದ ಪ್ರಸಿದ್ಧ ಮುರಗಾಬಾಯಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಸುಮಾರು 350ಕ್ಕೂ ಹೆಚ್ಚು ಭಕ್ತರು ದೇವಸ್ಥಾನದಲ್ಲಿ ನೆರೆದಿದ್ದರು. ಸಂಜೆ 5 ಗಂಟೆಯ ಸುಮಾರಿಗೆ ಏಕಾಏಕಿ ಬಿರುಗಾಳಿ ಸಹಿತ ಮಳೆ ಆರಂಭವಾಯಿತು. ಮಳೆಯಿಂದ ರಕ್ಷಣೆ ಪಡೆಯಲು ಭಕ್ತರು ದೇವಸ್ಥಾನದ ಆವರಣದ ಗೋಡೆಯ ಆಶ್ರಯ ಪಡೆದಿದ್ದರು. ಈ ವೇಳೆ ಬಿರುಗಾಳಿಗೆ ಸಮೀಪದ ಶೀಟಿನ ಶೆಡ್ ಹಾರಿಬಂದು ಗೋಡೆಗೆ ಬಡಿದ ಪರಿಣಾಮ, ನಿರ್ಮಾಣ ಹಂತದಲ್ಲಿದ್ದ  ಗೋಡೆ ಭಕ್ತರ ಮೇಲೆ ಉರುಳಿ ಬಿದ್ದಿದೆ.

About The Author

Leave a Reply

Your email address will not be published. Required fields are marked *

You cannot copy content of this page.