ದೇಶ

ವಿವಾಹಿತ ಮಹಿಳೆಯರು ಗೂಗಲ್​ನಲ್ಲಿ ಏನು ಸರ್ಚ್ ಮಾಡ್ತಾರೆ ಗೊತ್ತೇ? ಇಲ್ಲಿದೆ ಮಾಹಿತಿ

ಇಂದಿನ ಕಾಲದಲ್ಲಿ, ‘Google’ ಪ್ರತಿಯೊಂದು ದೊಡ್ಡ ಪ್ರಶ್ನೆಗೆ ಉತ್ತರವಾಗಿದೆ. ಯಾವುದೇ ಪ್ರಶ್ನೆ ಇರಲಿ, ನೀವು Google ನಲ್ಲಿ ಅದಕ್ಕೆ ಕೆಲವು ಉತ್ತರಗಳನ್ನು ಪಡೆಯುತ್ತೀರಿ. ಜನರು ತಮ್ಮ ಪ್ರಶ್ನೆಗಳಿಗೆ ಉತ್ತರಗಳನ್ನು ತಿಳಿಯಲು Google ನ ಸಹಾಯವನ್ನು ತೆಗೆದುಕೊಳ್ಳುತ್ತಾರೆ. Googleನಲ್ಲಿ ನೀವು ಸರ್ಚ್‌ ಮಾಡಿದ ಹಿಸ್ಟರಿ ಆಯ್ಕೆಯನ್ನು ಸೆಲೆಕ್ಟ್‌ ಮಾಡುವ ಮೂಲಕ ಅದನ್ನು ಡಿಲೀಟ್‌ ಮಾಡಬಹುದು. ಆದ್ರೆ, ಇದರ ನಂತರವೂ ಸರ್ಚ್‌ ಹಿಸ್ಟರಿ ಹಾಗೆಯೇ ಉಳಿದಿರುತ್ತದೆ ಎಂಬುದು ನಿಮಗೆ ತಿಳಿದಿದೆಯೇ?. ಇದರಿಂದಾಗಿ ಯಾವ ಲಿಂಗ ಅಥವಾ ವಯಸ್ಸಿನ ಜನರು ಏನು ಸರ್ಚ್‌ ಮಾಡ್ತಾರೆ ಅನ್ನೋದನ್ನ Google ಡೇಟಾ …

Read More »

15 ವರ್ಷ ಹಳೆಯದಾದ ವಾಹನಗಳಿಗೆ ಕೇಂದ್ರ ಸರ್ಕಾರ ಮಹತ್ವದ ತೀರ್ಮಾನ..!

15 ವರ್ಷ ಹಳೆಯದಾದ ಸರ್ಕಾರಿ ವಾಹನಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಹತ್ವದ ತೀರ್ಮಾನವೊಂದನ್ನು ಕೈಗೊಂಡಿದೆ. ಈ ವಾಹನಗಳನ್ನು ಗುಜರಿಗೆ ಹಾಕಲಿದ್ದು, ಬದಲಾಗಿ ಹೊಸ ವಾಹನಗಳನ್ನು ಖರೀದಿಸಲಾಗುತ್ತದೆ. ಹೊಸ ವಾಹನಗಳಿಗೆ ಹೋಲಿಸಿದರೆ ಈ ವಾಹನಗಳು ಶೇಕಡಾ 10 ರಿಂದ 12 ರಷ್ಟು ಹೆಚ್ಚು ವಾಯುಮಾಲಿನ್ಯ ಉಂಟು ಮಾಡುತ್ತಿರುವ ಕಾರಣಕ್ಕೆ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಈ ಯೋಜನೆಯ ಕಡತಕ್ಕೆ ಗುರವಾರದಂದು ಸಹಿ ಹಾಕಿದ್ದಾರೆ. ರಾಜ್ಯಗಳಿಗೂ ಈ ಯೋಜನೆಯ ಮಾಹಿತಿಯನ್ನು ಕಳುಹಿಸಿಕೊಡಲಾಗಿದ್ದು, ಇದನ್ನು ತಮ್ಮ ತಮ್ಮ …

Read More »

ಪತ್ರಕರ್ತರಿಗೆ ಅಪಮಾನ, ಬೆದರಿಕೆ, ಥಳಿಸಿದರೆ 50 ಸಾವಿರ ರೂ. ದಂಡ ಕಠಿಣ ಶಿಕ್ಷೆ : ಸುಪ್ರೀಂಕೋರ್ಟ್

ದೇಶದ ಕಾರ್ಯನಿರತ ಪತ್ರಕರ್ತರಿಗೆ ಬೆದರಿಕೆಯೊಡ್ಡಿದರೆ ಅವಮಾನ ಮಾಡಿದರೆ ಅಥವಾ ಥಳಿಸುವವರಿಗೆ ರೂ.50 ಸಾವಿರ ದಂಡ ಹಾಗೂ ಐದು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ದೇಶದ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಈ ನಿಟ್ಟಿನಲ್ಲಿ ಗುರುವಾರ ಪ್ರಕರಣವೊಂದರ ವಿಚಾರಣೆಯ ವೇಳೆ ಸುಪ್ರೀಂ ಕೋರ್ಟ್ ಈ ಬಗ್ಗೆ ಸ್ಪಷ್ಟನೆ ನೀಡಿದೆ.ಸುಪ್ರೀಂ ತೀರ್ಪಿನ ಬಗ್ಗೆ ಹಲವಾರು ಪತ್ರಕರ್ತರ ಸಂಘಗಳು ಸಂತಸ ವ್ಯಕ್ತಪಡಿಸಿವೆ. ಯಾವುದೇ ರೀತಿಯ ಭಯವಿಲ್ಲದೆ ಸಾರ್ವಜನಿಕರಿಗೆ ವಾಸ್ತವಿಕ ಮಾಹಿತಿ ನೀಡಲು ಅವಕಾಶವಿರುವುದರಿಂದ ಹಲವಾರು ಪತ್ರಕರ್ತರ ಸಂಘಗಳ ಮುಖಂಡರು ಹಾಗೂ ಹಿರಿಯ ಪತ್ರಕರ್ತರು ತೀರ್ಪಿಗೆ ಆಹ್ವಾನ …

Read More »

ದಿಡೀರ್‌ ಅಸ್ವಸ್ಥರಾದ ಹಿರಿಯ ನಟ ಕಮಲ್ ಹಾಸನ್ -ಆಸ್ಪತ್ರೆಗೆ ದಾಖಲು

ಚೆನ್ನೈ: ಹಿರಿಯ ನಟ ಕಮಲ್ ಹಾಸನ್ ಅಸ್ವಸ್ಥರಾಗಿದ್ದು ಚೆನ್ನೈನ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ. ಇದೇ ವೇಳೆ ಕಮಲ್ ಹಾಸನ್ ಅವರು ಸಾಮಾನ್ಯ ವೈದ್ಯಕೀಯ ತಪಾಸಣೆ ಸಂಬಂಧ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮೂಲಗಳು ಹೇಳಿವೆ. ಬಿಗ್ ಬಾಸ್ ತಮಿಳು ಆವೃತ್ತಿಯನ್ನು ಕಮಲ್ ಹಾಸನ್ ನಿರೂಪಣೆ ಮಾಡುತ್ತಿದ್ದಾರೆ. ಇದರ ಜತೆಗೆ ಇತರ ಹಲವು ಬಿಗ್ ಬಜೆಟ್ ಚಿತ್ರಗಳಲ್ಲಿ ಕೂಡ ಕಮಲ್ ಹಾಸನ್ ಬ್ಯುಸಿಯಾಗಿದ್ದಾರೆ.ಕಮಲ್ ಹಾಸನ್ ಶೀಘ್ರ ಚೇತರಿಸಿಕೊಳ್ಳಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.  

Read More »

‘ಅಫ್ತಾಬ್ ನನ್ನನ್ನು ಕೊಂದು ಪೀಸ್‌ ಮಾಡಿ ಎಸೆಯುತ್ತಾನೆ’: 2 ವರ್ಷದ ಹಿಂದೆಯೇ ಪೊಲೀಸರಿಗೆ ದೂರು ನೀಡಿದ್ದ ಶ್ರದ್ಧಾ..!

ಮುಂಬೈ: 27 ವರ್ಷದ ಯುವತಿ ಶ್ರದ್ಧಾ ವಾಲ್ಕರ್ ಹತ್ಯೆ ಪ್ರಕರಣದ ತನಿಖೆ ಚುರುಕುಕೊಂಡಿದ್ದು, ಬಗೆದಷ್ಟೂ ಭೀಕರ ವಿಚಾರಗಳು ಹೊರಬರುತ್ತಿವೆ. ಅಫ್ತಾಬ್ ನನ್ನನ್ನು ಪೀಸ್‌ ಪೀಸ್‌ ಮಾಡಿ ಎಸೆಯುತ್ತಾನೆ ಎಂದು ಶ್ರದ್ಧಾ ವಾಲ್ಕರ್ 2 ವರ್ಷದ ಹಿಂದೆಯೇ ಮುಂಬೈ ಪೊಲೀಸರಿಗೆ ದೂರು ನೀಡಿದ್ದಳಂತೆ. ಹೌದು. ಮಹಾರಾಷ್ಟ್ರದ ಪಲ್ಗರ್‌ನಲ್ಲಿರುವ ಟುಲಿಂಜ್ ಪೊಲೀಸ್ ಠಾಣೆಯಲ್ಲಿ 23 ನವೆಂಬರ್ 2020ರಲ್ಲಿ ಶ್ರದ್ಧಾ ವಾಲ್ಕರ್ ದೂರು ಸಲ್ಲಿಸಿರುವ ಪತ್ರವೊಂದು ಈಗ ಮುನ್ನೆಲೆಗೆ ಬಂದಿದೆ. ಅದರಲ್ಲಿ ಅಫ್ತಾಬ್ ತನಗೆ ಹೊಡೆಯುತ್ತಿದ್ದು ಕೊಲ್ಲುವುದಾಗಿ ಕೂಡ ಬೆದರಿಕೆ ಹಾಕಿದ್ದಾನೆ ಎಂದು ಶ್ರದ್ಧಾ ಉಲ್ಲೇಖಿಸಿದ್ದರು. ಅಷ್ಟೇ ಅಲ್ಲದೆ …

Read More »

ಈಕೆಯ ಮೋಹದ ಜಾಲಕ್ಕೆ ಬಿದ್ದ ವೃದ್ಧ ಕಳೆದುಕೊಂಡ ಹಣ ಎಷ್ಟೆಂದರೆ, ಖಂಡಿತ ಬೆರಗಾಗ್ತೀರಾ!

ಮಲಪ್ಪುರಂ: ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಪೋಸ್ಟ್​​ ಮಾಡುವ ವ್ಲಾಗರ್​ ಮತ್ತು ಆಕೆಯ ಪತಿ, ಹನಿಟ್ರ್ಯಾಪ್​ ಪ್ರಕರಣದಡಿ ಕೇರಳದ ಕಲ್ಪಕಂಚೇರಿ ಪೊಲೀಸರಿಂದ ಬಂಧನವಾಗಿದ್ದಾರೆ. 68 ವರ್ಷದ ವ್ಯಕ್ತಿಯನ್ನು ಹನಿಟ್ರ್ಯಾಪ್​ ಬಲಗೆ ಬೀಳಿಸಿ ಹಣ ಸುಲಿಗೆ ಮಾಡಿದ ಆರೋಪದ ಮೇಲೆ ಬಂಧಿಸಲಾಗಿದೆ. ವ್ಲಾಗರ್​ ರಶೀದಾ (28) ಮತ್ತು ಆಕೆಯ ಪತಿ ನಿಶಾದ್​ ಬಂಧಿತ ಆರೋಪಿಗಳು. ಇಬ್ಬರು ಕೂಡ ತ್ರಿಸ್ಸೂರ್​ನ ಕುನ್ನಮಕುಲಮ್​ ಮೂಲದವರು. ವ್ಲಾಗರ್​ ಆಗಿರುವ ರಶೀದಾ ಕಣ್ಣುಕುಕ್ಕುವಂತಹ ಉಡುಗೆ ತೊಟ್ಟು ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣಕ್ಕೆ ಹರಿಬಿಡುತ್ತಿದ್ದಳು. ಈಕೆಯ ವಿಡಿಯೋ ನೋಡಿಯೇ ಆಕೆಯ ಹನಿಟ್ರ್ಯಾಪ್​ ಬಲೆಗೆ 68 ವರ್ಷದ …

Read More »

BIGG NEWS : ‘ಪ್ರಧಾನಿ ಮೋದಿ’ಗೆ ಜೀವ ಬೆದರಿಕೆ : ‘ಪೊಲೀಸ’ರಿಗೆ ಸಂದೇಶ ಕಳುಹಿಸಿ, ಕೊಲ್ಲುವುದಾಗಿ ಧಮ್ಕಿ

ಮುಂಬೈ : ಪ್ರಧಾನಿ ನರೇಂದ್ರ ಮೋದಿಗೆ ಜೀವ ಬೆದರಿಕೆ ಹಾಕಲಾಗಿದ್ದು, ಮುಂಬೈ ಟ್ರಾಫಿಕ್ ಪೊಲೀಸರ ವಾಟ್ಸಾಪ್ ಸಂಖ್ಯೆಯ ಆಡಿಯೋ ಸಂದೇಶದಲ್ಲಿ ಪ್ರಧಾನಿ ಮೋದಿ ಅವ್ರಿಗೆ ಜೀವ ಬೆದರಿಕೆ ಹಾಕಲಾಗಿದೆ. ಪ್ರಧಾನಿ ಮೋದಿಯವರನ್ನ ಕೊಲ್ಲುವುದಾಗಿ ಕಿಡಿಗೇಡಿಗಳು ಮುಂಬೈ ಟ್ರಾಫಿಕ್ ಪೊಲೀಸರಿಗೆ ಅಡಿಯೋ ಸಂದೇಶ ಕಳುಹಿಸಿದ್ದಾರೆ. ಇನ್ನು ಈ ಸಂದೇಶ ಕಳುಹಿಸಿದ್ದು ಯಾರು ಎನ್ನುವ ಹುಡುಕಾಟದಲ್ಲಿ ಪೊಲೀಸರಿದ್ದಾರೆ. ಈ ಪ್ರಕರಣ ಮಹಾರಾಷ್ಟ್ರದ ವರ್ಲಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Read More »

ಶ್ರದ್ದಾ ಹತ್ಯೆ ಪ್ರಕರಣ-ತಲೆಬುರುಡೆ ಭಾಗಗಳು ಪತ್ತೆ

ನವದೆಹಲಿ: ತನ್ನ ಲಿವ್ ಇನ್ ಸಂಗಾತಿಯಿಂದಲೇ ಭೀಕರವಾಗಿ ಹತ್ಯೆಯಾಗಿದ್ದ ಶ್ರದ್ದಾ ವಾಲ್ಕರ್ ತಲೆ ಬುರುಡೆ ಭಾಗಗಳು ದಿಲ್ಲಿಯ ಮೆಹ್ರೌಲಿ ಅರಣ್ಯದಲ್ಲಿ ಪತ್ತೆಯಾಗಿವೆ. ಶ್ರದ್ದಾಳನ್ನು ಹತ್ಯೆಗೈದ ಬಳಿಕ ಆರೋಪಿ ಅಫ್ತಾಬ್ ಆಕೆಯ ದೇಹವನ್ನು 35 ಭಾಗಗಳಾಗಿ ಕತ್ತರಿಸಿ ಮೆಹ್ರೌಲಿ ಅರಣ್ಯದಲ್ಲಿ ಎಸೆದಿದ್ದ. ಬಳಿಕ ಪೊಲೀಸರು ವಿಚಾರಣೆ ವೇಳೆ ಆತ ದೇಹವನ್ನು ತುಂಡು ತುಂಡಾಗಿ ಎಸೆದಿದ್ದ ಅರಣ್ಯಕ್ಕೆ ಆತನನ್ನು ಕರೆದೊಯ್ದಿದ್ದರು. ಈ ವೇಳೆ ವಿವಿಧ ಭಾಗಗಳು ಪತ್ತೆಯಾಗಿದ್ದವು. ಆದರೆ ತಲೆಬುರುಡೆ ಸಿಕ್ಕಿರಲಿಲ್ಲ. ಇದೀಗ ತಲೆ ಬುರುಡೆಯೂ ಪತ್ತೆಯಾಗಿದೆ. ಇನ್ನು ಜೂನ್‌ನಲ್ಲಿ ಆತ ಮುಂಬೈನಿಂದ ಫ್ರಡ್ಜ್, ಪಾತ್ರೆ, ಗೃಹ …

Read More »

ಕೊಲೆ ಮಾಡಿ ಮಗಳ ದೇಹವನ್ನು ಸೂಟ್ಕೇಸ್ನಲ್ಲಿ ಎಸೆದ ಪಾಪಿ ತಂದೆ.!?ಕಾರಣ ಏನು ಗೊತ್ತಾ?

ಮಥುರಾ: ಯಮುನಾ ಎಕ್ಸ್ಪ್ರೆಸ್ವೇಯ ಸರ್ವಿಸ್ ರಸ್ತೆಯಲ್ಲಿರುವ ಕೃಷಿ ಸಂಶೋಧನಾ ಕೇಂದ್ರದ ಬಳಿ ರಕ್ತದ ಮಡುವಿನಲ್ಲಿ ಕೆಂಪು ಟ್ರಾಲಿಯೊಂದು ಪತ್ತೆಯಾಗಿದ್ದು ಅದನ್ನು ನೋಡಿದವರು ಬೆಚ್ಚಿ ಬಿದ್ದಿರುವ ಘಟನೆ ನಡೆದಿದೆ. ದೆಹಲಿಯ ಮೊರ್ಬಂದ್ ಗ್ರಾಮದ ನಿತೇಶ್ ಯಾದವ್ ಅವರ ಮಗಳು ಆಯುಷಿ ಯಾದವ್ (21)ಳನ್ನು ಆಕೆಯ ತಂದೆ ಕೊಲೆ ಮಾಡಿ ಹೀಗೆ ಸೂಟ್‌ಕೇಸ್‌ನಲ್ಲಿ ತುಂಬಿದ್ದಾನೆ ಎನ್ನಲಾಗಿದೆ. ಇದೇ ವೇಳೇ ಘಟನೆ ಸಂಬಂಧ ತಡರಾತ್ರಿ ಪೊಲೀಸ್ ವಿಚಾರಣೆಯಲ್ಲಿ ತಂದೆ ನಾನು ನನ್ನ ಏಕೈಕ ಮಗಳನ್ನು ಗುಂಡಿಕ್ಕಿ ಕೊಂದಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಕೊಲೆಗೆ ಮಗಳು ಬೇರೆಯವರನ್ನು ಪ್ರೀತಿ ಮಾಡುತ್ತಿದ್ದದೇ …

Read More »

ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; 48 ವಾಹನಗಳು ಜಖಂ

ಮುಂಬೈ: ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಬರುವ ಪುಣೆಯ ನಾವಲೆ ಸೇತುವೆಯಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡ ಟ್ಯಾಂಕರ್‌ವೊಂದು ಹಲವಾರು ವಾಹನಗಳಿಗೆ ಡಿಕ್ಕಿ ಹೊಡೆದು ಕನಿಷ್ಠ 15 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಈ ಅಪಘಾತವು ಭಾನುವಾರ ರಾತ್ರಿ 8:30ರ ಸುಮಾರಿಗೆ ಸಂಭವಿಸಿದ್ದು, ಟ್ಯಾಂಕರ್‌ವೊಂದರ ಬ್ರೇಕ್ ವೈಫಲ್ಯದಿಂದಾಗಿ ಕನಿಷ್ಠ 48 ವಾಹನಗಳು ಅಪಘಾತಕ್ಕೀಡಾಗಿವೆ. ತಕ್ಷಣವೇ ಪುಣೆ ಅಗ್ನಿಶಾಮಕ ದಳ ಮತ್ತು ಪುಣೆ ಮೆಟ್ರೋಪಾಲಿಟನ್ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ (PMRDA) ರಕ್ಷಣಾ ತಂಡಗಳು ಸ್ಥಳಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆ ನಡೆಸಿದವು. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಸಂಚಾರ …

Read More »

You cannot copy content of this page.