ಆರಂಬೋಡಿ, ಎ. 27: ಸುತ್ತಮುತ್ತ ಮೂರ್ನಾಲ್ಕು ಕಿ.ಮೀ. ಅಂತರದಲ್ಲಿ ಟವರ್ಗಳಿದ್ದರೂ ಇಲ್ಲಿಗೆ ಮಾತ್ರ ನೆಟ್ವರ್ಕೇ ಇಲ್ಲ!
ಆರಂಬೋಡಿ ಗ್ರಾ.ಪಂ. ವ್ಯಾಪ್ತಿಯ ಗುಂಡೂರಿ ಗ್ರಾಮದ ತುಂಬೆದಲೆಕ್ಕಿ ಅನ್ನುವ ಗ್ರಾಮೀಣ ಭಾಗ ಹೆಚ್ಚು ಆರ್ಥಿಕ ವ್ಯವಹಾರ ಕೂಡಿರುವ ಪ್ರದೇಶ. ತಾಲೂಕಿನ ಮುಂಚೂಣೆಯಲ್ಲಿರುವ ಹಾಲಿನ ಸೊಸೈಟಿ, ಭಜನ ಮಂದಿರ, ಸಭಾಂಗಣ, ವೇಣೂರು ಪ್ರಾ.ಕೃ.ಪ.ಸ. ಸಂಘದ ಶಾಖೆ, ಪಡಿತರ ಕೇಂದ್ರ, ಅಂಗಡಿಗಳು ಇಲ್ಲಿವೆ.
ಸರಿಸುಮಾರು ಕಳೆದೆರಡು ವರ್ಷಗಳ ಹಿಂದೆ ಇಲ್ಲಿ ಮೊಬೈಲ್ ರಿಂಗಾಗುತ್ತಿತ್ತು. ವಾಮದಪದವಿನ ಬಿಸ್ಎನ್ಎಲ್ ನೆಟ್ವರ್ಕ್ ಇಲ್ಲಿಗೆ ಸಿಗುತ್ತಿತ್ತು. ಆದರೆ ಈಗ ಸುತ್ತಮುತ್ತ ಹಲವು ಕಂಪೆನಿಗಳ ಟವರ್ ನಿರ್ಮಾಣ ಆಗಿದ್ದರೂ ಯಾವುದೇ ನೆಟ್ವರ್ಕ್ ಇಲ್ಲಿಗೆ ಸಿಗದೇ ಇರುವುದು ಇಲ್ಲಿನ ಜನರಿಗೆ ಸಂಪರ್ಕಕ್ಕೆ ಸಮಸ್ಯೆ ಉಂಟಾಗಿದೆ.
ಸುತ್ತಮುತ್ತದ ವಾಮದಪದವು, ಪೆರಿಂಜೆ, ವೇಣೂರಿನಲ್ಲಿ ಟವರ್ಗಳಿದ್ದರೂ ತುಂಬೆದಲೆಕ್ಕಿ ಪ್ರದೇಶದ ಸರಿಸುಮಾರು 50ಕ್ಕೂ ಅಧಿಕ ಮನೆಗಳಿಗೆ ನೆಟ್ವರ್ಕ್ ಸಮಸ್ಯೆ ಕಾಡಿದೆ. ವೇಣೂರು, ವಾಮದಪದವು ಅಥವಾ ಪೆರಿಂಜೆಯ ಟವರ್ ಸಿಗ್ನಲ್ನ ಸಾಮಾರ್ಥ್ಯ ಹೆಚ್ಚಿನ ಈ ಭಾಗದಲ್ಲಿ ಹೆಚ್ಚಾಗಿ ಬಳಕೆಯಲ್ಲಿರುವ ಬಿಎಸ್ಎನ್ಎಲ್ ಮತ್ತು ಏರ್ಟೆಲ್ ಸಿಗ್ನಲನ್ನು ಲಭಿಸುವಂತೆ ಮಾಡಬೇಕೆಂಬ ಬಲವಾದ ಬೇಡಿಕೆ ಇಲ್ಲಿನ ಜನರಿಂದ ಬಂದಿದೆ. ಕಂಪೆನಿಗಳು ತಕ್ಷಣ ಬೇಡಿಕೆಗೆಗೆ ಸ್ಪಂದಿಸುವ ಕಾರ್ಯ ಮಾಡಬೇಕಿದೆ.