ಕೆ.ಆರ್ ಮಾರುಕಟ್ಟೆಯಲ್ಲಿ ನೋಟಿನ ರಾಶಿ ಎಸೆದ ಯುವಕನ ಉದ್ದೇಶ ಏನಾಗಿತ್ತು ಗೊತ್ತಾ?

ಬೆಂಗಳೂರು;ಕೆ ಆರ್ ಮಾರುಕಟ್ಟೆಯ ಮೇಲ್ಸೇತುವೆಯಿಂದ ಅರುಣ್‌ ಎಂಬಾತ ನಿನ್ನೆ 10 ರೂ.ಮುಖಬೆಲೆಯ ನೋಟುಗಳನ್ನು ಎಸೆದಿರುವುದು ಭಾರೀ ಸುದ್ದಿಯಾಗಿದೆ.

ಆತನ ಮೇಲೆ ಕೇಸ್ ದಾಖಲಿಸಿ ಪೊಲೀಸರು ಬಂಧಿಸಿದ್ದರು.ಇದೀಗ ಆತ ನೋಟು ಎಸೆದಿರುವುದರ ಹಿಂದಿನ‌ ಕಾರಣ ಬಯಲಾಗಿದೆ.

ಇವೆಂಟ್ ಮ್ಯಾನೇಜರ್, ಆಂಕರ್ ಆಗಿದ್ದ ಅರುಣ್ ಪ್ರಚಾರಕ್ಕಾಗಿ ಹಣ ಎಸೆದಿರೋದಾಗಿ ಹೇಳಿದ್ದಾನೆ.

ಹಣದ ನಿರ್ವಹಣೆ ಹಾಗೂ ಉದ್ಯಮದ ಬಗ್ಗೆ ವಿಡಿಯೋ ಮಾಡಿ, ಫೇಸ್‌ಬುಕ್‌, ಇನ್‌ಸ್ಟಾ ಹಾಗೂ ಯುಟ್ಯೂಬ್‌ನಲ್ಲಿ ಹಾಕುತ್ತೇನೆ.ಆದರೆ ನನಗೆ ಹೆಚ್ಚು ಪ್ರಚಾರ ಸಿಗ್ತಿರಲಿಲ್ಲ. ಜನರು ನನಗಾಗಿ ಟೈಮ್‌ ಕೊಡ್ತಿರಲಿಲ್ಲ. ಹಾಗಾಗಿ ಹೆಚ್ಚು ಪ್ರಚಾರ ಸಿಗಲು 10ರೂ.ನೋಟನ್ನು ಎಸೆದಿದ್ದಾನೆ ಎಂದು ಹೇಳಿರುವುದು ತಿಳಿದು ಬಂದಿದೆ.

ಅರುಣ್‌ ನೋಟನ್ನು ಎಸೆದಿದ್ದಾನೆ. ಮಾದ್ಯಮ ಅದನ್ನೇ ದೊಡ್ಡ ಸುದ್ದಿ ಮಾಡಿ ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಿದೆ.

Check Also

ಶಾಲಾ ಶಿಕ್ಷಕಿ ಕಿಡ್ನಾಪ್ ಪ್ರಕರಣ- ನೆಲ್ಯಾಡಿ ಬಳಿ ಅಪಹರಣಕಾರರ ಬಂಧನ

ಹಾಸನ: ಹಾಸನದ ಬಿಟ್ಟಗೌಡನಹಳ್ಳಿ ಬಳಿ ನಡೆದಿದ್ದ ಶಾಲಾ ಶಿಕ್ಷಕಿ ಕಿಡ್ನಾಪ್ ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದು, ಅಪಹರಣಕಾರರನ್ನು ಬಂಧಿಸಿದ್ದಾರೆ. ದಕ್ಷಿಣ ಕನ್ನಡದ …

Leave a Reply

Your email address will not be published. Required fields are marked *

You cannot copy content of this page.