
ಅರಣ್ಯ ಸಂರಕ್ಷಣೆ ಸ್ವಚ್ಛತಾ ಕಾರ್ಯ ನಮ್ಮೆಲ್ಲರ ಜವಾಬ್ದಾರಿ ಮತ್ತು ಕರ್ತವ್ಯವಾಗಿದೆ. ಸ್ವದೇಶಿ ವಸ್ತುಗಳನ್ನು ಹೆಚ್ಚು ಬಳಕೆ ಮಾಡುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರೆ ನೀಡಿದರು. ಭೈರವೈಕ್ಯ ಮಂದಿರ ಉದ್ಘಾಟನೆ ಬಳಿಕ ಪ್ರಧಾನಮಂತ್ರಿ ಮೋದಿ ಭಾಷಣದಲ್ಲಿ ಜನರಿಗೆ ಈ ಒಂದು ಕರೆ ನೀಡಿದರು.
ಇಂದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಮಠದಲ್ಲಿ ಶ್ರೀ ಗುರು ಭೈರವೈಕ್ಯ ಮಂದಿರ ಲೋಕಾರ್ಪಣೆಗೊಳಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾಷಣ ಮಾಡಿದರು. ಆದಿಚುಂಚನಗಿರಿ ಮಠದ ಬಳಿ ಇರುವ ಕ್ರೀಡಾಂಗಣದಲ್ಲಿ ಈ ಒಂದು ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು ಈ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ 80 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗಿರುವ ಭೈರವೈಕ್ಯ ಮಂದಿರ ಉದ್ಘಾಟನೆಗೊಳಿಸಿ ಮಾತನಾಡಿದರು.
ಇಂದು ನನ್ನ ಮನಸ್ಸಿನ ಭಾವನ ಕೇವಲ ಶಬ್ದಗಳಲ್ಲಿ ಹೇಳುವುದಕ್ಕೆ ಆಗಲ್ಲ ಅಂತಹ ಅನುಭೂತಿ ಈ ಮಠದಲ್ಲಿ ನನಗೆ ಸಿಕ್ಕಿದೆ ಸಕ್ಕರೆಗೆ ಮಂಡ್ಯ ನಗರ ಹಾಗೂ ಒಡೆಗೆ ಮದ್ದೂರು ಹೆಸರುವಾಸಿಯಾಗಿದೆ ಕರ್ನಾಟಕ ರಾಜ್ಯವು ತತ್ವಜ್ಞಾನ ಹಾಗೂ ತಂತ್ರಜ್ಞಾನಕ್ಕೆ ಸಮೃದ್ಧವಾಗಿದೆ ಆದಿಚುಂಚನಗಿರಿ ಮಠ ಸಮಾಜಕ್ಕೆ ಆಧ್ಯಾತ್ಮಿಕ ಮಾರ್ಗದರ್ಶನ ನೀಡುತ್ತಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿದರು.
ಶ್ರೀಗಳು ಆಧ್ಯಾತ್ಮಿಕ ಮಾರ್ಗದರ್ಶನಕ್ಕೆ ಮಾತ್ರ ಸೀಮಿತರಾಗಿಲ್ಲ ಅವರು ಜನರ ಸುಖ ಮತ್ತು ದುಃಖಗಳನ್ನು ಅರ್ಥ ಮಾಡಿಕೊಂಡಿದ್ದಾರೆ. ಜನರ ಸಂಘರ್ಷಗಳನ್ನು ಅರ್ಥ ಮಾಡಿಕೊಂಡು ಉತ್ತಮ ದಾರಿಯನ್ನು ತೋರಿಸಿದರು. ದುಃಖ ದೌರ್ಜನ್ಯ ಸಂಕಷ್ಟದಿಂದ ಜನರು ಪಾರಾಗೋ ದಾರಿ ತೋರಿಸಿದ್ದಾರೆ. ಆದಿಚುಂಚನಗಿರಿ ಮಠಕ್ಕೆ ಸುಮಾರು 2000 ವರ್ಷಗಳ ಇತಿಹಾಸವಿದೆ. ಅವರು ಇಂದು ನಮ್ಮ ಜೊತೆಗಿಲ್ಲ.ಆದರೆ ಇಂದು ಅವರು ನಮ್ಮ ಜೊತೆಗಿದ್ದಾರೆ.
ಜನರ ಜೀವನ ಉತ್ತಮಗೊಳಿಸಲು ಹಲವು ಒಳ್ಳೆಯಗಳಲ್ಲಿ ಶ್ರಮಪಟ್ಟಿದ್ದಾರೆ ಅವರ ಜೀವನ ಕೇವಲ ಸಾಧನೆಗೆ ಸೀಮಿತಗೊಂಡಿರಲಿಲ್ಲ ವೈದ್ಯಕೀಯ ಹಾಗೂ ಇಂಜಿನಿಯರ್ ಶಿಕ್ಷಣವನ್ನು ನೀಡಿದ್ದಾರೆ ಇದರ ಹೆಚ್ಚಿನ ಲಾಭ ಬಡ ಹಾಗೂ ಗ್ರಾಮೀಣ ವಿದ್ಯಾರ್ಥಿಗಳಿಗೆ ಆಗಿದೆ ಇವತ್ತಿಗೂ ವೈದ್ಯಕೀಯ ಕ್ಷೇತ್ರದಲ್ಲಿ ಮುಂದುವರಿಸಲಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.
ಮಂದಿರದ ವಿಶೇಷತೆಗಳೇನು?
ನಿರ್ಮಾಣ ವೆಚ್ಚ: ಸುಮಾರು 100 ಕೋಟಿ ರೂಪಾಯಿಗಳಿಗೂ ಅಧಿಕ ವೆಚ್ಚದಲ್ಲಿ ಈ ಭವ್ಯ ಮಂದಿರವನ್ನು ನಿರ್ಮಿಸಲಾಗಿದೆ.
ವಾಸ್ತುಶೈಲಿ: ಒಡಿಶಾದ ಕೊನಾರ್ಕ್ ಸೂರ್ಯ ದೇಗುಲದ ಮಾದರಿಯಲ್ಲಿ ಈ ಮಂದಿರವನ್ನು ರೂಪಿಸಲಾಗಿದೆ. ಇದು ಹೊಯ್ಸಳ, ಚೋಳ, ಚಾಲುಕ್ಯ ಮತ್ತು ಗಂಗ ವಾಸ್ತುಶಿಲ್ಪದ ಸುಂದರ ಮಿಶ್ರಣವಾಗಿದೆ.
ವಿಸ್ತೀರ್ಣ: ಮಂಗಳ ಮಂಟಪದ ಮೇಲೆ 26,250 ಚದರ ಅಡಿ ವಿಸ್ತೀರ್ಣದಲ್ಲಿ ಈ ಮಂದಿರ ತಲೆಎತ್ತಿದೆ. ಇದು ಉತ್ತರ-ದಕ್ಷಿಣವಾಗಿ 175 ಅಡಿ ಹಾಗೂ ಪೂರ್ವ-ಪಶ್ಚಿಮವಾಗಿ 150 ಅಡಿ ಉದ್ದವಿದೆ.
ವಿಶಿಷ್ಟ ಕಲೆ: ಸಂಪೂರ್ಣವಾಗಿ ಕೆಂಪು ಮತ್ತು ವಿವಿಧ ಗ್ರಾನೈಟ್ ಶಿಲೆಗಳಿಂದ ನಿರ್ಮಿಸಲಾದ ಈ ಮಂದಿರದಲ್ಲಿ 26 ಕಂಬಗಳಿವೆ. ಮಂದಿರದ ಒಳಭಾಗದಲ್ಲಿ ಚಿನ್ನ ಮತ್ತು ಬೆಳ್ಳಿಯ ಕವಚದ ಹೊದಿಕೆಗಳನ್ನು ಬಳಸಲಾಗಿದೆ.
ಸಂಕಲ್ಪ: 2013ರಲ್ಲಿ ಲಿಂಗೈಕ್ಯರಾದ ಡಾ. ಬಾಲಗಂಗಾಧರನಾಥ ಶ್ರೀಗಳ ಸ್ಮರಣಾರ್ಥ ಈ ಮಂದಿರ ನಿರ್ಮಿಸಲಾಗಿದ್ದು, 2016ರಲ್ಲಿ ಇದರ ಶಂಕುಸ್ಥಾಪನೆ ನೆರವೇರಿತ್ತು. ಸುಮಾರು 250ಕ್ಕೂ ಹೆಚ್ಚು ನುರಿತ ಶಿಲ್ಪಿಗಳು ಕಳೆದ 10 ವರ್ಷಗಳಿಂದ ಈ ಮಂದಿರದ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.
