ಮಂಗಳೂರು: ರೈಲು ಹಳಿಯಲ್ಲಿ ಕಲ್ಲು ಇರಿಸಿ ದುಷ್ಕೃತ್ಯಕ್ಕೆ ಸಂಚು..!

ಮಂಗಳೂರು: ಸುರತ್ಕಲ್‌ ಚೊಕ್ಕಬೆಟ್ಟು ಬಳಿ ಕೆಲವು ಮಂದಿ ಮಕ್ಕಳು ಕೊಂಕಣ ರೈಲು ಮಾರ್ಗದ ಹಳಿಗೆ ಕಲ್ಲು ತೂರಾಟ ಮತ್ತು ಟ್ರ್ಯಾಕ್‌ ಮೇಲೆ ಕಲ್ಲು ಇರಿಸಿ ಅಪಘಾತ ನಡೆಸಲು ಷಡ್ಯಂತ್ರ ನಡೆಸಿದ ಘಟನೆ ಮೇ 30 ರಂದು ನಡೆದಿದೆ.

ಯಶವಂತಪುರ ಬೆಂಗಳೂರು- ಕಾರವಾರ ರೈಲಿಗೆ ಬೆಳಗ್ಗಿನ ವೇಳೆ ಕಲ್ಲು ತೂರಾಟ ಕೂಡಾ ಮಾಡಲಾಗಿತ್ತು. ಹಳಿಗಳ ಮೇಲೆ ಕೆಲವು ಕಡೆ ಕಲ್ಲುಗಳನ್ನು ಇರಿಸಿರುವುದು ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ರೈಲ್ವೇ ಪೊಲೀಸರು ಸ್ಥಳೀಯ ಧಾರ್ಮಿಕ ಕೇಂದ್ರವೊಂದರ ಮುಖಂಡರ ಮುಖಾಂತರ ಮಕ್ಕಳಿಗೆ ಎಚ್ಚರಿಕೆ ನೀಡಿದ್ದಾರೆ. ಘಟನೆಯ ಬಗ್ಗೆ ರೈಲ್ವೇ ಸುರಕ್ಷತಾ ಪಡೆಯ ಪೊಲೀಸರು ಜೂನ್‌ 5 ರಂದು ಮಾಹಿತಿ ನೀಡಿ ಇಂತಹ ಕೃತ್ಯಗಳಿಗೆ ನೀಡಲಾಗುವ ಶಿಕ್ಷೆಯ ಬಗ್ಗೆ ಮನವರಿಕೆ ಮಾಡಿದ್ದಾರೆ.

Check Also

ಉಪ್ಪಿನಂಗಡಿ: ಮನೆಗೆ ನುಗ್ಗಿ ಚಿನ್ನಾಭರಣ ದರೋಡೆ -ಪ್ರಕರಣ ದಾಖಲು

ಉಪ್ಪಿನಂಗಡಿ ಸಮೀಪ ಕರಾಯ ಗ್ರಾಮದ ಬದ್ಯಾರು ಎಂಬಲ್ಲಿ ಮಹಿಳೆಯೊಬ್ಬರೇ ಇದ್ದ ಮನೆಗೆ ನೀರು ಕೇಳಿಕೊಂಡು ಬಂದ ಅಪರಿಚಿತ ಗಂಡಸು ಮತ್ತು …

Leave a Reply

Your email address will not be published. Required fields are marked *

You cannot copy content of this page.