January 23, 2025
WhatsApp Image 2022-12-07 at 5.06.37 PM
ಮಂಗಳೂರು: ಪಂಪ್ ವೆಲ್ ಬಸ್ ನಿಲ್ದಾಣ ಸಮೀಪ ಪಾರ್ಕಿಂಗ್ ಸ್ಥಳದಲ್ಲಿ ನ.26 ರಂದು ಶಿವರಾಜ್ ಎಂಬವರಿಗೆ ನೋಟಿನ ಬಂಡಲ್ ಗಳು ಸಿಕ್ಕಿದ್ದರ ಬಗ್ಗೆ ಪೊಲೀಸ್‌ ಆಯುಕ್ತರು ಮಾಹಿತಿ ನೀಡಿದ್ದಾರೆ. ನೋಟಿಮ ಬಂಡಲ್‌ ನಲ್ಲಿ ಕೆಲ ನೋಟುಗಳನ್ನು ತುಕಾರಾಮ್ ಎನ್ನುವವರಿಗೆ ನೀಡಿದ್ದ. ತುಕಾರಾಮ್ ಮನೆಯವರು 2.99 ಲ.ರೂ.ಗಳನ್ನು ತಂದು ಪೊಲೀಸರಿಗೆ ಒಪ್ಪಿಸಿದ್ದಾರೆ. ಶಿವರಾಜ್ ಬಳಿ ಇದ್ದ 49,000 ರೂ. ಕೂಡ ಪೊಲೀಸರ ಸುಪರ್ದಿಯಲ್ಲಿದೆ. ಬಂಡಲ್ ಗಳಲ್ಲಿ ಒಟ್ಟು ಎಷ್ಡು ಹಣ ಇತ್ತು, ಅದನ್ನು ಯಾರು ತಂದಿಟ್ಟಿದ್ದರು, ಆ ಬಂಡಲ್ ನಿಂದ ಬೇರೆ ಯಾರಾದರೂ ಹಣ ಪಡೆದುಕೊಂಡು ಹೋಗಿದ್ದಾರೆಯೇ ಎಂಬಿತ್ಯಾದಿ ವಿಚಾರಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಆಯುಕ್ತರು ತಿಳಿಸಿದರು. ಯಾರಾದರೂ ಹಣ ಪಡೆದುಕೊಂಡು ಹೋಗಿದ್ದರೆ ವಾಪಸ್ ನೀಡಬೇಕು. ಅವರ ವಿರುದ್ದ ಕೇಸು ದಾಖಲಿಸುವುದಿಲ್ಲ ಎಂದವರು ತಿಳಿಸಿದರು. ಹಣದ ಮೂಲ ಪತ್ತೆಗೆ ತನಿಖೆ ನಡೆಯುತ್ತಿದೆ ಎಂದರು.

About The Author

Leave a Reply

Your email address will not be published. Required fields are marked *

You cannot copy content of this page.