May 14, 2025
WhatsApp-Image-2025-05-09-at-09.24.27_8b3595ee

ಉಳ್ಳಾಲ : ಚಲಿಸುತ್ತಿದ್ದ ಕಾರೊಂದು ಢಿಕ್ಕಿ ಹೊಡೆದು ಮಹಿಳರಯೊಬ್ಬರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕುತ್ತಾರ್ ಸಮೀಪದ  ಪಂಡಿತ್ ಹೌಸ್  ಬಳಿ ಸಂಭವಿಸಿದೆ. ಪಂಡಿತ್ ಹೌಸ್‌ ನಿವಾಸಿ ಪೂರ್ಣೀಮಾ(59) ಮೃತ ಮಹಿಳೆ.

ಬಸ್ಸಿನಿಂದ ಇಳಿದು ರಸ್ತೆ ದಾಟುವ ಸಂದರ್ಭ  ವೈದ್ಯಕೀಯ ವಿದ್ಯಾರ್ಥಿ ಚಲಾಯಿಸುತ್ತಿದ್ದ ಕಾರು ಢಿಕ್ಕಿ ಹೊಡೆದಿದೆ. ಪರಿಣಾಮ ಪೂರ್ಣಿಮಾ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೇ.16 ರಂದು ಪೂರ್ಣಿಮಾ ಅವರ ಬಾವನ ಪುತ್ರನ ವಿವಾಹ ಸಮಾರಂಭವಿತ್ತು. ಆ ಪ್ರಯುಕ್ತ ಮದುವೆ ಮನೆಗೆ ತೆರಳಿ ವಾಪಸ್ಸಾಗುವಾಗ ದುರಂತ ಸಂಭವಿಸಿದೆ. ಇದೀಗ ಮದುವೆ ಮನೆಯಲ್ಲಿ ಶೋಕತಪ್ತ ವಾತಾವರಣ ಮನೆ ಮಾಡಿದೆ. ತೊಕ್ಕೊಟ್ಟು- ಮಂಗಳೂರು ವಿ.ವಿ ರಸ್ತೆಯ ಪಂಡಿತ್ ಹೌಸ್ ನಲ್ಲಿ  ಪೈಪ್ ಲೈನ್ ಕಾಮಗಾರಿಗಾಗಿ ರಸ್ತೆಯನ್ನು ಅಗೆಯಲಾಗಿತ್ತು. ತದನಂತರ ಡಾಮರೀಕರಣ ನಡೆಸದೆ ಹೊಂಡಮಯವಾಗಿತ್ತು. ಇದನ್ನೂ ಓದಿ : ಕಾಸರಗೋಡು : ಯುವತಿಯ ಮೇಲೆ ಆಸಿಡ್ ದಾಳಿ ನಡೆಸಿ ಆತ್ಮಹತ್ಯೆಗೆ ಶರಣಾದ ಯುವಕ  ನೂತನವಾಗಿ ಡಾಮರೀಕರಣ ನಡೆಸಿದ ರಸ್ತೆಯ ನಡುವೆ ಇರುವ ಹೊಂಡ  ತಕ್ಷಣಕ್ಕೆ ಗೋಜಿಗೆ ಬರುತ್ತಿಲ್ಲ. ಇದರಿಂದ ಕಾರು ಚಾಲಕ ಆಯತಪ್ಪಿ ಮಹಿಳೆಗೆ ಢಿಕ್ಕಿ ಹೊಡೆದಿದ್ದಾನೆನ್ನಲಾಗಿದೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರು ಪತಿ, ಓರ್ವ ಪುತ್ರನನ್ನು ಅಗಲಿದ್ದಾರೆ.

About The Author

Leave a Reply

Your email address will not be published. Required fields are marked *

<p>You cannot copy content of this page.</p>