ಹೀರೋಗಳು ಮಂಚಕ್ಕೆ ಕರೆದಾಗ ನಾನು ಹೋಗಿಲ್ಲ,ಅದಕ್ಕಾಗಿ ಎಲ್ಲಾ ನನ್ನ ಹುಚ್ಚಿ ಅಂದ್ರು -ಕಂಗನಾ ರಣಾವತ್

ಒಂದಷ್ಟು ದಿನಗಳಿಂದ ಕಂಗನಾ ರಣಾವತ್ ಇದ್ದಿದ್ದನ್ನ ನೇರವಾಗಿ ಹೇಳೋ ಮೂಲಕ ಸಿಕ್ಕಾಪಟ್ಟೆ ಸುದ್ದಿಯಲ್ಲಿ ಇದ್ದಾರೆ. ಬಾಲಿವುಡ್ನಲ್ಲಿ ಎಲ್ಲವೂ ಸರಿ ಇಲ್ಲ ಅನ್ನೋದನ್ನ ಕೆಲವೊಂದು ಸಲ ಹಲವು ಉದಾಹರಣೆಗಳನ್ನ ಕೊಡುತ್ತಾ ಹೇಳಿದ್ದಾರೆ.

ಇದೀಗ ಮತ್ತೇ ನನ್ನ ಯಾಕೆ ಎಲ್ಲಾ ಹುಚ್ಚಿ ಅಂತ ಕರೀತಾರೆ ಗೊತ್ತಾ ಅಂತ ಒಂದಷ್ಟು ಶಾಕಿಂಗ್ ವಿಚಾರವನ್ನ ಟ್ವೀಟ್ ಮಾಡೋ ಮೂಲಕ ಶೇರ್ ಮಾಡಿದ್ದಾರೆ.

ಹಾಗಾದ್ರೆ ಅವರು ಬರೆದ ಟ್ವೀಟ್ ನಲ್ಲಿ ಏನಿದೆ ಅಂತ ನೋಡೋದಾದರೆ,ಬಾಲಿವುಡ್‌ ನ ಹೀರೋ ಗಳ ರೂಮಿಗೆ ಹೋಗುವಂತೆ ಹಲವು ಬಾರಿ ನನ್ನನ್ನು ಒತ್ತಾಯ ಮಾಡುತ್ತಿದ್ದರು. ಅದನ್ನು ಒಪ್ಪದೆ ಇದ್ದಾಗ, ನನ್ನನ್ನು ಹುಚ್ಚಿ ಎಂದು ಕರೆದರು’ ಎಂದಿದ್ದಾರೆ.

‘ಬಾಲಿವುಡ್ ಮಂದಿ ನನ್ನ ನಡತೆಯನ್ನ ಜಂಭ ಅಂತ ಹೇಳ್ತಾರೆ.. ಯಾಕೆಂದರೆ ನಾನು ಬೇರೆ ಹುಡುಗಿಯರ ಹಾಗೆ ಎಲ್ಲದಕ್ಕೂ ನಕ್ಕಿಲ್ಲ, ಐಟಂ ಸಾಂಗ್ ಮಾಡಲಿಲ್ಲ, ಮದುವೆಯಲ್ಲಿ ಕುಣಿಯಲಿಲ್ಲ, ರಾತ್ರಿ ಹೊತ್ತಲ್ಲಿ ಹೀರೊಗಳು ಕರೆದ ಕೂಡಲೇ ಅವರ ಕೋಣೆಗೆ ಹೋಗುವುದನ್ನು ಸರಾಸಗಟಾಗಿ ತಿರಸ್ಕರಿಸಿದ್ದೆ. ಇದಕ್ಕೆ ನಾನು ಹುಚ್ಚಿಯಾದೆ’ ಅಂತ ಬರೆದಿದ್ದಾರೆ .

ನನ್ನ ವರ್ತನೆಯ ವಿರುದ್ಧ ನನ್ನನ್ನು ಜೈಲಿಗೆ ಕಳಿಸುತ್ತಾರೆಯೇ?
ತಮ್ಮನ್ನು ತಾವು ಸರಿ ಮಾಡಿಕೊಳ್ಳುವುದನ್ನು ಬಿಟ್ಟು, ನನ್ನನ್ನು ಸರಿ ಮಾಡುವುದಕ್ಕೆ ಬರುತ್ತಿದ್ದಾರೆ. ನನಗೋಸ್ಕರ ಏನೂ ಬೇಡ. ನಾನು ನನ್ನದೆಲ್ಲ ಆಸ್ತಿಯನ್ನು ಅಡವಿಟ್ಟು ಒಂದು ಸಿನಿಮಾ ಮಾಡಿದ್ದೇನೆ. ರಾಕ್ಷಸರ ನಿರ್ಣಾಮ ಆಗುತ್ತೆ. ತಲೆಗಳು ಉರುಳುತ್ತವೆ. ಯಾರೂ ನನ್ನನ್ನು ದೂಷಿಸಬೇಡಿ ಎಂದು ಕಂಗನಾ ಟ್ವೀಟ್‌  ಮೂಲಕ ಕಿಡಿಕಾರಿದ್ದಾರೆ.

Check Also

ಪುರುಪೋತ್ತಮನ‌ ಪ್ರಸಂಗ ಚಿತ್ರ ಮಾಚ್೯ 1 ರಂದು ರಾಜ್ಯಾದ್ಯಂತ ತೆರೆಗೆ

ಮಂಗಳೂರು:  ರಾಷ್ಟ್ರಕೂಟ ಪಿಚರ್ಸ್ ಲಾಂಛನದಲ್ಲಿ ವಿ ರವಿ ಕುಮಾರ್ ನಿರ್ಮಾಣದಲ್ಲಿ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ನಿರ್ದೇಶನದಲ್ಲಿ ತಯಾರಾದ ಪುರುಷೋತ್ತಮನ‌ …

Leave a Reply

Your email address will not be published. Required fields are marked *

You cannot copy content of this page.