ದೇಶ

ಜಿಮ್ ನಲ್ಲಿ ವರ್ಕೌಟ್ ಮಾಡುತ್ತಲೇ ಕೊನೆಯುಸಿರೆಳೆದ ಯುವ ಪೊಲೀಸ್ ಕಾನ್ಸ್ ಟೇಬಲ್…!

ಹೈದರಾಬಾದ್: ಇತ್ತೀಚೆಗೆ ಹೃದಯಾಘಾತಗಳು ಮರಣಘಾತಗಳಾಗುತ್ತಿದ್ದು ಯುವಕರೇ ಹೆಚ್ಚಾಗಿ ಬಲಿಯಾಗುತ್ತಿದ್ದಾರೆ. ಇದಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ ಜಿಮ್ ನಲ್ಲಿ ವರ್ಕ್ ಔಟ್  ಮಾಡುತ್ತಿರುವಾಗಲೇ ಹೃದಯಾಘಾತ ಸಂಭವಿಸಿ ಯುವ ಪೊಲೀಸ್ ಕಾನ್ಸ್ ಟೇಬಲ್ ಇಹಲೋಕ ತ್ಯಜಿಸಿದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ವಿಶಾಲ್ (24ವರ್ಷ) ಎಂಬ ಬೋವೆನ್ ಪಲ್ಲಿ ನಿವಾಸಿಯಾಗಿದ್ದು, ಆಸೀಫ್ ನಗರ ಪೊಲೀಸ್ ಠಾಣೆಯಲ್ಲಿ ಕಾನ್ಸ್ ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ವಿಶಾಲ್ ಅವರು ಪುಷ್ ಅಪ್ಸ್ ಮಾಡುತ್ತಿರುವುದು ಕಂಡುಬಂದಿದ್ದು, ಬಳಿಕ ವಿಶಾಲ್ ಮತ್ತೊಂದು ವರ್ಕ್ ಔಟ್ ಗೆ ತೆರಳಲು …

Read More »

ಪತಿ ಸಹೋದರಿಯನ್ನೇ ಪ್ರೀತಿಸಿ ಮದುವೆಯಾದ ಮಹಿಳೆ..!

ಬಿಹಾರದ ಸಮಸ್ತಿಪುರದ ಶುಕ್ಲಾ ದೇವಿ ಎಂಬ 32 ವರ್ಷದ ಮಹಿಳೆ ತನ್ನ ಅತ್ತಿಗೆ ಅಂದರೆ ಪತಿಯ ಸಹೋದರಿಯನ್ನು ಪ್ರೀತಿಸಿ ಮದುವೆಯಾಗಿದ್ದಾಳೆ. ಈಕೆ 10 ವರ್ಷಗಳ ಹಿಂದೆ ಪ್ರಮೋದ್ ದಾಸ್ ಎಂಬುವವನ್ನು ವಿವಾಹವಾಗಿದ್ದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಒಂದು ದಶಕದ ಕಾಲ ಪುರುಷನೊಂದಿಗೆ ಇದ್ದ ನಂತರ ಈಗ 18 ವರ್ಷದ ಅತ್ತಿಗೆಯನ್ನೇ ವರಿಸಿದ್ದಾಳೆ ! ನಾವು ಪರಸ್ಪರ ಪ್ರೀತಿಸಿದ್ದರಿಂದ ಮದುವೆಯಾಗಿದ್ದೇವೆ. ನನಗೆ ಅತ್ತಿಗೆಯ ಮೇಲೆ ಮೋಹ ಹುಟ್ಟಿತು. ಅದಕ್ಕಾಗಿಯೇ ಗಂಡನನ್ನು ಬಿಟ್ಟು ಅತ್ತಿಗೆಯನ್ನು ಮದುವೆಯಾಗಿದ್ದೇನೆ ಎಂದು ಶುಕ್ಲಾ ದೇವಿ ಹೇಳಿದ್ದು, ಮದುವೆಯಾದ ನಂತರ ನಾವು ತುಂಬಾ …

Read More »

ಭೀಕರ ರಸ್ತೆ ಅಪಘಾತಕ್ಕೆ 4 ಮಕ್ಕಳು ಸೇರಿದಂತೆ 11 ಮಂದಿ ಬಲಿ

ರಾಯ್‌ಪುರ: ಟ್ರಕ್ ಹಾಗೂ ವ್ಯಾನ್ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ಕು ಮಕ್ಕಳು ಸೇರಿದಂತೆ 11 ಮಂದಿ ಸಾವನಪ್ಪಿರುವ ಘಟನೆ ಛತ್ತೀಸ್ ಗಡದ ಬಲೋಡಾ ಬಜಾರ್ – ಭಟಪರಾ ಜಿಲ್ಲೆಯ ವ್ಯಾಪ್ತಿಯಲ್ಲಿ ಗುರುವಾರ ತಡರಾತ್ರಿ ಸಂಭವಿಸಿದೆ. ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಖಿಲೋರಾ ಗ್ರಾಮದಿಂದ ಅರ್ಜುನಿ ಗ್ರಾಮಕ್ಕೆ ತೆರಳಿದ್ದರು. ಕಾರ್ಯಕ್ರಮ ಮುಗಿಸಿ ಸಂಬಂಧಿಕರು ಪಿಕಪ್‌ ವಾಹನದಲ್ಲಿ ಅರ್ಜುನಿಯಿಂದ ತಮ್ಮ ಗ್ರಾಮ ಖಿಲೋರಾಗೆ ಹಿಂತಿರುಗುತ್ತಿದ್ದರು. ಈ ಮಧ್ಯೆ, ರಾತ್ರಿ 12 ಗಂಟೆ ಸುಮಾರಿಗೆ ಖಮಾರಿಯಾದ ಡಿಪಿಡಬ್ಲ್ಯುಎಸ್ ಶಾಲೆಯ ಬಳಿ ವೇಗವಾಗಿ ಬಂದ ಟ್ರಕ್‌ ಮತ್ತು ಪಿಕಪ್ ವಾಹನದ …

Read More »

ಯೋಗಿ ಆದಿತ್ಯನಾಥ್‌ ವಿರುದ್ಧ ಪದೇ ಪದೇ ದೂರು ನೀಡುತ್ತಿದ್ದ ವ್ಯಕ್ತಿಗೆ ₹ 1 ಲಕ್ಷ ದಂಡ ವಿಧಿಸಿದ ಹೈಕೋರ್ಟ್‌

ಲಖನೌ, ಫೆಬ್ರವರಿ 23: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ವಿರುದ್ಧ 2007ರ ಗೋರಖಪುರ ಗಲಭೆ ಸಂಬಂಧ, ಕ್ರಮ ಕೈಗೊಳ್ಳಬೇಕು ಎಂದು ಕೋರಿ ಪದೇ ಪದೇ ಅರ್ಜಿ ಸಲ್ಲಿಸುತ್ತಿದ್ದ ವ್ಯಕ್ತಿಗೆ ಅಲಹಾಬಾದ್‌ ಹೈಕೋರ್ಟ್‌ ಬುಧವಾರ ₹ 1 ಲಕ್ಷ ದಂಡ ವಿಧಿಸಿದೆ ಸುಪ್ರೀಂ ಕೋರ್ಟ್‌ನಲ್ಲಿ ಈ ವಿಚಾರ ಇತ್ಯರ್ಥವಾಗಿದ್ದರೂ ಕೂಡ ವ್ಯಕ್ತಿ ಪದೇ ಪದೇ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುತ್ತಿದ್ದರು. ವೃತ್ತಿಯಲ್ಲಿ ಪತ್ರಕರ್ತರಾಗಿರುವ ಪರ್ವೇಜ್‌ ಪರ್ವಾಜ್‌ ಎಂಬವರೇ ದಂಡ ತೆತ್ತವರು. 2007 ಜನವರಿ 27 ರಂದು ನಡೆದ ಮೊಹರಂ ಮೆರವಣಿಗೆಯಲ್ಲಿ ಎರಡು ಪಂಗಡಗಳ ನಡುವೆ ಜಗಳ …

Read More »

ರಸ್ತೆಯಲ್ಲಿ ಬೆತ್ತಲಾಗಿ ನಿಂತ ಆಸ್ಪತ್ರೆಯ ನರ್ಸ್..!

ರಾಜಸ್ಥಾನದ ಜೈಪುರದ ಎಸ್ಎಂಎಸ್ ಆಸ್ಪತ್ರೆಯ ನರ್ಸ್ ಒಬ್ಬರು ಬೆತ್ತಲಾಗಿ ನಿಂತ ಘಟನೆ ನಡೆದಿದೆ. ಅಜೀರ್ ಜಿಲ್ಲೆಯ ಬಿವಾರ್ ಪಟ್ಟಣದ 36 ವರ್ಷದ ಮಹಿಳೆ, ಜೈಪುರದ ಆಸ್ಪತ್ರೆಯಲ್ಲಿ ಎಎನ್ ಆಗಿ ಕೆಲಸ ಮಾಡುತ್ತಿದ್ದರು. ಕರ್ತವ್ಯಲೋಪದ ಹಿನ್ನೆಲೆ ಶಿಸ್ತು ಕ್ರಮದ ಭಾಗವಾಗಿ ಆಕೆಯನ್ನು ಡಿ-ಗ್ರೇಡ್ ಮಾಡಿ ಎಪಿಒ ಆಗಿ ನೇಮಿಸಲಾಗಿತ್ತು. ಇದರಿಂದ ಮಾನಸಿಕವಾಗಿ ನೊಂದ ಮಹಿಳೆ, ಬೆತ್ತಲೆ ನಿಂತು ಪ್ರತಿಭಟಿಸಿದ್ದಾರೆ. ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More »

BREAKING NEWS; ಖ್ಯಾತ ಮಲಯಾಳಂ ಹಾಸ್ಯ ನಟಿ ಸುಬಿ ಸುರೇಶ್‌ ಇನ್ನಿಲ್ಲ..!

ಕೊಚ್ಚಿ: ಖ್ಯಾತ ಮಲಯಾಳಂ ಹಾಸ್ಯ ನಟಿ ಹಾಗೂ ನಿರೂಪಕಿ ಸುಬಿ ಸುರೇಶ್‌ ನಿಧನರಾಗಿದ್ದಾರೆ. 42 ವರ್ಷ ವಯಸ್ಸಿನ ಸುಬಿ ದೀರ್ಘ ಕಾಲದಿಂದ ಯಕೃತ್‌ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದರು. ಇಂದು ಮುಂಜಾನೆ ಖಾಸಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರುಳೆದಿದ್ದಾರೆ. ತಮ್ಮ ವಾಕ್ಚಾತುರ್ಯ ಮತ್ತು ಹಾಸ್ಯಪ್ರಜ್ಞೆಗೆ ಹೆಸರು ಪಡೆದಿದ್ದ ಸುಬಿ ಓರ್ವ ನೃತ್ಯಗಾತಿ ಮತ್ತು ಕಾಮಿಡಿಯನ್‌ ಆಗಿ ವೃತ್ತಿಜೀವನ ಆರಂಭಿಸಿದ್ದರು. ಮುಂದೆ ಅವರು ಟಿವಿ ಶೋಗಳಾದ ಮಝವಿಲ್‌ ಮನೋರಮಾದ “ಮೇಡ್‌ ಫಾರ್‌ ಈಚ್‌ ಅದರ್”‌ ಮತ್ತು ಸೂರ್ಯ ಟಿವಿಯ “ಕುಟ್ಟಿ ಪಟ್ಟಲಂ” ನಲ್ಲಿ ನಿರೂಪಕಿಯಾಗಿದ್ದರು. ಸುಬಿ ಅವರು …

Read More »

ನನ್ನ ಹೆಣವೂ ಪ್ರಿಡ್ಜ್ ಒಳಗೆ ಸ್ಟೋರ್ ಆಗ್ತಿತ್ತು, ದೇವರು ಬಚಾವ್ ಮಾಡಿದ- ಗೋಳು ತೋಡಿಕೊಂಡ ರಾಖಿ ಸಾವಂತ್

ಮದುವೆಯಾಗಿ ಕೆಲವೇ ದಿನಗಳಲ್ಲಿಯೇ ಗಂಡ ಆದಿಲ್‌ ಖಾನ್‌ ಜೊತೆಗಿನ ಮನಸ್ತಾಪದಿಂದಾಗಿ ನಟಿ, ಡಾನ್ಸರ್‌ ಹಾಗೂ ಬಿಗ್‌ ಬಾಸ್‌ ಮೂಲಕ ಪ್ರಸಿದ್ಧಿ ಪಡೆದ ರಾಖಿ ಸಾವಂತ್‌ ಸುದ್ದಿಯಲ್ಲಿದ್ದಾರೆ. ಒಂದು ಕಡೆ ರಾಖಿ ಸಾವಂತ್‌ ನೀಡಿದ ದೂರಿನ ಆಧಾರದಲ್ಲಿ ಮೈಸೂರು ಮೂಲದ ಪತಿ ಆದಿಲ್‌ ಖಾನ್‌ ಜೈಲಿನಲ್ಲಿದ್ದರೆ, ರಾಖಿ ಸಾವಂತ್‌ ಮಾಧ್ಯಮಗಳ ಎದುರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಮತ್ತೆ ಮಾಧ್ಯಮಗಳ ಎದುರು ಬಂದಿದ್ದ ರಾಖಿ ಸಾವಂತ್‌, ಕೆನ್ನೆಗೆ ಹೊಡೆದುಕೊಳ್ಳುತ್ತಾ ಅಯ್ಯಯ್ಯೋ ಎಂಥಾ ತಪ್ಪು ಮಾಡಿಬಿಟ್ಟೆ ಎಂದು ಕಣ್ಣೀರು ಹಾಕಿದರು. ಜೀವನದಲ್ಲಿ ಕಷ್ಠದ ಸಮಯದಲ್ಲಿರುವ ರಾಖಿ ಸಾವಂತ್‌ …

Read More »

ಜೈಲಿನಲ್ಲಿ ಅಧಿಕಾರಿಗಳು ​​ತಪಾಸಣೆ ಮಾಡುವ ವೇಳೆ ಮೊಬೈಲ್​ ನುಂಗಿದ ಕೈದಿ

ಜೈಲಿನಲ್ಲಿ ಅಧಿಕಾರಿಗಳು ​​ತಪಾಸಣೆ ಮಾಡುವ ವೇಳೆ ಸಿಕ್ಕಿ ಬೀಳುವ ಭಯದಿಂದ ಜಿಲ್ಲಾ ಕಾರಾಗೃಹದ ಕೈದಿಯೊಬ್ಬ ಮೊಬೈಲ್​ ನುಂಗಿದ ಘಟನೆ ಬಿಹಾರದಲ್ಲಿ ನಡೆದಿದೆ.ಖೈಶರ್ ಅಲಿ ತಪಾಸಣೆ ವೇಳೆ ಫೋನ್ ನುಂಗಿದ್ದಾನೆ. ನಂತರ ಈತನಿಗೆ ಹೊಟ್ಟೆ ನೋವು ಕಾಣಿಸಿಕೊಂಡ ನಂತರ ವಿಷಯ ಬೆಳಕಿಗೆ ಬಂದಿದೆ. ತಕ್ಷಣವೇ ಅವರನ್ನು ಗೋಪಾಲ್ಗಂಜ್ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು,ಕೈದಿಯ ಎಕ್ಸ್-ರೇಯಲ್ಲಿ ಹೊಟ್ಟೆಯಲ್ಲಿ ಮೊಬೈಲ್​ಗಳ ಬಿಡಿ ಭಾಗಗಳು ಪತ್ತೆಯಾಗಿವೆ. ಹೆಚ್ಚಿನ ಚಿಕಿತ್ಸೆಗಾಗಿ ಖೈದಿಯನ್ನು ಪಾಟ್ನಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜೈಲು ಅಧೀಕ್ಷಕ ಮನೋಜ್ ಕುಮಾರ್ ತಿಳಿಸಿದ್ದಾರೆ.ಅಲಿ ಅವರನ್ನು ಜನವರಿ 17, …

Read More »

ಕಿಕ್ಕಿರಿದ ರೈಲೊಳಗೆ ಯುವಜೋಡಿಯಿಂದ ಲೈಂಗಿಕ ಕ್ರಿಯೆ..!

ಪ್ರೇಮಿಗಳ ದಿನದಂದು ರೈಲಿನಲ್ಲಿಯೇ ಜೋಡಿಯೊಂದು ಲೈಂಗಿಕ ಕ್ರಿಯೆ ನಡೆಸಿದ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದ್ದು, ಪ್ರಯಾಣಿಕರನ್ನು ತಲ್ಲಣಗೊಳಿಸಿದೆ.ಪ್ರೇಮಿಗಳ ದಿನದ ಗೌರವಾರ್ಥವಾಗಿ ಸಿಡ್ನಿ ಜೋಡಿಯೊಂದು ಮೈಮರೆತು ವರ್ತಿಸಿದೆ. ರೈಲಿನಲ್ಲಿದ್ದ ಪ್ರಯಾಣಿಕರು ಮುಜುಗರಕ್ಕೆ ಒಳಗಾಗಿದ್ದಾರೆ. ಗಾಬರಿಗೊಂಡ ಪ್ರಯಾಣಿಕರು ಈ ಜೋಡಿಯ ಸಾರ್ವಜನಿಕ ಪ್ರೀತಿಯ ಪ್ರದರ್ಶನವನ್ನು ತಡೆಯುವಂತೆ ಹೇಳಿದ್ದಾರೆ. ಉತ್ತರ ಸಿಡ್ನಿ ಉಪನಗರಗಳಾದ ನಾರ್ಮಹರ್ಸ್ಟ್ ಮತ್ತು ಗಾರ್ಡನ್ ನಡುವೆ ರೈಲು ಸಾಗುವಾಗ ಘಟನೆ ನಡೆದಿದೆ. ಅಸಹ್ಯಕರ ದೃಶ್ಯ ನೋಡಲು ಮುಜುಗರವಾಗಿ ನಾನು ಅಲ್ಲಿಂದ ದೂರ ಹೋದೆ ಎಂದು ಪ್ರಯಾಣಿಕರೊಬ್ಬರು ಹೇಳಿದ್ದು, ವಿಡಿಯೋ ದೃಶ್ಯಾವಳಿಗಳಲ್ಲಿ, ಧ್ವನಿವರ್ಧಕದಲ್ಲಿನ ಧ್ವನಿಯು ಜೋಡಿಗೆ ತಮ್ಮ ಅನುಚಿತ …

Read More »

ವಿವಾಹ ಸಮಾರಂಭದಲ್ಲಿ ʼವರನಿಗೆ ಸಿಗರೇಟ್ & ಪಾನ್ʼ ಕೊಟ್ಟು ಸ್ವಾಗತಿಸಿದ ವಧುವಿನ ತಾಯಿ..!

ಭಾರತದಲ್ಲಿ ಹಿಂದೂ ವಿವಾಹ ಪದ್ಧತಿಯಲ್ಲಿ ನಾವು ಹಲವಾರು ವಿಧಿ ವಿಧಾನಗಳನ್ನು ಅನುಸರಿಸುತ್ತೇವೆ. ಯಾವುದೇ ಧರ್ಮ ಜಾತಿಯೇ ಇರಲಿ ಒಂದೊಂದು ಪಂಗಡದವರು ಒಂದೊಂದು ವಿಧವಾದ ವೈವಾಹಿಕ ವಿಧಾನಗಳನ್ನು ಅನುಸರಿಸುತ್ತಾರೆ.   ಮದುವೆಯ ಈ ಪವಿತ್ರ ಬಂಧನದಲ್ಲಿ ಪ್ರತಿಯೊಂದು ಶಾಸ್ತ್ರ ಸಂಪ್ರದಾಯಗಳಿಗೂ ಅದರದ್ದೇ ಆದ ಮೌಲ್ಯವಿದ್ದು ಈ ಮೌಲ್ಯವು ವಿವಾಹದ ಪ್ರಮುಖ ಸೂತ್ರವಾಗಿದೆ. ಅದರಲ್ಲೂಇತ್ತೀಚಿನ ದಿನಗಳಲ್ಲಿ ಮದುವೆಯ ವಿಭಿನ್ನಸಂಪ್ರಾದಾಯವೂ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ವೈರಲ್ ಆಗುತ್ತಲೇ ಇರುತ್ತದೆ. ಇಲ್ಲೊಂದೆಡೆ ವರನಿಗೆ ಸಿಗರೇಟ್ & ಪಾನ್ ಕೊಟ್ಟು ವಧುವಿನ ತಾಯಿಸ್ವಾಗತಿಸಿದ ಅದ್ದೂರಿ ವಿವಾಹ ಸಮಾರಂಭ ವೀಡಿಯೊ ಭಾರೀ ಸದ್ದು …

Read More »

You cannot copy content of this page.