ವೇಣೂರು, ಮೇ 1: ಕರಿಮಣೇಲು ಗ್ರಾಮದ ದೇಲಂಪುರಿ ಶ್ರೀ ಮಹಾದೇವ ಮಹಾಗಣಪತಿ ದೇವಸ್ಥಾನದಲ್ಲಿ ವರುಣನ ಕೃಪೆಗಾಗಿ ಶ್ರೀ ದೇವರಿಗೆ ಇಂದು ೧೫೦ ಸಿಯಾಳದ ಅಭಿಷೇಕ ಜರಗಿತು.
ಕೆರೆ, ನದಿಗಳು ಬತ್ತಿಹೋಗಿವೆ. ಮಳೆಗಾಲ ರೈತರು, ಕೃಷಿಕರು ಮುಗಿಲತ್ತ ಮುಖ ಮಾಡಿದ್ದು, ಕೆಲವೆಡೆ ಕುಡಿಯುವ ನೀರಿಗೂ ಪರದಾಡುವಂತಾಗಿದೆ. ಊರಿನಲ್ಲಿ ಶೀಘ್ರ ಮಳೆ ಬಂದು ವರುಣ ಕೃಪೆತೋರುವಂತೆ ಶ್ರೀ ಮಹಾಗಣಪತಿ ದೇವರಿಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಸಿಯಾಳದ ಅಭಿಷೇಕ ನೆರವೇರಿಸಲಾಯಿತು. ದೇವಸ್ಥಾನದ ವಿವಿಧ ಸಮಿತಿ ಪದಾಧಿಕಾರಿಗಳು ಹಾಗೂ ಊರಿನ ಭಕ್ತರು ಉಪಸ್ಥಿತರಿದ್ದರು.