ತಾಜಾ ಸುದ್ದಿ

ಹೃದಯವಿದ್ರಾವಕ ಘಟನೆ; ಮಕ್ಕಳಿಬ್ಬರಿಗೆ ಬೆಂಕಿ ಹಚ್ಚಿ ತಾನೂ ಆತ್ಮಹತ್ಯೆಗೆ ಯತ್ನಿಸಿದ ತಾಯಿ; ಮಗು ಸಾವು

ಕೋಲಾರ: ಜಿಲ್ಲೆಯ ಮುಳಬಾಗಿಲು ಪಟ್ಟಣದ ಅಂಜನಾದ್ರಿ ಬೆಟ್ಟದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳಿಗೆ ಪೆಟ್ರೋಲ್‌ ಸುರಿದ ಸುಟ್ಟು ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಈ ಘಟನೆ ಒಂದು ಮಗು ಸತ್ತಿದ್ದರೆ, ಇನ್ನೊಂದರ ಸ್ಥಿತಿ ಗಂಭೀರವಾಗಿದೆ.ಜ್ಯೋತಿ ಎಂಬಾಕೆ ಈ ಬೆಟ್ಟಕ್ಕೆ ಬಂದಿದ್ದು, ತಾಯಿ ತನ್ನಿಬ್ಬರು ಮಕ್ಕಳ ಮೇಲೆ ಪೆಟ್ರೋಲ್‌ ಸುರಿದು ಸುಟ್ಟಿದ್ದಾಳೆ. ಇದರದಲ್ಲಿ ಒಂದು ಮಗು ಸಾವನ್ನಪ್ಪಿದ್ದು, ಮತ್ತೊಂದು ಮಗುವಿನ ಸ್ಥಿತಿ ಗಂಭೀರವಾಗಿದೆ. ತನ್ನನ್ನು ಸುಟ್ಟುಕೊಳ್ಳಲು ಧೈರ್ಯವಾಗದೆ ಕುಳಿತಿದ್ದ ಈಕೆಯನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸ್ಥಳಕ್ಕೆ ಮುಳಬಾಗಿಲು ಪೊಲೀಸರು ಭೇಟಿ ನೀಡಿದ್ದು, …

Read More »

ಮಣಿಪಾಲ: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ 40 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ

ಮಣಿಪಾಲ: ಮುಂಬೈಯಿಂದ ಉಡುಪಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ಬ್ಯಾಗ್ ನಲ್ಲಿದ್ದ 40 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ಡೈಮಂಡ್ ಆಭರಣಗಳನ್ನು ಕಳ್ಳರು ಕಳ್ಳತನ ಮಾಡಿರುವ ಘಟನೆ ಸಂಭವಿಸಿದೆ.ದೀಪಾ ರೈ (44) ಚಿನ್ನಾಭರಣ ಕಳೆದುಕೊಂಡ ಮಹಿಳೆ. ಮಹಾರಾಷ್ಟ್ರ ಮುಲುಂದು ವೈಶಾಲಿ ನಗರದ ದೀಪಾ ರೈ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ತಮ್ಮ ಮನೆಯಾದ ಕಟಪಾಡಿಗೆ ಡಿ.5ರಂದು ಅಕ್ಕ, ಭಾವ, ಅಮ್ಮ ಹಾಗೂ ತಂದೆಯೊಂದಿಗೆ ಮುಂಬೈಯ ಪನ್ ವೇಲಿನಿಂದ ಮತ್ಸ್ಯ ಗಂಧ ರೈಲಿನಲ್ಲಿ ಹೊರಟಿದ್ದರು.ತಮ್ಮ ಚಿನ್ನಾಭರಣಗಳನ್ನು 3 ಬ್ಯಾಗ್ ಗಳಲ್ಲಿ ಇರಿಸಿ, ಸೀರೆಯ ಮಧ್ಯ ಭಾಗದಲ್ಲಿ ಇಟ್ಟುಕೊಂಡಿದ್ದರು. …

Read More »

ಯುವ ಮತದಾರರ ಸಮಾವೇಶ: ಡಿ. 25ರಂದು ಉಡುಪಿಗೆ ಯೋಗಿ ಆದಿತ್ಯನಾಥ್‌

ಉಡುಪಿಯಲ್ಲಿ ಡಿ. 25ರಂದು ಕರ್ನಾಟಕ ಯುವ ಮತದಾರರ ಸಮಾವೇಶ ನಡೆಯಲಿದ್ದು, ಅದಕ್ಕೆ ಉತ್ತರಪ್ರದೇಶದ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ್‌ ಆಗಮಿಸಲಿದ್ದಾರೆ. ಎಲ್ಲ ಹೊಸ ಮತದಾರರು ಸಮಾವೇಶದಲ್ಲಿ ಭಾಗ ವಹಿಸಿ ಬಿಜೆಪಿಯೊಂದಿಗಿದ್ದೇವೆ ಎಂಬ ಸಂದೇಶವನ್ನು ನೀಡ ಬೇಕು ಎಂದು ಸಚಿವ ಸುನಿಲ್‌ ಕುಮಾರ್‌ ಹೇಳಿದರು. ಬೆಳ್ತಂಗಡಿಯಲ್ಲಿ ಮಂಗಳವಾರ ನಡೆದ ಬಿಜೆಪಿ ಪದಾಧಿಕಾರಿಗಳ ಸಭೆ ಹಾಗೂ ಪಕ್ಷಕ್ಕೆ ಸೇರ್ಪಡೆ ಕಾರ್ಯ ಕ್ರಮದಲ್ಲಿ ಮಾತನಾಡಿದ ಅವರು, ಉಳ್ಳಾಲವೂ ಸೇರಿದಂತೆ ಈ ವರ್ಷ ದ.ಕ. ಜಿಲ್ಲೆ ಮತ್ತು ಉಡುಪಿಯ ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಬೇಕೆಂದು ವಿಶೇಷ ತಂತ್ರಗಾರಿಕೆ ರೂಪಿಸಿಕೊಂಡು …

Read More »

ಮಂಗಳೂರು: ಕುಡುಕನ ಕೈಗೆ ಸಿಕ್ತು 10ಲಕ್ಷದ ಬಂಡಲ್;‌ ದುಡ್ಡು ಸಿಕ್ಕ ಅರ್ಧ ಗಂಟೆಯಲ್ಲೇ ಮತ್ತೆ ಭಿಕಾರಿಯಾದ ಕುಡುಕ

ಮಂಗಳೂರು: ಕುಡುಕನೋರ್ವನಿಗೆ ಅದೃಷ್ಟವೆಂಬಂತೆ ರಸ್ತೆ ಬದಿಯಲ್ಲಿ ಹತ್ತು ಲಕ್ಷ ರೂಪಾಯಿ ಸಿಕ್ಕಿದ್ದು ಆದರೆ ಈತನ ತಲೆಗೇರಿದ ಅಮಲಿನ ಪರಿಣಾಮ ಅಷ್ಟೂ ದುಡ್ಡು ಅರ್ಧ ಗಂಟೆಯಲ್ಲಿ ಪೊಲೀಸರ ಪಾಲಾದ ಘಟನೆ ಪಂಪ್ವೆಲ್ ನಲ್ಲಿ ನಡೆದಿದೆ. ಹಣ ಸಿಕ್ಕಿದ್ದೇ ತಡ ಮದ್ಯ ವ್ಯಸನಿಯಾಗಿದ್ದ ಶಿವರಾಜ್​​ ಹಣದ ಬ್ಯಾಗ್‌​ನಲ್ಲಿದ್ದ 1 ಸಾವಿರ ರೂ ತೆಗೆದು ಮದ್ಯ ಸೇವಿಸಿದ್ದಾರೆ. ನಂತರ ತನ್ನ ಜೊತೆಗಿದ್ದವರಿಗೂ ನೋಟಿನ ಕಂತೆ ನೀಡಿದ್ದಾರೆ. ಈ ವಿಷಯ ಕಂಕನಾಡಿ ಪೊಲೀಸರಿಗೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಹಣದ ಬ್ಯಾಗ್‌ ​ ಸಮೇತ ಶಿವರಾಜ್​ನನ್ನ ವಶಕ್ಕೆ ಪಡೆದಿದ್ದಾರೆ. ಘಟನೆಯ …

Read More »

ಮಂಗಳೂರು: ABHA CARD ಉಚಿತ ನೋಂದಾವಣಿ ಹಾಗೂ ಆಧಾರ್ ಲಿಂಕ್, ಮತದಾರರ ಸೇರ್ಪಡೆ ಕಾರ್ಯಕ್ರಮ

ಮಂಗಳೂರು : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಜಪ್ಪಿನಮೊಗರು ಹಾಗೂ ಲಯನ್ಸ್ ಕ್ಲಬ್, ಮಂಗಳಾದೇವಿ, ಮಂಗಳೂರು ವತಿಯಿಂದ ಆರೋಗ್ಯ ಭಾಗ್ಯ ABHA CARD ಉಚಿತ ನೋಂದಾವಣೆ ಕಾರ್ಯಕ್ರಮ ಹಾಗೂ ಆಧಾರ್ ಲಿಂಕ್, ಮತದಾರರ ಸೇರ್ಪಡೆ ಕಾರ್ಯಕ್ರಮ ಲಯನ್ಸ್ ಕ್ಲಬ್ ನಲ್ಲಿ ಜರಗಿತು. ಈ ಕಾರ್ಯಕ್ರಮದಲ್ಲಿ  ಲಯನ್ಸ್ ಕ್ಲಬ್ ಅಧ್ಯಕ್ಷ ರಾದ ಅನಿಲ್ ದಾಸ್ ಕಾರ್ಯದರ್ಶಿ ಮಲ್ಲಿಕಾ ಆಳ್ವಾ ನಾಗೇಂದ್ರ ಜೆಪ್ಪಿನ ಮುಗೇರು. ಉದಯ ಕೊಟ್ಟಾರಿ ಸುಭಾಷ್ ಅಡಪ್ಪ, ಗಣೇಶ್ ಶೆಟ್ಟಿ,  ಬಾಲಕೃಷ್ಣ ಶೆಟ್ಟಿ,  ಶ್ರೀಧರ್ ರಾಜ್ ಶೆಟ್ಟಿ,  ಲ/ ರಾಮ್ ಮೋಹನ್ ಆಳ್ವ,  ಮೊಹಮ್ಮದ್ …

Read More »

ಡಿ.9ರಿಂದ ಮಂಗಳೂರು-ಮುಂಬೈ ಮಧ್ಯೆ ವಿಶೇಷ ರೈಲು ಸಂಚಾರ ವ್ಯವಸ್ಥೆ

ಮಂಗಳೂರು: ಮುಂಬಯಿ- ಮಂಗಳೂರು ಮಧ್ಯೆ ಸಂಚರಿಸುವ ಪ್ರಯಾಣಿಕರ ಒತ್ತಡವನ್ನು ಗಮನಿಸಿ ಕೊಂಕಣ ರೈಲು ಮಾರ್ಗದಲ್ಲಿ ಮಂಗಳೂರು ಜಂಕ್ಷನ್‌ ಮತ್ತು ಮುಂಬಯಿಯ ಲೋಕಮಾನ್ಯ ತಿಲಕ್‌ ನಿಲ್ದಾಣದ ಮಧ್ಯೆ ವಿಶೇಷ ಸಾಪ್ತಾಹಿಕ ರೈಲು ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ನಂಬರ್‌ 01453 ಲೋಕಮಾನ್ಯ ತಿಲಕ್‌- ಮಂಗಳೂರು ಜಂಕ್ಷನ್‌ ಸಾಪ್ತಾಹಿಕ ವಿಶೇಷ ರೈಲು ಮುಂಬಯಿಯಿಂದ ಡಿ. 9, 16, 23, 30 ಮತ್ತು ಜನವರಿ 6 ರ ಶುಕ್ರವಾರಗಳಂದು ರಾತ್ರಿ 10.15ಕ್ಕೆ ಹೊರಟು ಮರುದಿನ ಸಂಜೆ 5.05ಕ್ಕೆ ಮಂಗಳೂರು ಜಂಕ್ಷನ್‌ ತಲಪಲಿದೆ. ನಂಬರ್‌ 01454 ಮಂಗಳೂರು ಜಂಕ್ಷನ್‌- ಲೋಕಮಾನ್ಯ ತಿಲಕ್‌ …

Read More »

BIGG NEWS : ಉಡುಪಿ ಜಿಲ್ಲೆಯಲ್ಲೂ ಧರ್ಮ ಸಂಘರ್ಷ : ಕೋಡಿಹಬ್ಬ, ಉಪ್ಪಂದಜಾತ್ರೆಗಳಲ್ಲಿ ಅನ್ಯಧರ್ಮೀಯರ ವ್ಯಾಪಾರ ನಿರ್ಬಂಧ

ಉಡುಪಿ : ಜಿಲ್ಲೆಯಲ್ಲೂ ಧರ್ಮ ಸಂಘರ್ಷ ಶುರುವಾಗಿದ್ದು, ಕುಂದಾಪುರ ತಾಲೂಕಿನಲ್ಲಿ ಎರಡು ಮಹತ್ವದ ಜಾತ್ರೆಗಳಲ್ಲಿ ಅನ್ಯ ಧರ್ಮೀಯ ವ್ಯಾಪಾರಿಗಳಿಗೆ ಅವಕಾಶ ನೀಡಬಾರದೆಂದು ಹಿಂದೂ ಸಂಘಟನೆಗಳು ಆಗ್ರಹಿಸಿದ್ದಾರೆ. ಜಿಲ್ಲೆಯಾದ್ಯಂತ ದಿನದಿಂದ ದಿನಕ್ಕೆ ಭಯೋತ್ಪಾದನೆ, ಲವ್ ಜಿಹಾದ್ ನಂತಹ ಪ್ರಕರಣ ಹೆಚ್ಚಿರುವ ಕಾರಣಕ್ಕೆ ಹಿಂದೂ ಸಂಘಟನೆಗಳು ಈ ರೀತಿಯ ಆಕ್ರೋಶ ವ್ಯಕ್ತಪಡಿಸಿದ್ದು, ಹಿಂದೂ ಸಂಘಟನೆಗಳ ಬೇಡಿಕೆಗೆ ವ್ಯವಸ್ಥಾಪನಾ ಸಮಿತಿ ಸಮ್ಮತಿಸುವ ಸಾಧ್ಯತೆಯಿದೆ ಹಾಗಾಗಿ ಜಿಲ್ಲೆಯ ಪ್ರಸಿದ್ದ ಕೋಟೇಶ್ವರದ ಕೋಡಿ ಹಬ್ಬ & ಉಪ್ಪಂದ ಜಾತ್ರೆಗಳು ಡಿಸೆಂಬರ್ 8 -9 ರಂದು ಶುರುವಾಗಲಿದ್ದು, ಈ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ …

Read More »

15 ವರ್ಷಗಳಿಂದ ಕಾದು ತನ್ನ ಸೇಡು ತೀರಿಸಿಕೊಂಡ ವ್ಯಕ್ತಿ. ಯಾವ ಸಿನಿಮಾಗೂ ಕಮ್ಮಿ ಇಲ್ಲ ಈ ಕಥೆ

ಲಕ್ನೋ: ಲಕ್ನೋದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ವ್ಯಕ್ತಿಯೊಬ್ಬ 15 ವರ್ಷಗಳ ಕಾಲ ಕಾದು ತನ್ನ ನೆರೆಯವನನ್ನು ಕೊಲ್ಲುವುದರೊಂದಿಗೆ ತನ್ನ ಸೇಡು ತೀರಿಸಿಕೊಂಡಿದ್ದಾನೆ. ಏನಿದು ಘಟನೆ? ರಾಮ್ ಜೀವನ್ ಲೋಧಿ(ಕೊಲೆಯಾದವನು) ಎಂಬಾತ 2007 ರಲ್ಲಿ ಶಿವ ಯಾದವ್(ಕೊಲೆ ಆರೋಪಿ)ನ ಕುಟುಂಬವನ್ನು ಸಾರ್ವಜನಿಕವಾಗಿ ಅವಮಾನಿಸಿದ ನಂತರ ಸೇಡು ತೀರಿಸಿಕೊಳ್ಳಲು ಯೋಜಿಸಿದ್ದ. ವರದಿಯ ಪ್ರಕಾರ, ಯಾದವ್ ಅವರ ಕುಟುಂಬದವರಾದ ಅವರ ಪತ್ನಿ ಮತ್ತು ತಾಯಿಯನ್ನು ಲೋಧಿ ಜಮೀನು ವಿವಾದದ ಕಾರಣದಿಂದ ಅವರನ್ನು ವಿವಸ್ತ್ರಗೊಳಿಸಿ ಸಾರ್ವಜನಿಕವಾಗಿ ಮೆರವಣಿಗೆ ಮಾಡಿದ್ದ. ಆಗ 26 ವರ್ಷದವನಾಗಿದ್ದ ಯಾದವ್ ಅವಮಾನವನ್ನು ಅಸಹಾಯಕತೆಯಿಂದ ನೋಡುತ್ತಿದ್ದನು ಮತ್ತು …

Read More »

ತಲೆ ಮೇಲೆ 20 ಕ್ಕೂ ಹೆಚ್ಚು ಬಾರಿ ಕಲ್ಲು ಎತ್ತಿಹಾಕಿ ವ್ಯಕ್ತಿಯ ಕೊಲೆ..! ಬೆಚ್ಚಿಬೀಳಿಸುವ ಭಯಾನಕ ಮರ್ಡರ್

ಬೆಂಗಳೂರು : ಬೆಂಗಳೂರಿನಲ್ಲಿ ರಣಭೀಕರ ಹತ್ಯೆಯೊಂದು ನಡೆದಿದ್ದು, ವ್ಯಕ್ತಿಯೊಬ್ಬನ ತಲೆ ಮೇಲೆ 20 ಕ್ಕೂ ಹೆಚ್ಚು ಬಾರಿ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಬೆಂಗಳೂರಿನ ಕೆ.ಪಿ. ಅಗ್ರಹಾರದಲ್ಲಿ ಹೆಣ್ಣಿನ ವಿಚಾರವಾಗಿ ಜಮಖಂಡಿ ಮೂಲದ ಮಂಜುನಾಥ್ ನನ್ನು ಮೂವರು ಮಹಿಳೆಯರು ಸೇರಿದಂತೆ 6 ಜನರ ತಂಡ ನಡು ರಸ್ತೆಯಲ್ಲೇ 20 ಕ್ಕೂ ಹೆಚ್ಚು ಬಾರಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಲಾಗಿದೆ. ಮಂಜುನಾಥ್ ನನ್ನು ಹತ್ಯೆ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕೆ.ಪಿ. ಅಗ್ರಹಾರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

Read More »

ಹೆಬ್ರಿ: ಆಟವಾಡುತ್ತಿದ್ದ 4ವರ್ಷದ ಬಾಲಕ ಸೆಗಣಿ ಗುಂಡಿಗೆ ಬಿದ್ದು ಸಾವು

ಹೆಬ್ರಿ: ತೋಟದಲ್ಲಿ ಆಟವಾಡುತ್ತಿದ್ದ 4ರ ಹರೆಯದ ಪುಟ್ಟ ಬಾಲಕ ಸೆಗಣಿ ಗುಂಡಿಗೆ ಬಿದ್ದು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಹೆಬ್ರಿ ತಾಲೂಕಿನ ಮುದ್ರಾಡಿಯ ಬಚ್ಚಪ್ಪು ಎಂಬಲ್ಲಿ ನಡೆದಿದೆ. ಜಾರ್ಖಂಡ್ ಮೂಲದ ಸೋಮೇಶ್ವರ ಓಕಾನ್ ಎಂಬವರ ಮುನೇಶ್ವರ ಎಂಬವನು ಮೃತಪಟ್ಟ ಬಾಲಕ. ಸೋಮೇಶ್ವರ ಓಕಾನ್ ಕಳೆದ 6 ವರ್ಷಗಳಿಂದ ತನ್ನ ಪತ್ನಿ ಮಗನ ಜತೆಗೆ ಬಚ್ಚಪ್ಪು ಎಂಬಲ್ಲಿನ ಆಂಟನಿಯವರ ತೋಟದಲ್ಲಿ ವಾಸವಿದ್ದು ಅಲ್ಲಿಯೇ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದರು. ಎಂದಿನಂತೆ ಭಾನುವಾರ ಕೆಲಸಕ್ಕೆ ರಜಾವಾಗಿದ್ದರಿಂದ ಸೋಮೇಶ್ವರನ 4 ವರ್ಷದ ಪುಟ್ಟ ಬಾಲಕ ಮುನೇಶ್ವರ ತೋಟದಲ್ಲಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಸೆಗಣಿಯ ಗುಂಡಿಗೆ …

Read More »

You cannot copy content of this page.