June 5, 2025
nadtikal samnana1 copy

ವೇಣೂರು, ಜೂ. 4: ಮೂಡುಕೋಡಿ ಗ್ರಾಮದ ನಡ್ತಿಕಲ್ಲುವಿನಲ್ಲಿ ಸಮಾಜ ಸೇವಾ ಉತ್ಸಾಹಿ ತರುಣವೃಂದ ಎಂಬ ನೂತನ ಸಂಘಟನೆಯನ್ನು ನಡ್ತಿಕಲ್ಲು ಶ್ರೀರಕ್ಷಾ ನಿಲಯದಲ್ಲಿ ಇಂದು (ಜೂ. 4) ಉದ್ಘಾಟಿಸಲಾಯಿತು.
ಉದ್ಘಾಟನೆಯ ಅಂಗವಾಗಿ ಅರ್ಹಬಡ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಉಚಿತ ಬರವಣಿಗೆ ಪುಸ್ತಕದ ವಿತರಣೆ ಮಾಡಲಾಯಿತು.

ಸಮಾಜ ಸೇವಾ ಉತ್ಸಾಹಿ ತರುಣವೃಂದ ಇದರ ಸ್ಥಾಪಕ ಅಧ್ಯಕ್ಷರಾಗಿ ರಂಜಿತ್ ಕುಲಾಲ್, ಕಾರ್ಯದರ್ಶಿ ಸುರೇಂದ್ರ ಕುಲಾಲ್ ಹಾಗೂ ಕೋಶಾಧಿಕಾರಿ ಮಮತಾ ರಂಜಿತ್ ಅವರನ್ನು ಆಯ್ಕೆ ಮಾಡಲಾಯಿತು. ಸಂದೇಶ್ ಬಿ.ಇ., ವಿಶ್ವಾಸ್ ಕುಲಾಲ್ ಕಾವೂರು, ಸುಕುಮಾರ್ ಕಾವೂರು, ನಾರಾಯಣ ಕುಲಾಲ್, ವಿದ್ಯಾರ್ಥಿಗಳಾದ ಸಾನಿಧ್ಯ ಕೊಕ್ರಾಡಿ, ಪ್ರಭಾ, ಜಿತೇಶ್, ಶ್ರೇಯಾ ಕೆ., ಶಶಾಂಕ್, ವೃಶಾಂಕ್, ಭೂಮಿಕಾ, ಸಾನ್ವಿ ಸಾತ್ವಿಕ್ ಮತ್ತಿತರರು ಉಪಸ್ಥಿತರಿದ್ದರು.

ಸನ್ಮಾನ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕ ಕೆ. ನಾರಾಯಣ ನಾಯಕ್ ಕರ್ಪೆ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು.

ಶ್ರೀಗುರು ಚೈತನ್ಯ ಸೇವಾ ಪ್ರತಿಷ್ಠಾನದ ಹೊನ್ನಯ್ಯ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು. ಸಮಾಜ ಸೇವಾ ಉತ್ಸಾಹಿ ತರುಣವೃಂದದ ಕೋಶಾಧಿಕಾರಿ ಶ್ರೀಮತಿ ಮಮತಾ ರಂಜಿತ್ ವಂದಿಸಿದರು.

About The Author

Leave a Reply

Your email address will not be published. Required fields are marked *

<p>You cannot copy content of this page.</p>