

ವೇಣೂರು, ಎ. 22: ಬಜಿರೆ ಗ್ರಾಮದ ಕಾರಣಿಕ ಕ್ಷೇತ್ರ ಮುದ್ದಾಡಿ ದೈವಸ್ಥಾನದಲ್ಲಿ ಎ. 23ರಿಂದ 24ರವರೆಗೆ ಜರಗುವ ವಾರ್ಷಿಕ ನೇಮೋತ್ಸವ ಹಾಗೂ ಧಾರ್ಮಿಕಸಭೆಗೆ ನಾಳೆ ಚಾಲನೆ ದೊರೆಯಲಿದೆ.

ಎ. 23ರಂದು ಬೆಳಿಗ್ಗೆ 10 ಗಂಟೆಗೆ ಕುಂಜೋಡಿ ಲಕ್ಷ್ಮೀನಾರಾಯಣ ಅಸ್ರಣ್ಣರ ಪೌರೋಹಿತ್ಯದಲ್ಲಿ ಶುದ್ಧಕಲಶ, ಕುಂಭ ಪ್ರತಿಷ್ಠೆ ಜರಗಲಿದ್ದು, ಸಂಜೆ ಗುತ್ತುಗಳಿಂದ ಶ್ರೀ ಕ್ಷೇತ್ರಕ್ಕೆ ದೈವಗಳ ಭಂಡಾರ ಬರಲಿದೆ. ಧ್ವಜಾರೋಹಣ, ಬಲಿ ಉತ್ಸವ ನಡೆದು, ರಾತ್ರಿ 8 ಗಂಟೆಯಿಂದ ಶ್ರೀ ಮಾರವಾಂಡಿ, ಶ್ರೀ ಕೊಡಮಣಿತ್ತಾಯ, ಶ್ರೀ ಮೈಸಂದಾಯ ಹಾಗೂ ಕಲ್ಕುಡ ಕಲ್ಲುರ್ಟಿ ದೈವಗಳ ನೇಮೋತ್ಸವ ಜರಗಲಿದೆ. ಎ. 24ರಂದು ಸಂಜೆ ಬಲಿ ಉತ್ಸವ ನಡೆದು, ಧಾರ್ಮಿಕ ಸಭೆ ನೆರವೇರಲಿದೆ. ಬಳಿಕ ಶ್ರೀ ಬೈದರ್ಕಳ ಮತ್ತು ಮಾಣಿಬಾಲೆ ನೇಮೋತ್ಸವ ಜರಗಲಿದೆ ಎಂದು ಕ್ಷೇತ್ರದ ಆಡಳಿತ ಮೊಕ್ತೇಸರರಾದ ಯಂ. ವಿಜಯರಾಜ ಅಧಿಕಾರಿ ಮಾರಗುತ್ತು ಹಾಗೂ ಸುರೇಶ್ ಆರಿಗ ಪೆರ್ಮಾಣುಗುತ್ತು ತಿಳಿಸಿದ್ದಾರೆ.