ಚಿತ್ರದುರ್ಗ: ಕಾರು-ಲಾರಿ ನಡುವೆ ಭೀಕರ ಅಪಘಾತ- ಮೂರು ತಿಂಗಳ ಶಿಶು‌ ಸೇರಿ ಬೆಂಗಳೂರಿನ ಮೂವರ ಸಾವು

ಚಿತ್ರದುರ್ಗ: ತಾಲ್ಲೂಕಿನ ವಿಜಯಪುರ ಗ್ರಾಮದ ಸಮೀಪದ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಮೂರು ತಿಂಗಳ ಶಿಶು ಸೇರಿ ಮೂವರು ಮೃತಪಟ್ಟಿದ್ದಾರೆ.

ಬೆಂಗಳೂರಿನ ಎಚ್.ಎಸ್.ಆರ್ ಬಡಾವಣೆ ನಿವಾಸಿಗಳಾದ ಜಾಕೀರ್ ಅಹಮ್ಮದ್ (60), ತಬಸೂಮ್ (28) ಹಾಗೂ ಮೂರು ತಿಂಗಳ ಹಯಾತ್ ಫಾತಿಮಾ ಮೃತಪಟ್ಟವರು. ನಯಾಜ್ (22), ಇಮ್ರಾನ್ ಖಾನ್ (32), ತಬ್ರೀಜ್ ಅಹಮ್ಮದ್ (27), ಸಬಾ (26) ಗಾಯಗೊಂಡಿದ್ದು, ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗೋವಾದಿಂದ ಬೆಂಗಳೂರಿಗೆ ಹೊರಟಿದ್ದ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ಮುಂದೆ ಸಾಗುತ್ತಿದ್ದ ಲಾರಿಗೆ ಅಪ್ಪಳಿಸಿದೆ. ಸ್ಥಳದಲ್ಲಿಯೇ ಮೂವರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ತಿಳಿಸಿದ್ದಾರೆ.

Check Also

ಬಂಟ್ವಾಳ: ಮನೆ ಕಿಟಕಿಯ ಸರಳುಗಳನ್ನು ಮುರಿದು ನಗ- ನಗದು ಕಳವು..!

ಬಂಟ್ವಾಳ: ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳರು ಮನೆಯ ಹಿಂಬದಿಯ ಕಿಟಕಿಯ 2 ಸರಳುಗಳನ್ನು ಮುರಿದು ಒಳ ಪ್ರವೇಶಿಸಿ ಲಕ್ಷಾಂತರ …

Leave a Reply

Your email address will not be published. Required fields are marked *

You cannot copy content of this page.