ವಿಟ್ಲ: ಮಂಟಮೆ ಸಹೋದರರ ಮಾಲಕತ್ವದಲ್ಲಿ ಶ್ರೀ ಮಂಟಮೆ ಕಾಂಪ್ಲೆಕ್ಸ್ ಕನ್ಯಾನದಲ್ಲಿ ಸೋಮವಾರ (ಫೆ.27) ಉದ್ಘಾಟನೆಗೊಂಡಿತು.
ಇದರ ಉದ್ಘಾಟನೆಯನ್ನು ಪರಮಪೂಜ್ಯ ಶ್ರೀ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಒಡಿಯೂರು,ಶ್ರೀ ಕಣಿಯೂರು ಶ್ರೀ ಶ್ರೀ ಶ್ರೀ ಮಹಾಬಲ ಸ್ವಾಮೀಜಿ ಶ್ರೀ ಕ್ಷೇತ್ರ ಕಣಿಯೂರು ಇವರ ದಿವ್ಯಹಸ್ತದಿಂದ ದೀಪ ಬೆಳಗಿಸುವ ಮೂಲಕ ಶುಭಾರಂಭ ಗೊಂಡಿತು.
ಈ ಸಂದರ್ಭದಲ್ಲಿ ಪಟ್ಲ ಮಹಾಬಲ ಶೆಟ್ಟಿ, ಅಮ್ಟೂರು ದಿನೇಶ್, ಲಿಂಗಪ್ಪ ಗೌಡ ಪನೆಯಡ್ಕ,ತಿಮ್ಮಣ್ಣ ಶೆಟ್ಟಿ ದಂಪತಿ, ಜೆಇ ಸತೀಶ್, ಪಧ್ಮನಾಭ ಶೆಟ್ಟಿ ಅನೆಯಾಲ ಗುತ್ತು, ರಘುರಾಮ ಶೆಟ್ಟಿ ಸಾಂತ್ಯಗಡದಗುತ್ತು, ನಾರಾಯಣ ಶೆಟ್ಟಿ ಗೆಣಸಿನ ಕುಮೇರು, ಕನ್ಯಾನ ಪಂಚಾಯತ್ ಸದಸ್ಯರಾದ ರಘುರಾಮ ಶೆಟ್ಟಿ , ಅಮ್ಟೂರು ದಿನೇಶ್, ಲಿಂಗಪ್ಪ ಗೌಡ ಪನೆಯಡ್ಕ ಸೇರಿದಂತೆ ಸಾವಿರಾರು ಮಂದಿ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
.