December 5, 2025
WhatsApp Image 2025-09-09 at 9.27.36 AM

ಬೆಳ್ತಂಗಡಿ: ಪಾಳು ಬಾವಿಯಲ್ಲಿ ಅಪರಿಚಿತ ವ್ಯಕ್ತಿ ಮೃತದೇಹ ಪತ್ತೆಯಾಗಿರುವ ಘಟನೆ ವಾಮದಪದವಿನಲ್ಲಿ ನಡೆದಿದೆ.

ಇಲ್ಲಿನ ಜನವಸತಿ ಇಲ್ಲದ ಜಾಗದ ಪಾಳು ಬಾವಿಯಲ್ಲಿ ಡಿ. 3ರಂದು ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಮಂಗಳೂರು ತಾಲೂಕಿನ ಉಳ್ಳಾಲ ಕಾಪಿಕಾಡ್ ನಿವಾಸಿ ಮನ್ವಿತ್ ಅವರು ತನ್ನ ತಂದೆಯ ಈ ಖಾಲಿ ನಿವೇಶನದ ಅಳತೆ ಮಾಡುವ ಉದ್ದೇಶದಿಂದ ಕಾರ್ಮಿಕರ ಮೂಲಕ ಪೊದೆ, ಹುಲ್ಲನ್ನು ಸ್ವಚ್ಛಗೊಳಿಸುತ್ತಿದ್ದಾಗ ಬಾವಿಯ ಒಳಗೆ ಮೃತದೇಹ ಕಂಡುಬಂದಿದೆ.

ಅಪರಿಚಿತ ವ್ಯಕ್ತಿಯು ಸುಮಾರು 50-60 ವರ್ಷ ಪ್ರಾಯದವನಾಗಿದ್ದು, ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಾಗಿದೆ.

About The Author

Leave a Reply

Your email address will not be published. Required fields are marked *

You cannot copy content of this page.