
ಉಡುಪಿ: ಬೈಲೂರು ಕೊರಂಗ್ರಪಾಡಿ ಗ್ರಾಮದ ಮಹಿಷಮರ್ದಿನಿ ದೇವಸ್ಥಾನದ ಬಳಿ ವಾಸವಿದ್ದ ರತನ್ ಕಾಮತ್ (16) ಎಂಬ ಯುವಕನು ಶುಕ್ರವಾರ ಸಂಜೆ 5 ಗಂಟೆ ಸುಮಾರಿಗೆ ಮನೆಯಿಂದ ಹೊರಗೆ ಹೋದವನು ವಾಪಾಸು ಬಾರದೆ ನಾಪತ್ತೆಯಾಗಿದ್ದಾನೆ.
ಲೈಟ್ ಗ್ರೀನ್ ಕಲರ್ ಪ್ಯಾಂಟ್/ಕ್ರೀಮ್ ಕಲರ್ ಪ್ಯಾಂಟ್ ಮತ್ತು ಕಪ್ಪು ಬಣ್ಣದ ಟಿ ಶರ್ಟ್ ಧರಿಸಿದ್ದು ಶಾಲಾ ಬ್ಯಾಗ್ ಹಾಕಿಕೊಂಡಿರುತ್ತಾನೆ. ಈತನ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ಮಹಿಳಾ ಪೊಲೀಸ್ ಠಾಣೆ, ನಂಬ್ರ 08202525599, ಕಂಟ್ರೋಲ್ ರೂಮ್ ನಂಬ್ರ:08202526444 ಗೆ ಮಾಹಿತಿ ನೀಡುವಂತೆ ಪ್ರಕಟಣೆ ತಿಳಿಸಿದೆ.
