ಮಂಗಳೂರು ತಾಲೂಕು ಮುತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಳವೂರು ದುರ್ಗಾಕೋಡಿ ಎಂಬಲ್ಲಿ ಸುಂದರಿಯವರ ಮನೆಗೆ ಗುಡ್ಡ ಜರಿದು ಮನೆ ಸಂಪೂರ್ಣ ಹಾನಿಯಾಗಿದೆ.ಸ್ಥಳಕ್ಕೆ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ವೈ ಭರತ್ ಶೆಟ್ಟಿ ಭೇಟಿ ನೀಡಿ ಸೂಕ್ತ ಪರಿಹಾರ ಒದಗಿಸಿವೆ ಭರವಸೆ ನೀಡಿದರು.
ಹಾನಿಗೊಳಗಾದ ಮನೆಯ ನಿರಾಶ್ರಿತರಿಗೆ ಬಾಡಿಗೆ ಮನೆಯ ವ್ಯವಸ್ಥೆಯನ್ನು ಮುತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರವೀಣ್ ಆಳ್ವ ಗುಂಡ್ಯ ಇವರು ಮಾಡಿದರು .
ಈ ಸಂಧರ್ಭದಲ್ಲಿ ಪಂಚಾಯತ್ ಸದಸ್ಯರಾದ ಜಗದೀಶ್ ದುರ್ಗಾಕೋಡಿ , ಸತೀಶ್ ಪೂಜಾರಿ ಬಳ್ಳಾಜೆ , ಮಾಲತಿ ,ಶಶಿಕಲಾ , ಎಡಪದವು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಮಹಾಬಲ ಸಾಲ್ಯಾನ್ , ಕೊಳವೂರು ಶಕ್ತಿ ಕೇಂದ್ರದ ಸದಸ್ಯ ಸದಾನಂದ ಶೆಟ್ಟಿ , ಪಕ್ಷದ ಮುಖಂಡರಾದ ರಮೇಶ್ ಅಟ್ಟೆಪದವು , ಪ್ರಶಾಂತ್ ಅಟ್ಟೆಪದವು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು .