ಬೆಳ್ತಂಗಡಿ : ಆಹಾರದಲ್ಲಿ ವಿಷವಿಕ್ಕಿರುವ ಪರಿಣಾಮ ಹತ್ತಕ್ಕೂ ಅಧಿಕ ಶ್ವಾನಗಳ ಮಾರಣ ಹೋಮ

ಬೆಳ್ತಂಗಡಿ : ಇಲ್ಲಿನ ಮುಂಡಾಜೆ ಗ್ರಾಮದ ಸೋಮಂತಡ್ಕದ ಅಗರಿ- ಹುರ್ತಾಜೆ ರಸ್ತೆಯಲ್ಲಿ ಕಟುಕರು ಆಹಾರದಲ್ಲಿ ವಿಷವಿಕ್ಕಿರುವ ಪರಿಣಾಮ ಅದನ್ನು ಸೇವಿಸಿದ 10ಕ್ಕಿಂತಲೂ ಅಧಿಕ ಸಾಕುನಾಯಿಗಳು ಹಾಗೂ ಬೀದಿನಾಯಿಗಳು ಮೃತಪಟ್ಟಿವೆ. ಇಲ್ಲಿನ ರಸ್ತೆಯುದ್ದಕ್ಕೂ ವಿಷ ಬೆರೆಸಿರುವ ಆಹಾರವನ್ನು ಅಲ್ಲಲ್ಲಿ ಹಾಕಲಾಗಿತ್ತು. ಇದನ್ನು ಸೇವಿಸಿರುವ ನಾಯಿಗಳು ಸತ್ತು ಬಿದ್ದಿವೆ. ತಡರಾತ್ರಿ ಈಸ್ಟರ್ ಹಬ್ಬದಿಂದ ತೆರಳುತ್ತಿದ್ದವರು ಇದನ್ನು ಗಮನಿಸಿ ತಕ್ಷಣ ಪಂಚಾಯತ್ ಅಧ್ಯಕ್ಷ ಗಣೇಶ್ ಬಂಗೇರವರ ಗಮನಕ್ಕೆ ತಂದಿದ್ದಾರೆ. ಪರಿಶೀಲನೆ ನಡೆಸಿದಾಗ ಅಲ್ಲಿನ ಕೆಲ ಮನೆಗಳ ಶ್ವಾನಗಳು ಸತ್ತಿರುವುದು ಕಂಡು ಬಂದಿದೆ. ಮೃತ ಶ್ವಾನಗಳ ಕಳೇಬರವನ್ನು ಪಂಚಾಯತ್ ವತಿಯಿಂದ ದಫನ ಮಾಡಲಾಯಿತು. ಎರಡು ವರ್ಷಗಳ ಹಿಂದೆಯೂ ಇದೇ ರೀತಿಯ ಘಟನೆ ಈ ಪರಿಸರದಲ್ಲಿ ನಡೆದಿತ್ತು ಎನ್ನಲಾಗುತ್ತಿದೆ.

Check Also

ಬಂಟ್ವಾಳ: ಮದ್ವೆಯಾದ ಎರಡೇ ದಿನಕ್ಕೆ ನವ ವಿವಾಹಿತೆ ಸಾವು, ಪತಿ ಗಂಭೀರ

ಬಂಟ್ವಾಳ: ನವ ದಂಪತಿಗಳಿಬ್ಬರು ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತ ಸಂಭವಿಸಿ ನವವಿವಾಹಿತೆ ಸಾವನ್ನಪ್ಪಿದ್ದು, ಪತಿ ಗಂಭೀರವಾಗಿ ಗಾಯಗೊಂಡ ಘಟನೆ ರಾಷ್ಟ್ರೀಯ …

Leave a Reply

Your email address will not be published. Required fields are marked *

You cannot copy content of this page.