March 27, 2025
maxresdefault

ಉಡುಪಿ: ಇತ್ತೀಚ್ಚಿಗೆ ಧಾರ್ಮಿಕ ಸಂಘರ್ಷಗಳು ಹೆಚ್ಚುತ್ತಿದ್ದು ಈ ನಡುವೆ ವ್ಯಾಪರಕ್ಕೂ ಧರ್ಮದ ರೋಗ ಅಂಟಿಸಲಾಗುತ್ತಿದೆ. ಈತನ್ಮಧ್ಯೆ ಉದ್ಯಾವರದ ಕುತ್ಪಾಡಿಯ ಜಾತ್ರೆಯಲ್ಲಿ ಅನ್ಯ ಧರ್ಮದವರಿಗೆ ಅವಕಾಶ ನೀಡಬೇಡಿ ಎಂದು ಬಂದ ಹಿಂದು ಕಾರ್ಯಕರ್ತರನ್ನು ಗ್ರಾಮಸ್ಥರು ಓಡಿಸಿದ ಘಟನೆ ವರದಿಯಾಗಿದೆ.

ಕುತ್ಪಾಡಿಯ ಮಾಂಗೋಡು ಶ್ರೀ ವಾಸುಕಿ ದೇವಸ್ಥಾನದಲ್ಲಿ ಪ್ರತಿ ವರ್ಷ ಎಲ್ಲ ಧರ್ಮೀಯರು ಅಂಗಡಿಯಿಡುವುದು ವಾಡಿಕೆ. ಈ ಜಾತ್ರೆಯಲ್ಲಿ ಸಾವಿರಾರು ಜನರು ಭಾಗವಹಿಸುತ್ತಾರೆ. ಸೌಹರ್ದದ ನೆಲೆವೀಡಾದ ಇಲ್ಲಿ ಅನ್ಯ ಧರ್ಮೀಯರಿಗೆ ಅವಕಾಶ ನೀಡಬಾರದು ಎಂದು ಬಂದ ಹಿಂದು ಕಾರ್ಯಕರ್ತರನ್ನು ವಾಪಸು ಕಳುಹಿಸಿ ಸುದ್ದಿಯಾಗಿದೆ.

ಹಿಂದೂ ಮುಖಂಡನೋರ್ವ ತನ್ನ ಬೆಂಬಲಿಗರೊಂದಿಗೆ ಆಕ್ಷೇಪ ವ್ಯಕ್ತಪಡಿಸಲು ಬಂದಾಗ ಈ ಘಟನೆ ವರದಿಯಾಗಿದೆ. ಇಂದು ಷಷ್ಠಿ‌ಮಹೋತ್ಸವದಲ್ಲಿ ಸಾವಿರಾರು ಮಂದಿ ಭಾಗವಹಿಸಲಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.