ಕಡಬ: ಜಾಗದ ವಿಚಾರದಲ್ಲಿ ನೆರೆಮನೆಯ ನಾಲ್ವರಿಂದ ಹಲ್ಲೆ

ಕಡಬ: ಜಾಗದ ವಿಚಾರಕ್ಕೆ ಸಂಬಂಧಿಸಿ ಪಕ್ಕದ ಮನೆಯವರ ಮೇಲೆ ಹಲ್ಲೆ ಮಾಡಿದ ಘಟನೆ ಕಡಬ ಠಾಣಾ ವ್ಯಾಪ್ತಿಯ ಕಲ್ಲುಗುಡ್ಡೆಯಲ್ಲಿ ನಡೆದಿದೆ.

ಆರ್ಲ ನಿವಾಸಿ, ಸೈನಿಕ ಅಝೀಝ್‍, ಪತ್ನಿ ಫೌಝಿಯಾ ಹಾಗೂ ಮಗ ಮತ್ತು ಇನ್ನೋರ್ವರು ಹಲ್ಲೆಗೊಳಗಾದವರು

ಕಲ್ಲುಗುಡ್ಡೆಯಲ್ಲಿರುವ ತಂದೆ ಮನೆಗೆ ಫೌಝಿಯಾ ಹೋಗಿದ್ದರು. ಈ ಸಂದರ್ಭದಲ್ಲಿ ನೆರೆಮನೆಯ ನಾಲ್ವರು ಜಾಗದ ವಿಚಾರದಲ್ಲಿ ಜಗಳ ತೆಗೆದಿದ್ದಾರೆ. ಮಾತಿಗೆ ಮಾತು ಬೆಳೆದು ಫೌಝಿಯಾ ಮೇಲೆ ನಾಲ್ವರು ಹಲ್ಲೆ ನಡೆಸಿದ್ದಾರೆ. ಈ ವೇಳೆ ಫೌಝಿಯಾ ಅವರ ತಂದೆ ಮೇಲೂ ಹಲ್ಲೆ ನಡೆದಿದೆ ಎಂದು ತಿಳಿದು ಬಂದಿದೆ. ಗಾಯಾಳುಗಳು ಕಡಬ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Check Also

ಉಡುಪಿ: ಅಂಬಾಗಿಲು ಹೆದ್ದಾರಿಯಲ್ಲಿ ಸರಕಾರಿ ಬಸ್ ಢಿಕ್ಕಿ ಹೊಡೆದು ವ್ಯಕ್ತಿ ಮೃತ್ಯು..!

ಉಡುಪಿಯಿಂದ ಸಂತೆಕಟ್ಟೆಗೆ ಸಾಗುವ ಹೆದ್ದಾರಿಯ ಅಂಬಾಗಿಲು ಜಂಕ್ಷನ್ ನಿಂದ ತುಸು ದೂರದಲ್ಲಿರುವ  ಬಿರಿಯಾನಿ ಸ್ಪಾಟ್  ಹೋಟೇಲ್ ಎದುರುಗಡೆ ರಸ್ತೆಯನ್ನು ದಾಟುತ್ತಿದ್ದ …

Leave a Reply

Your email address will not be published. Required fields are marked *

You cannot copy content of this page.