ಮಹಿಳಾ ಎಸ್ಐ, ಸರ್ಕಲ್​ ಇನ್ಸ್​ಪೆಕ್ಟರ್ ನಡುವೆ ಪ್ರೇಮ್‌ ಕಹಾನಿ ; ಮುಂದೆನಾಯ್ತು…

ಮಹಿಳಾ ಸಬ್​ ಇನ್ಸ್​ಪೆಕ್ಟರ್ ಹಾಗೂ ಸರ್ಕಲ್​ ಇನ್ಸ್​ಪೆಕ್ಟರ್ ನಡುವಿನ ಪ್ರೇಮ್‌ ಕಹಾನಿ ಪ್ರಕರಣ ತೆಲಂಗಾಣದ ವಾರಂಗಲ್​ನಲ್ಲಿ (Warangal) ಭಾರಿ ಚರ್ಚೆ ಹುಟ್ಟುಹಾಕಿದೆ. ಈ ವಿಷಯ ಗಮನಕ್ಕೆ ಬರುತ್ತಿದ್ದಂತೆ ಇಬ್ಬರನ್ನೂ ವಾರಂಗಲ್​ ಪೊಲೀಸ್​ ಕಮಿಷನರ್​ ರಂಗನಾಥ್​ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಅಮಾನತಾದ ಅಧಿಕಾರಿಗಳು ಗೆಸಿಗೊಂಡ ಠಾಣೆಯ ಸರ್ಕಲ್​ ಇನ್ಸ್​ಪೆಕ್ಟರ್​ ರಾಯಲ ವೆಂಕಟೇಶ್ವರಲು ಮತ್ತು ದಮೇರಾ ಪೊಲೀಸ್​ ಠಾಣೆಯ ಸಬ್​ ಇನ್ಸ್​ಪೆಕ್ಟರ್​ ಹರಿಪ್ರಿಯಾ ಎಂದು ವರದಿಯಾಗಿದೆ.

ಎಸ್​ಐ ಹರಿಪ್ರಿಯಾ ಅವರ ಮದುವೆ ಇತ್ತೀಚೆಗಷ್ಟೇ ಆಗಿದೆ. ಆದರೂ ಮೊದಲಿನಿಂದಲೂ ಪರಿಚಯವಿದ್ದ ಸಿಐ ವೆಂಕಟೇಶ್ವರಲು ಜೊತೆ ತಮ್ಮ ರೊಮ್ಯಾನ್ಸ್​ ಮುಂದುವರಿಸಿದ್ದರು. ಪತ್ನಿ ಹರಿಪ್ರಿಯಾ ವರ್ತನೆಯ ಬಗ್ಗೆ ಅನುಮಾನಗೊಂಡ ಗಂಡ, ಆಕೆಯ ವಾಟ್ಸ್​ಆಯಪ್​ ಚಾಟ್​ ಅನ್ನು ಗಮನಿಸಿದ್ದ. ಸಿಐ ಮತ್ತು ಎಸ್​ಐ ನಡುವೆ ತುಂಬಾ ಸಲುಗೆಯ ಚಾಟಿಂಗ್​ ನಡೆಯುತ್ತಿತ್ತು. ಇದನ್ನರಿತ ಹರಿಪ್ರಿಯಾ ಗಂಡ ವಾರಂಗಲ್​ ಕಮಿಷನರ್​ಗೆ ದೂರು ನೀಡಿದ್ದರು.

ದೂರು ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸ್​ ಕಮಿಷನರ್​ಗೆ ಸಿಐ ಮತ್ತು ಎಸ್​ಐ ನಡುವೆ ಲವ್ವಿಡವ್ವಿ ಇರುವುದು ತಿಳಿದಿದೆ. ತಕ್ಷಣವೇ ಇಬ್ಬರನ್ನು ಅಮಾನತು (Suspend) ಮಾಡುವ ಮೂಲಕ ಕ್ರಮ ಜರುಗಿಸಿದ್ದಾರೆ ಎಂದು ವರದಿಯಾಗಿದೆ.

Check Also

ಮಣಿಪಾಲ: ಮನೆಯೊಂದರ ಅಂಗಳದಲ್ಲಿ ಚಿರತೆ ಸಂಚಾರ..! ಸ್ಥಳೀಯರಲ್ಲಿ ಆತಂಕ

ಮಣಿಪಾಲ: ಉಡುಪಿ ನಗರದ ಮಣಿಪಾಲದ ಬಳಿಯ ಪೆರಂಪಳ್ಳಿಯ ಮನೆಯೊಂದರ ಅಂಗಳದಲ್ಲಿ ಶುಕ್ರವಾರ ರಾತ್ರಿ ಚಿರತೆ ಸಂಚಾರ ಕಂಡು ಬಂದಿದ್ದು, ಘಟನೆ …

Leave a Reply

Your email address will not be published. Required fields are marked *

You cannot copy content of this page.