ಬೆಳ್ತಂಗಡಿ: ಜಾಗದ ವಿಚಾರಕ್ಕೆ ಸಂಬಂದಿಸಿದಂತೆ ವ್ಯಕ್ತಿಯೋರ್ವರಿಗೆ ಅಣ್ಣನ ಮಗ ಮಾರಣಾಂತಿಕ ಹಲ್ಲೆ ನಡೆಸಿ ಜೀವಬೆದರಿಕೆಯೊಡ್ಡಿದ ಘಟನೆ ಮಲವಂತಿಗೆ ಗ್ರಾಮ ಬೆಳ್ತಂಗಡಿಯಲ್ಲಿ ನಡೆದಿದೆ. ಮಲವಂತಿಗೆ ಗ್ರಾಮ ಬೆಳ್ತಂಗಡಿ ನಿವಾಸಿ ಚಿನ್ನೇಗೌಡರಿಗೆ ಮತ್ತು ಅಣ್ಣನ ಮಗನಾದ ಆರೋಪಿ ಮಹೇಶ್ ಎಂಬಾತನಿಗೆ ಜಾಗದ ವಿಚಾರಕ್ಕೆ ಸಂಬಂದಿಸಿದಂತೆ ತಕರಾರಿದ್ದು, ದಿನಾಂಕ: 18.11.2023 ರಂದು ಬೆಳಿಗ್ಗೆ ಚಿನ್ನೇಗೌಡರು ಮಲವಂತಿಗೆ ಗ್ರಾಮದ ನಿಡ್ಲೇರಿ ಎಂಬಲ್ಲಿದ್ದಾಗ, ಆರೋಪಿ ಮಹೇಶ್ ಜೀಪಿನಲ್ಲಿ ಬಂದು ಜೀಪು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ಬೈದು ಅಲ್ಲೇ ಹತ್ತಿರದಲ್ಲಿದ್ದ ಕೋಲಿನಿಂದ ಬೆನ್ನಿಗೆ, ತೋಡೆ, ಕಾಲು, ಕೈಗಳಿಗೆ ತಲೆಗೆ ಹೊಡೆದುದಲ್ಲದೇ ಕೈಯಿಂದ ಕೆನ್ನೆಗೆ ಹೊಡೆದು, ಜೀವ ಬೆದರಿಕೆ ಒಡ್ಡಿ ಚರಂಡಿಗೆ ದೂಡಿ ಹಾಕಿರುತ್ತಾನೆ. ಘಟನೆಗೆ ಸಂಬಂಧಿಸಿದಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ, ಅ ಕ್ರ: 115/2023 ಕಲಂ; 504,323,324,506 ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
Check Also
ಶಿರಾಡಿಘಾಟ್ನಲ್ಲಿ ಮತ್ತೆ ಗುಡ್ಡ ಕುಸಿತ : ರಾಷ್ಟ್ರೀಯ ಹೆದ್ದಾರಿ ಬಂದ್, ಸಂಚಾರ ಸಂಪೂರ್ಣ ಸ್ಥಗಿತ..!
ಹಾಸನ: ಭಾರೀ ಮಳೆಗೆ ಸಕಲೇಶಪುರ ಎತ್ತಿನಹಳ್ಳದ ಸಮೀಪ ಏಕಾಏಕಿ ಗುಡ್ಡ ಕುಸಿದಿದ್ದು, ಮತ್ತೆ ಶಿರಾಡಿ ಘಾಟ್ನ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ವಾಹನ …