ಬೆಳ್ತಂಗಡಿ: ಜಾಗದ ವಿಚಾರವಾಗಿ ಅಣ್ಣನ ಮಗನಿಂದಲೇ ಮಾರಣಾಂತಿಕ ಹಲ್ಲೆ..!

ಬೆಳ್ತಂಗಡಿ: ಜಾಗದ ವಿಚಾರಕ್ಕೆ ಸಂಬಂದಿಸಿದಂತೆ ವ್ಯಕ್ತಿಯೋರ್ವರಿಗೆ ಅಣ್ಣನ ಮಗ ಮಾರಣಾಂತಿಕ ಹಲ್ಲೆ ನಡೆಸಿ ಜೀವಬೆದರಿಕೆಯೊಡ್ಡಿದ ಘಟನೆ ಮಲವಂತಿಗೆ ಗ್ರಾಮ ಬೆಳ್ತಂಗಡಿಯಲ್ಲಿ ನಡೆದಿದೆ. ಮಲವಂತಿಗೆ ಗ್ರಾಮ ಬೆಳ್ತಂಗಡಿ ನಿವಾಸಿ ಚಿನ್ನೇಗೌಡರಿಗೆ ಮತ್ತು ಅಣ್ಣನ ಮಗನಾದ ಆರೋಪಿ ಮಹೇಶ್ ಎಂಬಾತನಿಗೆ ಜಾಗದ ವಿಚಾರಕ್ಕೆ ಸಂಬಂದಿಸಿದಂತೆ ತಕರಾರಿದ್ದು, ದಿನಾಂಕ: 18.11.2023 ರಂದು ಬೆಳಿಗ್ಗೆ ಚಿನ್ನೇಗೌಡರು ಮಲವಂತಿಗೆ ಗ್ರಾಮದ ನಿಡ್ಲೇರಿ ಎಂಬಲ್ಲಿದ್ದಾಗ, ಆರೋಪಿ ಮಹೇಶ್ ಜೀಪಿನಲ್ಲಿ ಬಂದು ಜೀಪು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ಬೈದು ಅಲ್ಲೇ ಹತ್ತಿರದಲ್ಲಿದ್ದ ಕೋಲಿನಿಂದ ಬೆನ್ನಿಗೆ, ತೋಡೆ, ಕಾಲು, ಕೈಗಳಿಗೆ ತಲೆಗೆ ಹೊಡೆದುದಲ್ಲದೇ ಕೈಯಿಂದ ಕೆನ್ನೆಗೆ ಹೊಡೆದು, ಜೀವ ಬೆದರಿಕೆ ಒಡ್ಡಿ ಚರಂಡಿಗೆ ದೂಡಿ ಹಾಕಿರುತ್ತಾನೆ. ಘಟನೆಗೆ ಸಂಬಂಧಿಸಿದಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ, ಅ ಕ್ರ: 115/2023 ಕಲಂ; 504,323,324,506 ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Check Also

ಉಳ್ಳಾಲ: ನಾಪತ್ತೆಯಾಗಿದ್ದ ವ್ಯಕ್ತಿ ಬಾವಿಯಲ್ಲಿ ಶವವಾಗಿ ಪತ್ತೆ

ಉಳ್ಳಾಲ: ನಾಪತ್ತೆಯಾಗಿದ್ದ ಅವಿವಾಹಿತ ವ್ಯಕ್ತಿಯ ಮೃತದೇಹ ಪಕ್ಕದ ಪಾಳು ಬಿದ್ದ ಬಾವಿಯಲ್ಲಿ ಇಂದು ಪತ್ತೆಯಾದ ಘಟನೆ ಕೊಲ್ಯ ,ಕುಜುಮಗದ್ದೆಯಲ್ಲಿ ನಡೆದಿದೆ. …

Leave a Reply

Your email address will not be published. Required fields are marked *

You cannot copy content of this page.