![](https://thrishulnews.com/wp-content/uploads/2024/03/WhatsApp-Image-2024-03-12-at-11.54.26-AM.jpeg)
ವೇಣೂರು, ಎ. 30: ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಕ್ಷಿತ್ ಶಿವರಾಮ್ ಪರ ವೇಣೂರು ಗ್ರಾ.ಪಂ. ವ್ಯಾಪ್ತಿಯ ಬಜಿರೆ ಗ್ರಾಮದಲ್ಲಿ ಕೈ ಕಾರ್ಯಕರ್ತರು ಪ್ರಚಾರದ ಫೀಲ್ಡ್ಗೆ ಇಳಿದಿದ್ದಾರೆ.
![](https://thrishulnews.com/wp-content/uploads/2023/04/shridevi-advt-1.jpg)
ಮುದ್ದಾಡಿ ದೈವಸ್ಥಾನದ ಬಳಿ ಒಟ್ಟು ಸೇರಿರುವ ಕೈ ಕಾಯಕರ್ತರ ಪಡೆ ಬಜಿರೆ ಗ್ರಾಮದ ವಿವಿಧ ಬ್ಲಾಕ್ಗಳಲ್ಲಿ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದು, ಅಭ್ಯರ್ಥಿ ಸೇವಾ ಕಾರ್ಯ ಮತ್ತು ಕಾಂಗ್ರೆಸ್ ಗ್ಯಾರಂಟಿ ಘೋಷಣೆಗಳ ಬಗ್ಗೆ ಮನೆಮನೆಗೆ ತೆರಳಿ ತಿಳಿಸುವ ಕಾರ್ಯದಲ್ಲಿ ನಿರತರಾಗಿರುವುದು ಕಂಡು ಬಂದಿದೆ.