ಬಡಕೋಡಿ-ಕಾಶಿಪಟ್ಣ ರಸ್ತೆಅಪಾಯಕಾರಿ ವಿದ್ಯುತ್ ಕಂಬದ ಸ್ಥಳಾಂತರಕ್ಕೆ ಆಗ್ರಹ

ಹೊಸಂಗಡಿ, ಎ. 28: ಇಲ್ಲಿಯ ಬಡಕೋಡಿಯಿಂದ ಕಾಶಿಪಟ್ಣ ಸಂಪರ್ಕ ರಸ್ತೆಯ ಬದಿಯಲ್ಲಿ ಅಪಾಯಕಾರಿ ವಿದ್ಯುತ್ ಕಂಬವೊಂದು ವಾಹನ ಸಂಚಾರಕ್ಕೆ ಅಡಚಣೆಯಾಗಿದ್ದು, ಸ್ಥಳಾಂತರಿಸುವ ಅಗತ್ಯವಿದೆ.


ರಸ್ತೆ ಅಗಲೀಕರಣದ ವೇಳೆ ವಿದ್ಯುತ್ ಕಂಬ ಸ್ಥಳಾಂತರ ಮಾಡಿಲ್ಲ. ಈಗಾಗಿ ರಸ್ತೆಯ ಡಾಮಾರಿಗೆ ತಾಗಿಕೊಂಡೇ ಕಂಬ ಇದ್ದು, ರಾತ್ರಿವೇಳೆಯಲ್ಲಂತೂ ತುಂಬಾ ಅಪಾಯ ತದ್ದೊಡ್ಡಿದೆ. ಅಲ್ಲದೆ ಬುಡದಲ್ಲಿ ಪೊದೆ ಆವರಿಸಿ ಸುಗಮ ಸಂಚಾರಕ್ಕೆ ಅಡಚಣೆ ಆಗಿದ್ದು, ಮೆಸ್ಕಾಂ ಇಲಾಖೆ ಶೀಘ್ರ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕಿದೆ. ಈ ಬಗ್ಗೆ ರೂರಲ್‌ನ್ಯೂಸ್ ಎಕ್ಸ್‌ಪ್ರೆಸ್ ವೇಣೂರು ಮೆಸ್ಕಾಂ ಜೆ.ಇ. ಗಣೇಶ್ ನಾಯ್ಕ್ ಅವರನ್ನು ಮಾತನಾಡಿಸಿದ್ದು, ಸ್ಥಳಪರಿಶೀಲಿಸಿ ಶೀಘ್ರ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.

Check Also

ಉಡುಪಿ: ಪ್ರೇಯಸಿಯೊಂದಿಗೆ ವಾಗ್ವಾದ- ಅರ್ಧದಾರಿಯಲ್ಲಿ ಬಸ್ ಬಿಟ್ಟು ಹೋದ ಚಾಲಕ

ಉಡುಪಿ:  ಖಾಸಗಿ ಬಸ್ ಚಾಲಕನೊಬ್ಬ ತನ್ನ ಪ್ರೇಯಸಿಯೊಂದಿಗೆ ವಾಗ್ವಾದಕ್ಕಿಳಿದು ಬಸ್ಸನ್ನು ಅರ್ಧದಾರಿಯಲ್ಲಿ ನಿಲ್ಲಿಸಿ ಹೋದ ವಿಚಿತ್ರ ಘಟನೆ ಉಡುಪಿಯಲ್ಲಿ ನಡೆದಿದೆ. …

Leave a Reply

Your email address will not be published. Required fields are marked *

You cannot copy content of this page.