May 28, 2025 2:54:45 AM
gundu

ಆರಂಬೋಡಿ, ಜೂ. 4: ವೇಣೂರು ಪತಂಜಲಿ ಪುನರ್ನವ ಮಳಿಗೆಯ ರಾಮಚಂದ್ರ ನಾಯಕ್‌ರವರ ಮೊಮ್ಮಗ, ನಾಗೇಶ್ ನಾಯಕ್ ಮತ್ತು ಸ್ವಾತಿ ನಾಗೇಶ್ ನಾಯಕ್ ದಂಪತಿಯ ಪುತ್ರ ಮಾ| ವಿಘ್ನೇಶ್ ಬ್ರಹ್ಮೋಪದೇಶಯ ಪ್ರಯುಕ್ತ ಗುಂಡೂರಿಯ ಶ್ರೀಗುರು ಚೈತನ್ಯ ಸೇವಾಶ್ರಮದ ಆಶ್ರಮವಾಸಿಗಳಿಗೆ ಸಿಹಿಯೂಟದ ವ್ಯವಸ್ಥೆ ಕಲ್ಪಿಸಿ ಧನ್ಯತೆ ಮೆರೆದಿದ್ದಾರೆ.

ವಟುವಿನ ಹೆತ್ತವರಾದ ನಾಗೇಶ್ ನಾಯಕ್ ಮತ್ತು ಸ್ವಾತಿ ನಾಗೇಶ್ ನಾಯಕ್ ಅವರು ಆಶ್ರಮವಾಸಿಗಳಿಗೆ ಸಿಹಿಯೂಟ ಬಡಿಸಿದರು.

ಟ್ರಸ್ಟ್‌ನಿಂದ ಪ್ರತಿಭಾ ಪುರಸ್ಕಾರ
ದ್ವಿತೀಯ ಪಿಯುಸಿಯಲ್ಲಿ ಶೇ. ೯೩ ಅಂಕವನ್ನು ಪದವಿ ಶಿಕ್ಷಣಕ್ಕೆ ಪ್ರವೇಶ ಪಡೆದಿರುವ ಪಡೆದ ಬಜಿರೆ ಗ್ರಾಮದ ಮಿಯಲಾಜೆ ನಿವಾಸಿ ಸೇಸಪ್ಪ ಪೂಜಾರಿ ಮತ್ತು ವಿನೋದಾ ದಂಪತಿಗಳ ಪುತ್ರಿ ಕು| ಅರ್ಪಿತಾ ಅವರಿಗೆ ಶ್ರೀಗುರು ಚೈತನ್ಯ ಸೇವಾ ಪ್ರತಿಷ್ಠಾನ ಚಾರಿಟೇಬಲ್ ಟ್ರಸ್ಟ್ ವತಿಯಿಂದ ರೂ. ಐದು ಸಾವಿರ ಮೊತ್ತದ ಪ್ರತಿಭಾ ಪುರಸ್ಕಾರದ ಚೆಕ್ಕನ್ನು ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಸೇವಾಶ್ರಮದ ಅಭಿವೃದ್ಧಿ ಸಮಿತಿ ಸದಸ್ಯ ಪ್ರವೀಣ್ ಆಚಾರ್ಯ ನೇರಳಪಲ್ಕೆ, ಸವಿತಾ ನಾಯಕ್, ಸಂಜೀವ ನಾಯಕ್, ವೈಭವ ನಾಯಕ್, ಪ್ರಮೋದ್ ಶೆಟ್ಟಿ ಸಿರಿಮನೆ ವೇಣೂರು, ಶ್ರೀಮತಿ ಸಹನಾ ಭಟ್, ಸದಾನಂದ ದೇವಾಡಿಗ, ಸತೀಶ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶ್ರೀಗುರು ಚೈತನ್ಯ ಸೇವಾ ಪ್ರತಿಷ್ಠಾನದ ಹೊನ್ನಯ್ಯ ಕಾಟಿಪಳ್ಳ ಅವರು ನಿರೂಪಿಸಿ, ಆಗಮಿಸಿದ ಅತಿಥಿ ಗಣ್ಯರಿಗೆ ಅಭಿನಂದನೆ ಸಲ್ಲಿಸಿದರು.

About The Author

Leave a Reply

Your email address will not be published. Required fields are marked *

<p>You cannot copy content of this page.</p>