ಉಡುಪಿ: ಲಕ್ಷಾಂತರ ರೂ. ಹಣ ಪಡೆದು ನಕಲಿ ವೀಸಾ ನೀಡಿ ವಂಚಿಸಿರುವ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಮ್ಮಾಡಿ ಗ್ರಾಮದ ಜೋಸೆಫ್ ಡಿಸೋಜ ಎಂಬವರ ಮಗ ಪ್ರಜ್ವಲ್ ಡಿಸೋಜ ವಿದೇಶದಲ್ಲಿ ಉದ್ಯೋಗಕ್ಕೆ ಹೋಗುವ ನಿಟ್ಟಿನಲ್ಲಿ ರಾಬರ್ಟ್ ವಿಲ್ಸನ್ ಎಂಬವರನ್ನು ಸಂಪರ್ಕಿಸಿ ವೀಸಾ ಪಡೆಯುವ ಬಗ್ಗೆ ಮಾತುಕತೆ ನಡೆಸಿದ್ದರು. ಆ ಸಮಯ ರಾಜೇಶ್ ಎಂಬಾತನು ವೀಸಾ ಮಾಡಿಸಿ ಕೊಡುವುದಾಗಿ ಹೇಳಿದ್ದನು. ಅದರಂತೆ ವೀಸಾ ಮಾಡಿಸಿ ಕೊಡಲು ಅನಿತಾ ಎಂಬಾಕೆಗೆ ಜೋಸೇಫ್ ಒಟ್ಟು 1,17000ರೂ. ಹಣ ಪಾವತಿಸಿದ್ದರು. ನಂತರ ಆರೋಪಿಗಳು ವಿಸಿಟಿಂಗ್ ವೀಸಾವನ್ನು ಕಳುಹಿಸಿದ್ದು, ಆ ವೀಸಾ ಪಡೆದು ಪ್ರಜ್ವಲ್ ಡಿಸೋಜ ವಿದೇಶಕ್ಕೆ ಹೋಗಲು ಮುಂಬೈ ವಿಮಾನ ನಿಲ್ದಾಣಕ್ಕೆ ಹೋಗಿದ್ದರು. ಅಲ್ಲಿ ಅಧಿಕಾರಿಗಳು ವೀಸಾವನ್ನು ಪರಿಶೀಲಿಸಿದಾಗ ನಕಲಿ ವೀಸಾ ಎಂದು ಪರಿಗಣಿಸಿ ಪ್ರಜ್ವಲ್ನನ್ನು ವಾಪಾಸ್ಸು ಕಳುಹಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
Check Also
ಉಳ್ಳಾಲ: ನಾಪತ್ತೆಯಾಗಿದ್ದ ವ್ಯಕ್ತಿ ಬಾವಿಯಲ್ಲಿ ಶವವಾಗಿ ಪತ್ತೆ
ಉಳ್ಳಾಲ: ನಾಪತ್ತೆಯಾಗಿದ್ದ ಅವಿವಾಹಿತ ವ್ಯಕ್ತಿಯ ಮೃತದೇಹ ಪಕ್ಕದ ಪಾಳು ಬಿದ್ದ ಬಾವಿಯಲ್ಲಿ ಇಂದು ಪತ್ತೆಯಾದ ಘಟನೆ ಕೊಲ್ಯ ,ಕುಜುಮಗದ್ದೆಯಲ್ಲಿ ನಡೆದಿದೆ. …