ಮೂಡುಕೋಡಿ: ಪ್ರಚಾರಕಾರ್ಯದಲ್ಲಿ ನಿರತರಾದ ಕಮಲ ಪಡೆ

ವೇಣೂರು, ಎ. 30: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜರವರ ಪರ ಮೂಡುಕೋಡಿಯಲ್ಲಿ ಕಮಲ ಪಡೆಯ ಅಬ್ಬರದ ಪ್ರಚಾರಕಾರ್ಯ ಮುಂದುವರಿದಿದೆ.

ಇಂದೂ ಕೂಡಾ ಕಾರ್ಯಕರ್ತರು ಜತೆಯಾಗಿ ಗ್ರಾಮದಲ್ಲಿ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದರು.

ಸುಂದರ ಹೆಗ್ಡೆ, ಹರೀಶ್ ಪಿ.ಎಸ್. ಹಾಗೂ ಉಮೇಶ್ ನಡ್ತಿಕಲ್ಲು ಅವರ ಸಾರಥ್ಯದಲ್ಲಿ ಮನೆಮನೆಗೆ ಭೇಟಿ ನೀಡಿದ ಕಮಲ ಪಡೆ ಹರೀಶ್ ಪೂಂಜರು ಅನುಷ್ಠಾನಗೊಳಿಸಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮನವರಿಕೆ ಮಾಡುತ್ತಿರುವುದು ಕಂಡು ಬಂತು.

ಅಲ್ಲದೆ ಹಲವು ಯೋಜನೆಗಳ ಬಗ್ಗೆ ಅನುಷ್ಠಾನಿಸುವ ಭರವಸೆಯನ್ನು ಕಾರ್ಯಕರ್ತರು ಜನರಿಗೆ ತಿಳಿಸುತ್ತಿದ್ದಾರೆ.

Check Also

ಉಳ್ಳಾಲ ಬೀಚ್ ನಲ್ಲಿ ಮರಳಿನ‌ ಆಕೃತಿ ಮೂಲಕ ಮತದಾನ ಜಾಗೃತಿ

ಉಳ್ಳಾಲ: ದಿನಾಂಕ 19-04-2024 ಉಳ್ಳಾಲ ಬೀಚ್ ನಲ್ಲಿ ತಾಲೂಕು ಪಂಚಾಯತ್ ಉಳ್ಳಾಲ ಹಾಗೂ ಉಳ್ಳಾಲ ನಗರ ಸಭೆ, ಕೋಟೆಕಾರ್ ಪಟ್ಟಣ …

Leave a Reply

Your email address will not be published. Required fields are marked *

You cannot copy content of this page.