ವೇಣೂರು, ಎ. 30: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜರವರ ಪರ ಮೂಡುಕೋಡಿಯಲ್ಲಿ ಕಮಲ ಪಡೆಯ ಅಬ್ಬರದ ಪ್ರಚಾರಕಾರ್ಯ ಮುಂದುವರಿದಿದೆ.
ಇಂದೂ ಕೂಡಾ ಕಾರ್ಯಕರ್ತರು ಜತೆಯಾಗಿ ಗ್ರಾಮದಲ್ಲಿ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದರು.
ಸುಂದರ ಹೆಗ್ಡೆ, ಹರೀಶ್ ಪಿ.ಎಸ್. ಹಾಗೂ ಉಮೇಶ್ ನಡ್ತಿಕಲ್ಲು ಅವರ ಸಾರಥ್ಯದಲ್ಲಿ ಮನೆಮನೆಗೆ ಭೇಟಿ ನೀಡಿದ ಕಮಲ ಪಡೆ ಹರೀಶ್ ಪೂಂಜರು ಅನುಷ್ಠಾನಗೊಳಿಸಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮನವರಿಕೆ ಮಾಡುತ್ತಿರುವುದು ಕಂಡು ಬಂತು.
ಅಲ್ಲದೆ ಹಲವು ಯೋಜನೆಗಳ ಬಗ್ಗೆ ಅನುಷ್ಠಾನಿಸುವ ಭರವಸೆಯನ್ನು ಕಾರ್ಯಕರ್ತರು ಜನರಿಗೆ ತಿಳಿಸುತ್ತಿದ್ದಾರೆ.