Recent Posts

ಪ್ರಧಾನಿ ನರೇಂದ್ರ ಮೋದಿಯವರ ಶತಾಯುಷಿ ತಾಯಿ ಹೀರಾ ಬೇನ್ ನಿಧನ: ಇಂದು ಗಾಂಧಿನಗರದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ

ಅಹಮದಾಬಾದ್: ಇಲ್ಲಿನ ಯು ಎಸ್ ಮೆಹ್ತಾ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದಾಗಿ ಇಂದು ಪ್ರಧಾನಿ ನರೇಂದ್ರ ಮೋದಿಯವರ ಶತಾಯುಷಿ ತಾಯಿ ಹೀರಾ ಬೇನ್ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಇಂತಹ ಅವರ ಪಾರ್ಥೀವ ಶರೀರವನ್ನು ಅಹಮದಾಬಾದ್ ನ ಗಾಂಧಿನಗರದಲ್ಲಿರುವಂತ ರುದ್ರ ಭೂಮಿಯಲ್ಲಿ ಇಂದು ಅಂತ್ಯಕ್ರಿಯೆ ನೆರವೇರಲಿದೆ.   ಈ ಕುರಿತು ಕುಟುಂಬದ ಮೂಲಗಳಿಂದ ಮಾಹಿತಿ ನೀಡಲಾಗಿದ್ದು, ಗುಜರಾತ್ ನ ಅಹಮದಾಬಾದ್ ನಲ್ಲಿರುವಂತ ಗಾಂಧಿನಗರದಲ್ಲಿನ ಸೆಕ್ಟರ್ 30ರ ಸ್ಮಶಾನದಲ್ಲಿ ತಮ್ಮ ತಾಯಿ ಹೀರಾ ಬೇನ್ ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆ ನೆರವೇರಿಸಲಾಗುವುದಾಗಿ ಹೇಳಿದೆ. ಅಂದಹಾಗೇ ಪುತ್ರ ಪಂಕಜ್ ಮೋದಿಯವರ ಮನೆಯ …

Read More »

ಕೋಟೆಕಾರು ಪಂಚಾಯತ್ ಬಿಲ್ಡಿಂಗ್ ಎದುರುಗಡೆ ಬಸ್ಸು ನಿಲುಗಡೆಗೆ ನಾಗರಿಕರ ಒತ್ತಾಯ

ಕೋಟೆಕಾರು ಬೀರಿ ಉಳ್ಳಾಲ ತಾಲೂಕಿನ ಬೆಳೆಯುತ್ತಿರುವ ಪ್ರದೇಶ ಜನವಸತಿ ಪ್ರದೇಶವಾಗಿರುವ ಇಲ್ಲಿ ಹಲವಾರು ಖ್ಯಾತ ಶಿಕ್ಷಣ ಸಂಸ್ಥೆ ಹಾಗೂ ಧಾರ್ಮಿಕ ಶ್ರದ್ಧಾ ಕೇಂದ್ರಗಳಿವೆ. ಮಂಗಳೂರು-ಕೇರಳ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 66 ರ ಪ್ರಮುಖ ಜಂಕ್ಷನ್‌ಗಳಲ್ಲಿ ಕೋಟೆಕಾರು ಬೀರಿ ಜಂಕ್ಷನ್ ಕೂಡಾ ಒಂದು. ಕೋಟೆಕಾರು ಬೀರಿ ಜಂಕ್ಷನ್‌ನಿಂದ ದೇರಳಕಟ್ಟೆಗೆ ಮಾಡೂರು ಮೂಲಕ ರಸ್ತೆ ಸಂಪರ್ಕವಿರುವುದರಿಂದ ಇಲ್ಲಿ ದಿನನಿತ್ಯ ಸಾವಿರಾರು ವಾಹನ ಸಂಚರಿಸುತ್ತಿದ್ದು, ಹಾಗೂ ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ರಸ್ತೆ ವಿನ್ಯಾಸದಿಂದಾಗಿ ಕೋಟೆಕಾರು ಬೀರಿ ಜಂಕ್ಷನ್ ಅಪಘಾತ ವಲಯವಾಗಿದೆ. ಇಲ್ಲಿ ಅಪಘಾತದಿಂದಾಗಿ ನೂರಾರು ಜನರು ಮರಣ ಹೊಂದಿರುವುದಲ್ಲದೆ …

Read More »

ಸಾಂತಾ ಕ್ಲಾಸ್ ವೇಷಧರಿಸಿ ಕಾಂತಾರ ಸಿನಿಮಾದಂತೆ ಪಂಜುರ್ಲಿ ದೈವದ ಅಣುಕಿಸುವ ವಿಡಿಯೋ ವೈರಲ್

ಉಡುಪಿ : ಸಾಂತಾ ಕ್ಲಾಸ್ ವೇಷ ಧರಿಸಿ ಕಾಂತಾರ ಸಿನೆಮಾದಲ್ಲಿನ ಪಂಜುರ್ಲಿ ದೈವವನ್ನು ಅಣಿಕಿಸುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರಿ ಆಕ್ರೋಶ ವ್ಯಕ್ತವಾಗಿದೆ. ಕ್ರಿಸ್ಮಸ್ ಹಿನ್ನಲೆಯಲ್ಲಿ ಮನೆಮನೆಗೆ ಸಾಂತಾಕ್ಲಾಸ್ ವೇಷದಲ್ಲಿ ಭೇಟಿ ನೀಡುವ ಸಂದರ್ಭದ ಈ ವಿಡಿಯೋ ಮಾಡಲಾಗಿದ್ದು, ಸಾಂತಾಕ್ಲಾಸ್ ವೇಷಧಾರಿ ಕಾಂತಾರ ಚಲನಚಿತ್ರದಲ್ಲಿನ ದೃಶ್ಯದಂತೆಯೇ ದೈವದ ಅನುಕರಣೆ ಮಾಡಿದ್ದಾನೆ . ಸದ್ಯ ವಿಡಿಯೋ ಕುರಿತು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಸಾಂತಾಕ್ಲಾಸ್ ವೇಷದಲ್ಲಿ ದೈವ ನಿಂದನೆ ಮಾಡಲಾಗಿದ್ದು, ಕರಾವಳಿಯ ದೈವಾರಾಧನೆ ಕುರಿತ ಯಾವುದೇ ಹಾಸ್ಯ ಸಹಿಸುದಿಲ್ಲಾ, ಇದು ಅಕ್ಷೇಪಾರ್ಹವಾಗಿದ್ದು, …

Read More »

You cannot copy content of this page.