ಬೆಳ್ತಂಗಡಿ: ಮುಸ್ಲಿಂ ಯುವಕನೊಂದಿಗೆ ಸಲುಗೆಯಿಂದ ಇಂದ ಹಿಂದೂ ವಿದ್ಯಾರ್ಥಿನಿ ಡಿಬಾರ್

ಬೆಳ್ತಂಗಡಿ: ಸಾಮಾಜಿಕ ಜಾಲತಾಣದಲ್ಲಿ ಪದೇ ಪದೇ ಲವ್‌ ಜಿಹಾದ್‌ ಪ್ರಕರಣಗಳ ಬೆಳಕಿಗೆ ಬರುತ್ತಿದೆ. ಅಂತೆಯೇ ಬೆಳ್ತಂಗಡಿ ಖಾಸಗಿ ಕಾಲೇಜೊಂದರ ಹಿಂದೂ ವಿದ್ಯಾರ್ಥಿನಿ, ಮುಸ್ಲಿಂ ಯುವಕನೊಂದಿಗೆ ಹೋದ ಕಾರಣಕ್ಕೆ ವಿದ್ಯಾರ್ಥಿನಿಯನ್ನು ಮಾತ್ರ ಕಾಲೇಜಿನಿಂದ ಡಿಬಾರ್‌ ಮಾಡಿದ್ದಾರೆ.‌ ಮುಸ್ಲಿಂ ವಿದ್ಯಾರ್ಥಿಯನ್ನು ಡಿಬಾರ್ ಮಾಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಈ ಬಗ್ಗೆ ಮಂಗಳೂರು ಹಿಂದೂಸ್‌ ಎಂಬ ಪೇಸ್‌ಬುಕ್‌ ಪೇಜಿನಲ್ಲಿ ಪೋಸ್ಟರ್‌ವೊಂದು ಹರಿದಾಡುತ್ತಿದೆ.

“ಬೆಳ್ತಂಗಡಿ ಕಾಲೇಜಿನಲ್ಲಿ ನಡೆದ ಘಟನೆಯಲ್ಲಿ ಜಿಹಾದಿ ಜೊತೆ ಹೋದ ಯುವತಿಯನ್ನು ಕಾಲೇಜ್‌ನಿಂದ ಡಿಬಾರ್‌ ಮಾಡಿದ್ದಾರೆ. ಆದರೆ ಜಿಹಾದಿ ಹುಡುಗನನ್ನು ಡಿಬಾರ್ ಮಾಡಿಲ್ಲ, ಶಿಕ್ಷೆ ಇಬ್ಬರಿಗೂ ಒಂದೇ ಆಗಬೇಕು. ಜಿಹಾದಿಯನ್ನು ಕೂಡಲೇ ಡಿಬಾರ್‌ ಮಾಡಿ..ಇಲ್ಲದಿದ್ದಲ್ಲಿ ಮುಂದಿನ ದಿನ ನಾವು ಮಾಡಬೇಕಾದ ಕೆಲಸ ಮಾಡುತ್ತೇವೆ” ಎಂಬ ಬರಹದೊಂದಿಗೆ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

Check Also

ದಕ್ಷಿಣ ಕನ್ನಡ ಎಸ್ಪಿ ಸಿ ಬಿ ರಿಷಂತ್ ವರ್ಗಾವಣೆ ; ಯತೀಶ್ ಎನ್ ನೂತನ ವರಿಷ್ಠಾಧಿಕಾರಿ

ಮಂಗಳೂರು: ರಾಜ್ಯ ಸರಕಾರ ಮಂಗಳವಾರ ತಡರಾತ್ರಿ 25 ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದ್ದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ …

Leave a Reply

Your email address will not be published. Required fields are marked *

You cannot copy content of this page.