ಅಪ್ರಾಪ್ತ ಬಾಲಕನಿಂದ ಬೈಕ್ ಢಿಕ್ಕಿ: ಪಾದಚಾರಿ ವ್ಯಕ್ತಿ ಸಾವು.!

ಕುಂಬಳೆ: ಕುಂಬಳೆ ಪೇಟೆಯಲ್ಲಿ 14 ವಯಸ್ಸಿನ, 9ನೇ ತರಗತಿಯ ವಿದ್ಯಾರ್ಥಿ ಚಲಾಯಿಸುತ್ತಿದ್ದ ಬೈಕ್‌ ಗುದ್ದಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಮೃತರಾಗಿದ್ದಾರೆ.

ಮೃತರು ಅಂಗಡಿಮೊಗರು ಪೆರ್ಲಾಡ ನಿವಾಸಿ ಮೈಕ್‌ ಆಪರೇಟರ್‌ ಅಬ್ದುಲ್ಲ ಕುಂಞಿ (60) ಎಂದು ತಿಳಿದುಬಂದಿದೆ.

ಕುಂಬಳೆ ಬಸ್‌ ನಿಲ್ದಾಣದಲ್ಲಿ ಬಸ್ಸಿನಿಂದ ಇಳಿದು ಪೇಟೆಗೆ ತೆರಳುತ್ತಿದ್ದ ಅಬ್ದುಲ್ಲ ಕುಂಞಿ ಅವರಿಗೆ ಬಾಲಕ ವೇಗವಾಗಿ ಒಡಿಸುತ್ತಿದ್ದ ಬೈಕ್‌ ಡಿಕ್ಕಿ ಹೊಡೆದ ಪರಿಣಾಮ ಅಬ್ದುಲ್ಲ ಕುಂಞಿ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾದರು. ಮೃತದೇಹವನ್ನು ಕಾಸರಗೋಡು ಜನರಲ್‌ ಆಸ್ಪತ್ರೆಗೆ ಪೋಸ್ಟ್‌ಮಾರ್ಟಂಗೆ ಒಯ್ಯಲಾಗಿದೆ.

ಬೈಕಿನಲ್ಲಿ ಈರ್ವರು ಆಪ್ರಾಪ್ತ ವಯಸ್ಕ ವಿದ್ಯಾರ್ಥಿಗಳಿದ್ದು ಬೈಕ್‌ ಚಾಲಕನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. .

Check Also

ಮಣಿಪಾಲ: ಕಾಲೇಜ್ ವಿದ್ಯಾರ್ಥಿ ಆತ್ಮಹತ್ಯೆ..!

ಉಡುಪಿ:  ಮಣಿಪಾಲದ ವಾಗ್ಷಾದಲ್ಲಿ ಮೂರನೇ ವರ್ಷ ಬಿಎ (ಕಲ್ನರಿ ಆರ್ಟ್ಸ್) ವಿದ್ಯಾರ್ಥಿಯಾಗಿರುವ ಬೆಂಗಳೂರಿನ ಹಿತೇಂದ್ರ (26)  ತಾನು ವಾಸವಾಗಿದ್ದ ಹಾಸ್ಟೆಲ್ …

Leave a Reply

Your email address will not be published. Required fields are marked *

You cannot copy content of this page.