ವೃದ್ಧೆಯನ್ನು ಕೊಂದು ಮೃತದೇಹವನ್ನು ಹಿತ್ತಿಲಿನಲ್ಲಿ ಹೂತು ಹಾಕಿದ ಪ್ರಕರಣ- ಮಣಿಪಾಲದಲ್ಲಿ ಇಬ್ಬರ ಬಂಧನ

ಕಾಸರಗೋಡು: ಕೊಚ್ಚಿ ನಿವಾಸಿ ಸುಭದ್ರಾ (73) ಅವರನ್ನು ಕೊಂದು ಮೃತದೇಹವನ್ನು ಹಿತ್ತಿಲಿನಲ್ಲಿ ಹೂತು ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ ದಂಪತಿಯನ್ನು ಕರ್ನಾಟಕದ ಮಣಿಪಾಲದಿಂದ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಕಾಟೂರು ಪಳ್ಳಿಪರಂಬಿಲ್‌ನ ಮ್ಯಾಥ್ಯೂಸ್‌ ಯಾನೆ ನಿತಿನ್‌(35) ಮತ್ತು ಪತ್ನಿ ಕರ್ನಾಟಕದ ಉಡುಪಿ ನಿವಾಸಿ ಶರ್ಮಿಳಾ(36)ನನ್ನು ಮಣ್ಣಾಂ ಚೇರಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಉಡುಪಿಯಲ್ಲಿದ್ದಾರೆ ಎಂಬ ಮಾಹಿತಿ ಆಧಾರದಲ್ಲಿ ಅವರ ಮೊಬೈಲ್‌ ಲೊಕೇಶನ್‌ ಕೇಂದ್ರೀಕರಿಸಿ ಪೊಲೀಸರು ಅವರ ಬೆನ್ನು ಬಿದ್ದಿದ್ದರು. ಸೆ.12ರಂದು ಬೆಳಗ್ಗೆ ಮಂಗಳೂರಿನಲ್ಲಿ ಶರ್ಮಿಳಾ ಫೋನ್‌ ಆನ್‌ ಆಗಿತ್ತು. ಕೂಡಲೇ ಪೊಲೀಸರು ಉಡುಪಿ ಹಾಗೂ ಮಂಗಳೂರು ಮೊದಲಾದೆಡೆ ಕೆಲವರನ್ನು ಸಂಪರ್ಕಿಸಿ ಆರೋಪಿಗಳ ಮೇಲೆ ನಿಗಾ ಇರಿಸುವಂತೆ ಸೂಚನೆ ನೀಡಿದ್ದರು.

ಮಧ್ಯಾಹ್ನ ಶರ್ಮಿಳಾ ಫೋನ್‌ ಮಣಿಪಾಲದಲ್ಲಿ ಕಾರ್ಯಾಚರಿಸಿದೆ. ಆಕೆ ಈ ಹಿಂದೆ ವಾಸಿಸಿದ್ದ ಪೆರಂಪಳ್ಳಿಯ ಮಹಿಳೆಯೊಬ್ಬರ ಮನೆಗೆ ಬಂದಿದ್ದನ್ನು ಪೊಲೀಸರು ತಿಳಿದುಕೊಂಡು ಅಲ್ಲಿಂದ ಅವರನ್ನು ಬಂಧಿಸಲಾಯಿತು. ಆರೋಪಿಗಳ ಶೋಧ ಕಾರ್ಯಕ್ಕೆ ಮಣಿಪಾಲ ಪೊಲೀಸರು ಸಹಕರಿಸಿದ್ದರು ಎಂದು ಮಾಹಿತಿ ತಿಳಿಯಲಾಗಿದೆ.

Check Also

ಉಡುಪಿ: ಮಗನಿಂದ ಕಿರುಕುಳ – ತಾಯಿ ಸಖಿ ಸೆಂಟರ್‌ಗೆ ದಾಖಲು

ಉಡುಪಿ: ಮಾನಸಿಕ ಅಸ್ವಸ್ಥ ಮಗನ ಹಲ್ಲೆಗೆ ಹೆದರಿ ಜಿಲ್ಲಾಸ್ಪತ್ರೆಯಲ್ಲಿ ದುಃಖಿಸುತ್ತಿದ್ದ ಅಸಹಾಯಕ ಮಹಿಳೆಯನ್ನು ಸಮಾಜ ಸೇವಕ ವಿಶು ಶೆಟ್ಟಿ ಅವರು …

Leave a Reply

Your email address will not be published. Required fields are marked *

You cannot copy content of this page.