![](https://thrishulnews.com/wp-content/uploads/2024/03/WhatsApp-Image-2024-03-12-at-11.54.26-AM.jpeg)
ಬ್ರಹ್ಮಾವರ: ಫ್ಯಾಕ್ಟರಿಯೊಂದರಿಂದ ಸೂರತ್ ಮತ್ತು ಅಹ್ಮದಾಬಾದ್ಗೆ ತಲುಪಬೇಕಾಗಿದ್ದ ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ತಲುಪಿಸದೆ ವಂಚಿಸಲಾಗಿದ್ದು, ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏ. 2ರಂದು ಲಾರಿ ಚಾಲಕ 1,21,76,598 ರೂ. ಮೌಲ್ಯದ 24.69 ಮೆಟ್ರಿಕ್ ಟನ್ ರಮ್ಜಾನ್ ಸೊಧಾ, ಮಹೇಂದ್ರಪುರಿ ಲಾಲ್ಪುರಿ ಗುಶಾಯಿ ಗೋಡಂಬಿ ತುಂಬಿಸಿ ಸೂರತ್ ಮತ್ತು ಅಹ್ಮದಾಬಾದ್ ಕಡೆಗೆ ಹೊರಟಿದ್ದನು. ಈ ಲಾರಿಯು ಏ. 5ರಂದು ತಲುಪಬೇಕಾಗಿದ್ದ ಸ್ಥಳಕ್ಕೆ ತಲುಪಿಲ್ಲ. ಬಳಿಕ ಚಾಲಕನ ಫೋನ್ ಸ್ವಿಚ್ ಆಫ್ ಆಗಿದ್ದು, ಈ ಬಗ್ಗೆ ಫ್ಯಾಕ್ಟರಿ ಮಾಲಕ ಬ್ರಹ್ಮಾವರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.