ಕೋಟ್ಯಂತರ ರೂ. ಗೋಡಂಬಿ ವಂಚನೆ; ದೂರು ದಾಖಲು

ಬ್ರಹ್ಮಾವರ: ಫ್ಯಾಕ್ಟರಿಯೊಂದರಿಂದ ಸೂರತ್‌ ಮತ್ತು ಅಹ್ಮದಾಬಾದ್‌ಗೆ ತಲುಪಬೇಕಾಗಿದ್ದ ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ತಲುಪಿಸದೆ ವಂಚಿಸಲಾಗಿದ್ದು, ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಏ. 2ರಂದು ಲಾರಿ ಚಾಲಕ 1,21,76,598 ರೂ. ಮೌಲ್ಯದ 24.69 ಮೆಟ್ರಿಕ್‌ ಟನ್‌ ರಮ್ಜಾನ್ ಸೊಧಾ, ಮಹೇಂದ್ರಪುರಿ ಲಾಲ್‌ಪುರಿ ಗುಶಾಯಿ ಗೋಡಂಬಿ ತುಂಬಿಸಿ ಸೂರತ್‌ ಮತ್ತು ಅಹ್ಮದಾಬಾದ್‌ ಕಡೆಗೆ ಹೊರಟಿದ್ದನು. ಈ ಲಾರಿಯು ಏ. 5ರಂದು ತಲುಪಬೇಕಾಗಿದ್ದ ಸ್ಥಳಕ್ಕೆ ತಲುಪಿಲ್ಲ. ಬಳಿಕ ಚಾಲಕನ ಫೋನ್‌ ಸ್ವಿಚ್‌ ಆಫ್‌ ಆಗಿದ್ದು, ಈ ಬಗ್ಗೆ ಫ್ಯಾಕ್ಟರಿ ಮಾಲಕ ಬ್ರಹ್ಮಾವರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Check Also

ಬೆಳ್ತಂಗಡಿ: ಅಂಬಡಬೆಟ್ಟು ಸೇತುವೆ ಶಿಥಿಲ – ಘನವಾಹನ ಸಂಚಾರ ನಿಷೇಧ..!

ಬೆಳ್ತಂಗಡಿ ತಾಲೂಕಿನ ಕಲ್ಲಂಜ ಗ್ರಾಮದ ನಿಡಿಗಲ್ ಮೂಲಕ ನಡ ಗ್ರಾಪಂ ವ್ಯಾಪ್ತಿಯ ಗುರಿಪಳ್ಳಕ್ಕೆ ಸಂಪರ್ಕ ಕಲ್ಪಿಸುವ ಉಜಿರೆ ಗ್ರಾಪಂ ವ್ಯಾಪ್ತಿಯ …

Leave a Reply

Your email address will not be published. Required fields are marked *

You cannot copy content of this page.