ತಾಜಾ ಸುದ್ದಿ

ಶಿಕ್ಷಕಿ ಬಳಿ ಸಾಲ ಕೇಳಿದ ಮಹಿಳೆಗೆ ಹರಿದು ಬಂತು ಬರೋಬ್ಬರಿ 51 ಲಕ್ಷ ರೂಪಾಯಿ..!

ತನ್ನ ಮಗನ ಶಿಕ್ಷಕಿಯ ಬಳಿ 500 ರೂಪಾಯಿ ಸಾಲ ಕೇಳಿದ ಮಹಿಳೆಯ ಖಾತೆಗೆ ಒಂದೇ ದಿನದಲ್ಲಿ ಬರೋಬ್ಬರಿ 51 ಲಕ್ಷ ರೂಪಾಯಿ ಹರಿದು ಬಂದಿದೆ. ಪಾಲಕ್ಕಾಡ್ ನ ಕೂಟ್ಟನಾಡ್ ನಿವಾಸಿ ಸುಭದ್ರ ಎಂಬ ಮಹಿಳೆ ತನ್ನ ಮಗನ ಶಿಕ್ಷಕಿ ಗಿರಿಜಾ ಹರಿಕುಮಾರ್ ಬಳಿ ರೂ. 500 ಸಹಾಯ ಕೇಳಿದ್ದರು. ಶಿಕ್ಷಕಿಯು ಮಹಿಳೆಗೆ ಒಂದು ಸಾವಿರ ರೂಪಾಯಿ ಸಾಲ ನೀಡಿದ್ದಲ್ಲದೆ ಮಹಿಳೆಯ ಕುಟುಂಬದ ಬವಣೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದಕ್ಕೆ ಸ್ಪಂದಿಸಿದ ದಾನಿಗಳು ಸುಭದ್ರರ ಖಾತೆಗೆ ಒಂದೇ ದಿನದಲ್ಲಿ 51 ಲಕ್ಷ ರೂಪಾಯಿಯನ್ನು ಜಮೆ ಮಾಡಿದ್ದಾರೆ. …

Read More »

ಇದುವರೆಗೆ ಬೇರೆಯವರ ಹವಾ..!ಇನ್ಮುಂದೆ. : ಸಿನಿಮಾ ಡೈಲಾಗ್ ಹೊಡೆದ ಸಚಿವ ಸುಧಾಕರ್

ಕೋಲಾರ : ಇದುವರೆಗೆ ಬೇರೆಯವರ ಹವಾ ಇನ್ನುಂದೆ ವರ್ತೂರು ಪ್ರಕಾಶ್ ಹವಾ ಇದೆ ಎಂದು ಸಚಿವ ಸುಧಾಕರ್ ಸಿನಿಮಾ ಡೈಲಾಗ್ ಹೊಡೆದಿದ್ದಾರೆ. ಕೋಲಾರದಲ್ಲಿ ವರ್ತೂರು ಪ್ರಕಾಶ್ ಹುಟ್ಟು ಹಬ್ಬ ಕಾರ್ಯಕ್ರಮದ ವೇಳೆ ಮಾತನಾಡಿದ ಸಚಿವ ಸುಧಾಕರ್ ಇದುವರೆಗೆ ಬೇರೆಯವರ ಹವಾ ಇನ್ನುಂದೆ ವರ್ತೂರು ಪ್ರಕಾಶ್ ಹವಾ, ನೂರಕ್ಕೆ ನೂರು ವರ್ತೂರು ಪ್ರಕಾಶ್ ಶಾಸಕರಾಗುತ್ತಾರೆ ಎಂದರು.   ನಾವು 15 ದಿನದ ಮುಂಚೆಯೇ ಕೋಲಾರದಲ್ಲಿ ಹೊಸ ವರ್ಷ ಆಚರಣೆ ಮಾಡುತ್ತಿದ್ದೇವೆ, ನಾನು ಇದುವರೆಗೆ ಹೇಳಿದ ರಾಜಕೀಯ ಮಾತು ಸುಳ್ಳಾಗಿಲ್ಲ , ನೂರಕ್ಕೆ ನೂರು ವರ್ತೂರು ಪ್ರಕಾಶ್ …

Read More »

ಶಿವಮೊಗ್ಗದಲ್ಲಿ ಅನುಮಾನಾಸ್ಪದವಾಗಿ ಓಡಾಡಿಕೊಂಡಿದ್ದ ಯುವಕ, ಯುವತಿ ಪೊಲೀಸರ ವಶಕ್ಕೆ

ಶಿವಮೊಗ್ಗ: ನಗರದಲ್ಲಿ ಕೆಲವೆಡೆ ಯುವಕ ಹಾಗೂ ಬುರ್ಖಾ ಹಾಕಿಕೊಂಡಿದ್ದ ಯುವತಿ ಅನುಮಾನಾಸ್ಪದವಾಗಿ ಓಡಾಡಿಕೊಂಡಿದ್ದವರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಗರದಲ್ಲಿ ಇವರಿಬ್ಬರು ನಾವು ಕಾಶ್ಮೀರದಿಂದ ಬಂದಿದ್ದೇವೆ, ನಮಗೆ ಸಹಾಯ ಮಾಡಿ ಎಂದುಕೊಂಡು ಮನೆ ಮನೆಗೆ ಹೋಗಿ ಬೇಡುತ್ತಿದ್ದರು.ಶಿವಮೊಗ್ಗದ ಇಲಿಯಾಸ್ ನಗರದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಓಡಾಡಿಕೊಂಡಿದ್ದ ಯುವಕ ಹಾಗೂ ಯುವತಿಯ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯರ ಮಾಹಿತಿ ಪಡೆದ ಪೊಲೀಸರು ತಕ್ಷಣವೇ ಸ್ಥಳಕ್ಕಾಗಮಿಸಿ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇಬ್ಬರನ್ನು ಠಾಣೆಗೆ ಕರೆದುಕೊಂಡು ಹೋಗಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Read More »

8ನೇ ಕ್ಲಾಸ್‌ ಫೇಲ್, ಐಪಿಎಸ್‌ ಅಧಿಕಾರಿಯ ಪೋಸ್.. ಮಹಿಳೆಯರನ್ನು ವಂಚಿಸಿ ಹಣ ಲೂಟಿ

ನವದೆಹಲಿ: ಆತ ಓದಿದ್ದು 8ನೇ ತರಗತಿ. ಆದರೆ ಆತ ಪರಿಚಯ ಮಾಡಿಕೊಡುವುದು ತಾನೊಬ್ಬ ಪೊಲೀಸ್‌ ಅಧಿಕಾರಿ ಎಂದು. ಪೊಲೀಸ್‌ ಅಧಿಕಾರಿಯಂತೆ ನಟಿಸಿ ಮಹಿಳೆಯರಿಂದ ಹಣ ಲೂಟಿ ಮಾಡಿ ಮೋಸ ಮಾಡುವ ವಂಚಕ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಈತನ ಮೂಲ ಹೆಸರು ವಿಕಾಸ್‌ ಗೌತಮ್.‌ ಫೇಸ್‌ ಬುಕ್‌ , ಇನ್ಸ್ಟಾಗ್ರಾಮ್‌ ಹಾಗೂ ಟ್ವಿಟರ್‌ ನಲ್ಲಿ ಐಪಿಎಸ್ ವಿಕಾಸ್‌ ಯಾದವ್‌ ಎಂದು ಹೆಸರನ್ನು ಬರೆದುಕೊಂಡಿದ್ದಾನೆ. ಘಟನೆ ಹಿನ್ನೆಲೆ: ವಿಕಾಸ್‌ ಗೌತಮ್‌ ತನ್ನ ಸಾಮಾಜಿಕ ಜಾಲತಾಣದಲ್ಲಿ ಐಪಿಎಸ್‌ ವಿಕಾಸ್‌ ಯಾದವ್‌ಎಂದು ಹೆಸರನ್ನು ಪ್ರೊಫೈಲ್‌ ನಲ್ಲಿ ಹಾಕಿದ್ದಾನೆ. ಮಹಿಳೆಯರನ್ನು ಪರಿಚಯ ಮಾಡಿಕೊಳ್ಳುವುದು ಹಾಗೂ …

Read More »

ಒಂದೇ ಕುಟುಂಬದ ಮೂವರು ನಿಗೂಢವಾಗಿ ಸಾವು

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ಮಹಾಲಕ್ಷ್ಮೀ ಲೇ ಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ವರದಿಯಾಗಿದೆ.ನಿಗೂಢವಾಗಿ ಸಾವನ್ನಪ್ಪಿದವರನ್ನು ಯಶೋಧಾ, ಸುಮನ್ ಗುಪ್ತಾ ಮತ್ತು ನರೇಶ್ ಗುಪ್ತಾ ಎಂದು ಗುರುತಿಸಲಾಗಿದೆ.ಮೂವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ವೆಸ್ಟ್ ಆಪ್ ಕಾರ್ಡ್ ರಸ್ತೆಯ ಅಪಾರ್ಟ್ ಮೆಂಟ್ ನಲ್ಲಿ ಮೂವರ ಮೃತ ದೇಹ ಪತ್ತೆಯಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Read More »

ರಿಮೋಟ್ ಬ್ಯಾಟರಿ ನುಂಗಿದ ಮಗು; 20ನಿಮಿಷದಲ್ಲೇ ಹೊರತೆಗೆದು ಬಚಾವ್ ಮಾಡಿದ ಕೇರಳದ ಡಾಕ್ಟರ್ಸ್..!

ತಿರುವನಂತಪುರಂ: ಆಟವಾಡುತ್ತಿದ್ದ ಎರಡು ವರ್ಷದ ಪುಟ್ಟ ಮಗುವೊಂದು ಬ್ಯಾಟರಿ ನುಂಗಿದ್ದು ಅದನ್ನು ವೈದ್ಯರು ಕೇವಲ ಇಪ್ಪತ್ತೇ ನಿಮಿಷದಲ್ಲಿ ಹೊರತೆಗೆದು ಮಗುವನ್ನು ಬಚಾವ್ ಮಾಡಿದ ಅಪರೂಪದ ಘಟನೆ ತಿರುವನಂತಪುರದಲ್ಲಿ ನಡೆದಿದೆ. ಟಿವಿ ರಿಮೋಟ್‌ನಲ್ಲಿ ಹಾಕಲಾಗಿದ್ದ 5 ಸೆಂಟಿಮೀಟರ್ ಉದ್ದ ಮತ್ತು ಒಂದೂವರೆ ಸೆಂಟಿ ಮೀಟರ್ ಅಗಲದ ಬ್ಯಾಟರಿಯನ್ನು ಮಗು ಆಡುತ್ತಿದ್ದಾಗ ನುಂಗಿಬಿಟ್ಟಿದೆ. ವಿಷಯ ತಿಳಿದ ಕೂಡಲೇ ಮಗುವಿನ ಪೋಷಕರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ನಂತರ ಶಸತ್ರಚಿಕಿತ್ಸೆ ಮಾಡಿ ಕೇವಲ 20 ನಿಮಿಷಗಳಲ್ಲಿ ಬ್ಯಾಟರಿಯನ್ನು ಹೊರೆ ತೆಗೆದಿದ್ದಾರೆ. ಈ ಮೂಲಕ ಮಗುವನ್ನು ಸಾವಿನ ದವಡೆಯಿಂದ ರಕ್ಷಿಸಿದ್ದಾರೆ.

Read More »

ಏಪ್ರಿಲ್ 1 ರಿಂದ ಈ ರಾಜ್ಯದಲ್ಲಿ 500ರೂಗಳಿಗೆ ಸಿಗಲಿದೆ ಅನಿಲ ಸಿಲಿಂಡರ್

ಜೈಪುರ: ಮುಂದಿನ ವರ್ಷದ ಏಪ್ರಿಲ್ 1 ರ ನಂತರ ಬಿಪಿಎಲ್ ಕುಟುಂಬಗಳಿಗೆ ತಲಾ 500 ರೂ.ಗಳಂತೆ ನಾವು ವರ್ಷಕ್ಕೆ 12 ಗ್ಯಾಸ್ ಸಿಲಿಂಡರ್ಗಳನ್ನು ನೀಡುತ್ತೇವೆ. ಸರ್ಕಾರದ ಕಲ್ಯಾಣ ಯೋಜನೆಗಳ ಪ್ರಯೋಜನಗಳಿಂದ ಯಾರೂ ವಂಚಿತರಾಗಬಾರದು ಅಂತ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋ ಆಳ್ವಾದಲ್ಲಿ ನಡೆದ ಸಮಾರಂಭದಲ್ಲಿ ಹೇಳಿದ್ದಾರೆ.   ಮುಂದಿನ ವರ್ಷದ ಏಪ್ರಿಲ್ 1 ರ ನಂತರ ಬಿಪಿಎಲ್ ಕುಟುಂಬಗಳಿಗೆ ತಲಾ 500 ರೂ.ಗಳಂತೆ ಒಂದು ವರ್ಷದಲ್ಲಿ 12 ಗ್ಯಾಸ್ ಸಿಲಿಂಡರ್ಗಳನ್ನು ನೀಡಲಾಗುವುದು ಎಂದು ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಸೋಮವಾರ ಹೇಳಿದ್ದಾರೆ. ‘ಯಾರೂ ಸರ್ಕಾರದ …

Read More »

ಬೆಳ್ಳಾರೆ : ಉದ್ಯಮಿ ನವೀನ್ ಅಪಹರಣ…ಸ್ವಂತ ಅಳಿಯನನ್ನೇ ಕಿಡ್ನಾಪ್‌ ಮಾಡಿಸಿದರೇ ಕಾಂಗ್ರೆಸ್ ನಾಯಕಿ..?

ಮುಂದಿನ ಚುನಾವಣೆಗೆ ಪುತ್ತೂರಿನ ವಿಧಾನಸಭಾ ಕ್ಷೇತ್ರಕ್ಕೆ ಉಮೇದುವಾರರಾಗಿರುವ ಕಾಂಗ್ರೆಸ್ ನ ಮಹಿಳಾ ನಾಯಕಿ ದಿವ್ಯಪ್ರಭಾ ಗೌಡ ಚಿಲ್ತಡ್ಕ ಮತ್ತು ಆಕೆಯ ಮಗಳು ಸ್ಪಂದನಾ ಹಾಗೂ ಇನ್ನೂ‌ ಹಲವರು ಸೇರಿಕೊಂಡು ನವೀನ್ ಮಲ್ಲಾರ ಎಂಬವರನ್ನು ಅಪಹರಿಸಿರುವ ಘಟನೆ ಬೆಳ್ಳಾರೆಯಲ್ಲಿ ನಡೆದಿದೆ. ಏನಿದು ಘಟನೆ? ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಕಾವಿನಮೂಲೆ ಧರ್ಮಶ್ರೀ ನಿಲಯದಲ್ಲಿ ನವೀನ್ ಅವರು ವಾಸ್ತವ್ಯವಿದ್ದು, ಮನೆಯಲ್ಲಿ ನವೀನ್ ಅವರ ತಾಯಿ ಮತ್ತು ಅವರ ಅಣ್ಣನ ಮಗನ ಪತ್ನಿ ಇದ್ದ ವೇಳೆ ಇಂದು‌ ಮಧ್ಯಾಹ್ನ 12:45 ರ‌ ಸುಮಾರಿಗೆ ಈ ಮನೆಗೆ ಕದಂಬ ಆಂಬ್ಯುಲೆನ್ಸ್ …

Read More »

BREAKING; ಶಾಲೆಯಲ್ಲಿ ವಿದ್ಯಾರ್ಥಿಯನ್ನು ಹೊಡೆದು ಕೊಲೆ ಮಾಡಿದ ಶಿಕ್ಷಕ, ತಡೆಯಲು ಹೋದ ಶಿಕ್ಷಕಿಯ ಮೇಲೂ ಮಾರಣಾಂತಿಕ ಹಲ್ಲೆ

ಗದಗ:ಅತಿಥಿ ಶಿಕ್ಷಕನೋರ್ವ ಸಹಶಿಕ್ಷಕಿ ಹಾಗೂ ವಿದ್ಯಾರ್ಥಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಘಟನೆಯಲ್ಲಿ ವಿದ್ಯಾರ್ಥಿ ಮೃತಪಟ್ಟಿದ್ದು ಶಿಕ್ಷಕಿ ಗಂಭೀರವಾಗಿರುವ ಬಗ್ಗೆ ವರದಿಯಾಗಿದೆ. ಶಾಲೆಯಲ್ಲಿ ಅತಿಥಿ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಮುತ್ತಪ್ಪ ಹಡಗಲಿ ಎಂಬಾತ ವಿದ್ಯಾರ್ಥಿಯ ಮೇಲೆ ಗುದ್ದಲಿಯಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ ಎಂದು ವರದಿಯಾಗಿದೆ. ಈ ವೇಳೆ ತಡೆಯಲು ಬಂದ ಬಾಲಕನ ತಾಯಿಯಾಗಿರುವ ಅತಿಥಿ ಶಿಕ್ಷಕಿ ಗೀತಾ ಬಾರಕೇರಿ ಅವರ ಮೇಲೂ ಮನಬಂದಂತೆ ಹಲ್ಲೆ ಮಾಡಿದ್ದಾನೆ.ತಲೆಗೆ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವಗೊಂಡ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಹಲ್ಲೆ ಮಾಡುವುದನ್ನು ಬಿಡಿಸಲು ಹೋದ ಸರ್ಕಾರಿ …

Read More »

BREAKING NEWS: ಕಾಲೇಜು ಕಟ್ಟಡದಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು

ಬೆಂಗಳೂರು: ಕಾಲೇಜಿನ ಕಟ್ಟಡದ ಮೇಲಿನಿಂದ ಜಿಗಿದು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವಂತ ಘಟನೆ ಬೆಂಗಳೂರಿನ ವಿ ವಿ ಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬೆಂಗಳೂರಿನ ವಿ ವಿ ಪುರಂನಲ್ಲಿರುವಂತ ಬೆಂಗಳೂರು ಇನ್ಟಿಟ್ಯೂಟ್ ಆಫ್ ಟೆನ್ನಾಲಜಿ ಕಟ್ಟಡದ 6ನೇ ಮಹಡಿಯಿಂದ ಬಿದ್ದು, ವಿದ್ಯಾರ್ಥಿನಿ ವಾಣಿ(23) ಆತ್ಮಹತ್ಯೆ ಮಾಡಿಕೊಂಡಿರೋದಾಗಿ ತಿಳಿದು ಬಂದಿದೆ.   ವಿಶ್ವೇಶ್ವರಯ್ಯಯ ಕಾಲೇಜು ಆಫ್ ಲಾ ಸಂಸ್ಥೆಯ ವಿದ್ಯಾರ್ಥಿನಿಯಾಗಿದ್ದಂತ ವಾಣಿ, ಬಿಐಟಿ ಇಂಜಿನಿಯರಿಂಗ್ ಕಾಲೇಜಿನ 6ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದಂತ ವಿವಿ ಪುರಂ ಠಾಣೆಯ ಪೊಲೀಸರು, …

Read More »

You cannot copy content of this page.