ಮಂಗಳೂರು: ಹುಲಿವೇಷ ಕಲಾವಿದನ ಮೈಮೇಲೆ ದೈವ ಆವಾಹನೆ

ಮಂಗಳೂರು: ಹುಲಿವೇಷ ಕಲಾವಿದನ ಮೇಲೆ ದೈವ ಆವಾಹನೆಯಾಗಿರುವ ಘಟನೆ ಮಂಗಳೂರಿನ ಬೊಕ್ಕಪಟ್ಣದಲ್ಲಿ ನಡೆದಿದೆ‌. ಬೊಕ್ಕಪಟ್ಣ ಶಿವ ಫ್ರೆಂಡ್ಸ್‌ನ ಹುಲಿವೇಷದ ಊದುಪೂಜೆ ನಿನ್ನೆ ಕಾರ್ಯಕ್ರಮ ನಡೆದಿದೆ. ಹುಲಿವೇಷ ಹಾಕುವುದಕ್ಕಿಂತ ಮೊದಲು ದೇವರ ಸೇವೆಯೆಂಬಂತೆ ಈ ಆರಾಧನೆ ನಡೆಯುತ್ತಿದೆ. ಹುಲಿವೇಷ ಬಣ್ಣ ಧಾರಣೆ ಮಾಡದೆ ಹುಲಿವೇಷದ ನರ್ತನ ಸೇವೆ ಇರುತ್ತದೆ. ಈ ವೇಳೆ ಹುಲಿವೇಷ ಕಲಾವಿದನ ಮೇಲೆ ದೈವ ಆವಾಹನೆಯಾಗಿದೆ. ನಟ ರಾಜ್ ಬಿ. ಶೆಟ್ಟಿಯವರ ಸಮ್ಮುಖದಲ್ಲೇ ಈ ಘಟನೆ ನಡೆದಿದೆ. ನಾಲ್ಕೈದು ಮಂದಿ ಹಿಡಿದುಕೊಂಡಿದ್ದರೂ ಆವಾಹನೆಯಾಗಿದ್ದ ಯುವಕ ಕೊಸರಾಡುತ್ತಿರುವುದನ್ನು ನೋಡುವಾಗ ಮೈಜುಮ್ಮೆನಿಸುತ್ತದೆ. ಬಳಿಕ ಹಿರಿಯೊಬ್ಬರು ಸಾಂತ್ವನ ಮಾಡಿ ನೀರು ಚಿಮುಕಿಸಿದ ನಂತರ ಆತ ಸಹಜ ಸ್ಥಿತಿಗೆ ಬಂದಿದ್ದಾನೆ‌. ಕಳೆದ ಬಾರಿ ಉಡುಪಿಯಲ್ಲೂ ಇಂತಹದ್ದೇ ಒಂದು ಘಟನೆ ನಡೆದಿತ್ತು.

Check Also

ಕಾರವಾರ: ಮಳೆಗೆ ಗುಡ್ಡ ಕುಸಿದು ʻಕಾರವಾರ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ‌ʼ ಬಂದ್ : ವಾಹನ ಸವಾರರ ಪರದಾಟ

ಕಾರವಾರ : ರಾಜ್ಯಾದ್ಯಂತ ಮಳೆಯ ಆರ್ಭಟ ಮುಂದುವರೆದಿದ್ದು, ಭಾರೀ ಮಳೆಯಿಂದಾಗಿ ಗುಡ್ಡ ಕುಸಿದ ಪರಿಣಾಮ ಕಾರವಾರ-ಬೆಂಗಳುರು ರಾಷ್ಟ್ರೀಯ ಹೆದ್ದಾರಿ ಸಂಚಾರ …

Leave a Reply

Your email address will not be published. Required fields are marked *

You cannot copy content of this page.