ಸಿಎಂ ಸಿದ್ದರಾಮಯ್ಯ ಎದುರೇ ಕಿತ್ತಾಡಿದ ಕೈ ನಾಯಕಿಯರು, ‘ಟಗರು’ ಗಲಿಬಿಲಿ

ಮಂಗಳೂರು: ಸಿಎಂ ಸಿದ್ದರಾಮಯ್ಯ ಎದುರೇ ಕೈ ನಾಯಕಿಯರು ಕೈ ಕೈ ಮಿಲಾಯಿಸಿಕೊಂಡ ಘಟನೆ ನಡೆದಿದೆ.

ಇಂದು ಸಿಎಂ ಸಿದ್ದರಾಮಯ್ಯ ಉಡುಪಿಗೆ ಆಗಮಿಸಿದ್ದ ವೇಳೆಯಲ್ಲಿ ಸಿಎಂ ಸಿದ್ದರಾಮಯ್ಯಗೆ ಹೂಗುಚ್ಛ ನೀಡಲು ಇಬ್ಬರು ಮಹಿಳಾ ನಾಯಕಿರು ಕಿತ್ತಾಡಿಕೊಂಡ ಘಟನೆ ನಡೆದಿದೆ. ಇಂದು ಸಿಎಂ ಸಿದ್ದರಾಮಯ್ಯ ಅವರು ಮಂಗಳೂರು ಮತ್ತು ಉಡುಪಿ ಪ್ರವಾಸದಲಿದ್ದು, ಇಂದು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು.

ಈ ವೇಳೆ ಸಿಎಂ ಅವರನ್ನು ಸ್ವಾಗತಿಸಲು ಹೂಗುಚ್ಛ ತಂದಿದ್ದ ಕವಿತಾ ಎಂಬುವರು ಮೊದಲು ಕೊಡಲು ಮುಂದಾಗಿದ್ದಾರೆ. ಈ ನಡುವೆ ಅದೇ ಸಮಯದಲ್ಲಿ, ಶಾಲೆಟ್ ಪಿಂಟೋ ಕವಿತಾ ಅವರನ್ನು ತಳ್ಳಿ ಹೂಗುಚ್ಛ ನೀಡಲು ಮುಂದಾಗಿದ್ದಾರೆ, ಈ ವೇಳೆ ಇಬ್ಬರು ಕೂಡ ಕಿತ್ತಾಡಿಕೊಂಡಿದ್ದಾರೆ. ಈ ವೇಳೆ ಸಿಎಂ ಸಿದ್ದರಾಮಯ್ಯ ಅವರು ಕೊಂಚ ಕಾಲ ಗಲಿಬಿಲಿಯಾದದ್ದು ಕೂಡ ನಡೆದಿದೆ.

Check Also

22 ಲಕ್ಷ BPL, ಅಂತ್ಯೋದಯ ಕಾರ್ಡ್‌ ರದ್ದು..! ದಕ್ಷಿಣ ಕನ್ನಡ 1.11 ಲಕ್ಷ, ಉಡುಪಿ 80 ಸಾವಿರ ಕಾರ್ಡ್‌ ರದ್ದು

ಬೆಂಗಳೂರು : ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಆಗದೇ ಸಂಕಷ್ಟ ಎದುರಿಸುತ್ತಿರುವ ಹೊತ್ತಲ್ಲೇ ಬಿಪಿಎಲ್‌ ಕಾರ್ಡುದಾರರಿಗೆ ಮತ್ತೊಂದು ಶಾಕ್‌ …

Leave a Reply

Your email address will not be published. Required fields are marked *

You cannot copy content of this page.