
ಹೆಬ್ರಿ: ಸ್ಥಳೀಯ ನಿವಾಸಿಯೋರ್ವರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಎಸ್. ಎನ್.ಸಿ ಗುತ್ತಿಗೆ ಸಂಸ್ಥೆಯ ಕ್ರೇನ್ ಹರಿದ ಪರಿಣಾಮ ವ್ಯಕ್ತಿ ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ.
ಇಲ್ಲಿನ ಮುದ್ರಾಡಿ ಕೆಳಪೇಟೆಯಲ್ಲಿ ಮಧ್ಯಾಹ್ನ ಸ್ಥಳೀಯರಾದ ಚಣಿಲ(65) ಎಂಬವರು ನಡೆದುಕೊಂಡು ಹೋಗುತ್ತಿರುವಾಗ ಈ ದುರ್ಘಟನೆ ಸಂಭವಿಸಿದೆ.
ಅಪಘಾತ ನಡೆದ ನಂತರ ಚಾಲಕ ಕ್ರೇನ್ ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದಾಗ, ಸ್ಥಳೀಯರೆಲ್ಲ ಸೇರಿ ಅವನನ್ನು ತರಾಟೆಗೆ ತೆಗೆದುಕೊಂಡಾಗ ಬಳಿಕ ಸ್ವಲ್ಪ ದೂರದಲ್ಲಿ ಮುಂದೆ ಹೋಗಿ ಕ್ರೇನ್ ನಿಲ್ಲಿಸಿರುತ್ತಾನೆ.
ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಕ್ರೇನ್ ಚಾಲಕನ ಮೇಲೆ ಪ್ರಕರಣ ದಾಖಲಾಗಿದೆ.
