![](https://thrishulnews.com/wp-content/uploads/2024/03/WhatsApp-Image-2024-03-12-at-11.54.26-AM.jpeg)
ಮರೋಡಿ, ಎ. 19: ಹಿಂದೂ ಸಂಘಟನೆಯ ಸಕ್ರೀಯ ಕಾರ್ಯಕರ್ತರಾಗಿದ್ದುಕೊಂಡು ಎಲ್ಲರ ಪ್ರೀತಿ ಗಳಿಸಿದ್ದ ಮರೋಡಿಯ ರಾಮ್ಪ್ರಸಾದ್ ಅವರ ಮನೆಗೆ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಹರೀಶ್ ಪೂಂಜ ಅವರು ಭೇಟಿ ನೀಡಿ ಹೆತ್ತವರ ಆಶೀರ್ವಾದ ಪಡೆದರು. ಸಂಘಟನೆಯಲ್ಲಿ ದಿ| ರಾಮ್ಪ್ರಸಾದ್ ಅವರ ಸೇವೆಯನ್ನು ಸ್ಮರಿಸಿದ ಶಾಸಕರು ಅವರ ಹೆತ್ತವರ ಜತೆ ಕೆಲವೊತ್ತು ಸಮಾಲೋಚನೆ ನಡೆಸಿದರು. ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್ ಜತೆಗಿದ್ದರು.