ವೇಣೂರಿನ ಅಪತ್ಭಾಂಧವ ಹಿರಿಯ ಕಾರುಚಾಲಕ ಬೈರಣ್ಣ ನಿಧನ. ನಾಲ್ಕೈದು ದಶಕಗಳ ಕಾಲ ಸುರಕ್ಷತೆಯ ಸೇವೆ ನೀಡಿ ಮರೆಯಾದ ಮಾಣಿಕ್ಯ

ವೇಣೂರು, ಜೂ. 9: ಅಂಬಾಸಿಡರ್ ಕಾರು ಚಲಾಯಿಸಿ ವೇಣೂರಿನ ಜನತೆಗೆ ಅಪತ್ಭಾಂಧವರಾಗಿ ಕಳೆದ ನಾಲ್ಕೈದು ದಶಕಗಳಲ್ಲಿ ಸೇವೆ ನೀಡುತ್ತಿದ್ದ ಬೈರಣ್ಣ (84) ಅವರು ನಿನ್ನೆ ರಾತ್ರಿ ಹೃದಯಾಘಾತದಿಂದ ವೇಣೂರು ಕೆಳಗಿನ ಪೇಟೆಯ ಬಾಡಿಗೆ ಮನೆಯಲ್ಲಿ ನಿಧನ ಹೊಂದಿದರು.
ಮೂಲತಃ ಮಂಗಳೂರು ಗುರುಪುರದವರಾಗಿರುವ ಇವರು ಸರಿಸುಮಾರು 1976ರಲ್ಲಿ ವೇಣೂರಿನಲ್ಲಿ ಕಾರು ಚಾಲಕರಾಗಿ ವೃತ್ತಿ ಆರಂಭಿಸಿದ್ದರು. ಬಸ್, ವಾಹನಗಳ ವ್ಯವಸ್ಥೆಯೇ ಇಲ್ಲದ ಕಾಲದಲ್ಲಿಯೂ ಅಂದು ಬೈರಣ್ಣನ ಅಂಬಾಸಿಡರ್ ಕಾರಿನಲ್ಲಿ ಪ್ರಯಾಣ ಮಾಡದಿರುವವರು ತುಂಬಾ ವಿರಳ ಎಂದೇ ಹೇಳಬಹುದು. ಸುಧೀರ್ಘ ಕಾಲದವರೆಗೂ ವೇಣೂರಿನಲ್ಲಿ ಅಂಬಾಸಿಡರ್ ಕಾರು ಚಲಾಯಿಸಿ ಅದೆಷ್ಟೋ ರೋಗಿಗಳಿಗೆ, ಗರ್ಭಿಣಿಯವರಿಗೆ ಅಪದ್ಭಾಂದವರಾದವರು. ಇವರ ಕಾರಿನಲ್ಲಿ ಮಕ್ಕಳನ್ನು ಕೂರಿಸಲು ಪೋಷಕರೂ ಹಿಂದೇಟು ಹಾಕುತ್ತಿರಲಿಲ್ಲ. ಕಾರಣ ಸುರಕ್ಷತೆಯ ಚಾಲನೆ ಇವರದ್ದಾಗಿತ್ತು. ತೀರಾ ಸೌಮ್ಯ ಸ್ವಭಾವದವರಾಗಿದ್ದ ಇವರ ಅಗಲುವಿಕೆಯು ವೇಣೂರು ಜನತೆಗೆ ಅರಗಿಸಿಕೊಳ್ಳಲಾಗಷ್ಟು ನೋವುಂಟು ಮಾಡಿದೆ. ಅಗಲಿದ ಹಿರಿಯ ಜೀವಿ ಆಪತ್ಭಾಂಧವ ಬೈರಣ್ಣನವರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಇಲ್ಲಿಯ ಜನತೆ ಪ್ರಾರ್ಥಿಸುತ್ತಿದ್ದಾರೆ.

Check Also

ಬೆಳ್ತಂಗಡಿ : ಮನೆಯಂಗಳದಲ್ಲಿ ಆಟವಾಡುತ್ತಿದ್ದ 2 ವರ್ಷದ ಮಗು ಕೆರೆಗೆ ಬಿದ್ದು ಮೃತ್ಯು

ಬೆಳ್ತಂಗಡಿ: ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಮಗುವೊಂದು ತೋಟದ ಕೆರೆಯ ಬಳಿಗೆ ಹೋಗಿ ಕೆರೆಗೆ ಬಿದ್ದು ಮೃತಪಟ್ಟಿರುವ ಘಟನೆ ಗುರುವಾರ ಧರ್ಮಸ್ಥಳದ …

Leave a Reply

Your email address will not be published. Required fields are marked *

You cannot copy content of this page.