![](https://thrishulnews.com/wp-content/uploads/2024/03/WhatsApp-Image-2024-03-12-at-11.54.26-AM.jpeg)
![](https://thrishulnews.com/wp-content/uploads/2023/05/arihanth-advt-1-15-655x1024.jpg)
![](https://thrishulnews.com/wp-content/uploads/2023/05/janaushadi-advt-final-2-1024x352.jpg)
![](https://thrishulnews.com/wp-content/uploads/2023/06/kc-advt-1024x956.jpg)
![](https://thrishulnews.com/wp-content/uploads/2023/06/jo-1024x953.jpg)
ಸುಲ್ಕೇರಿ, ಜೂ. 3 : ಸುಲ್ಕೇರಿ ಗ್ರಾಮ ಪಂಚಾಯತ್ನ ೨೦೨೩-೨೪ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮಸಭೆಯು ಪಂಚಾಯತ್ ಅಧ್ಯಕ್ಷ ನಾರಾಯಣ ಪೂಜಾರಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯ ಮಾರ್ಗದರ್ಶಿ ಅಧಿಕಾರಿಯಾಗಿ ಬೆಳ್ತಂಗಡಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರಂಜಿತ್ ಕುಮಾರ್ ಗ್ರಾಮಸಭೆಯನ್ನು ನಡೆಸಿಕೊಟ್ಟರು.
![](https://thrishulnews.com/wp-content/uploads/2023/06/sulkery2.jpg)
ಗ್ರಾಮಸಭೆಯಲ್ಲಿ ಊರಿನ ಅಭಿವೃದ್ಧಿಯ ಬಗ್ಗೆ ಹಲವಾರು ಚರ್ಚೆಗಳು ನಡೆಯಿತು. ಮಳೆಯ ಮುಂಚೆ ನಾವರ ರಸ್ತೆ ದುರಸ್ತಿ ನಡೆಸುವಂತೆ ಆಗ್ರಹ ಕೇಳಿ ಬಂತು. ರಸ್ತೆ, ಕುಡಿಯುವ ನೀರು, ವಿದ್ಯುತ್, ಮೂಲಭೂತ ಸೌಕರ್ಯಗಳ ಬಗ್ಗೆ ಚರ್ಚೆಗಳು ನಡೆದವು. ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಯ ಮಾಹಿತಿ ನೀಡಿದರು.
ಗ್ರಾಮ ಸಭೆಯಲ್ಲಿ ಪಂ.ಅ. ಅಧಿಕಾರಿ ಗಾಯತ್ರಿ, ಉಪಾಧ್ಯಕ್ಷೆಯಶೋಧ, ಸದಸ್ಯರುಗಳಾದ ರವಿ ಪೂಜಾರಿ ಹಾರಡ್ಡೆ, ಶುಭಕರ ಪೂಜಾರಿ, ಗಿರಿಜಾ, ಪೂರ್ಣಿಮಾ, ಪ್ರೇಮಾ, ಕಾರ್ಯದರ್ಶಿ ಕೊರಗಪ್ಪ ನಾಯ್ಕ ಹಾಗೂ ಸಿಬ್ಬಂದಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.