

ಉಡುಪಿ: ಶ್ರೀ ಕೃಷ್ಣ ಮಠದ ರಾಜಾಂಗಣ ಸಮೀಪ ಯಾತ್ರಿಕರ ವಾಹನ ನಿಲುಗಡೆ ಸ್ಥಳದಲ್ಲಿ ಭಿಕ್ಷಾಟನೆಯಲ್ಲಿ ನಿರತರಾಗಿದ್ದ ನಾಲ್ವರು ಅಪ್ರಾಪ್ತ ಮಕ್ಕಳನ್ನು ಶನಿವಾರ ರಕ್ಷಣಿ ಮಾಡಲಾಗಿದೆ.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಯವರ ಆದೇಶದ ಮೇರೆಗೆ ಕಾರ್ಯಚರಣೆ ನಡೆದಿದ್ದು, ಶಾಂತ (13), ಭಾಗ್ಯ (8), ಭರಮ್ಮರೆಡ್ಡಿ(13), ಕಾವೇರಿ (12) ಎಂಬ ನಾಲ್ವರು ಅಪ್ರಾಪ್ತರನ್ನು ಮುಂದಿನ ಕಾನೂನು ಪ್ರಕ್ರಿಯೆಗೆ ಮಕ್ಕಳ ಕಲ್ಯಾಣ ಸಮಿತಿಯ ಹಾಜರುಪಡಿಸಲಾಗಿದೆ.
ಕಾರ್ಯಚರಣೆಯಲ್ಲಿ ಮಕ್ಕಳ ರಕ್ಷಣಾ ಘಟಕದ ಆಪ್ತ ಸಮಾಲೋಚಕಿ ಅಂಬಿಕಾ ಕೆ.ಎಸ್, ಔಟ್ ರಿಚ್ ವರ್ಕರ್ ಸುನಂದ, ಬಾಲಕಾರ್ಮಿಕ ಸಂಘದ ಅಮೃತ, ಮಕ್ಕಳ ಸಹಾಯವಾಣಿಯ ಕೇಸ್ ವರ್ಕರ್ ಗಳಾದ ಲಕ್ಷ್ಮೀಕಾಂತ್, ಸೌಮ್ಯ, ಸಮಾಜ ಕಲ್ಯಾಣ ಇಲಾಖೆಯ ಬಸವರಾಜು, ನಾಗರೀಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು, ಸವಿತಾ ಭಾಗಿಯಾಗಿದ್ದರು.