
ಉಡುಪಿ: ಕರ್ನಾಟಕ ಪೌರಸಭೆಗಳ ಅಧಿನಿಯಮ, 1964ರ ಪ್ರಕರಣ 11(1)(ಬಿ) ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಉಡುಪಿ ಜಿಲ್ಲೆಯ ಉಡುಪಿ ನಗರಸಭೆಗೆ ಸದಸ್ಯರನ್ನಾಗಿ ಸರ್ಕಾರವು ನಾಮ ನಿರ್ದೇಶನ ಮಾಡಿ ಆದೇಶಿಸಿರುವುದಾಗಿ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಸುರೇಶ ಶೆಟ್ಟಿ ಬನ್ನಂಜೆ, ಯಾದವ ಅಮೀನ್ ಕೊಳ, ಮೊಹಮ್ಮದ್ ಉಡುಪಿ, ಪ್ರಣಾಮ್ ಕುಮಾರ್ ಕಸ್ತೂರ್ಬಾ ನಗರ, ಕಡ್ತಲ ಸದಾನಂದ ಮೂಲ್ಯ ಉಡುಪಿ ಇವರನ್ನು ಸರಕಾರವು ಸದಸ್ಯರನ್ನಾಗಿ ಆಯ್ಕೆ ಮಾಡಿ ಆದೇಶ ಹೊರಡಿಸಿದೆ.
