![](https://thrishulnews.com/wp-content/uploads/2024/03/WhatsApp-Image-2024-03-12-at-11.54.26-AM.jpeg)
ಉಡುಪಿ: ಉಡುಪಿಯಲ್ಲಿ ನಡೆದಿದ್ದ ತಲ್ವಾರ್ನಲ್ಲಿ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂರನ್ನು ಬಂಧಿಸಿದ್ದು ಅವರ ವಿರುದ್ಧ ಶೀಘ್ರ ಚಾರ್ಜ್ಶೀಟ್ ಸಲ್ಲಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಉಡುಪಿ ಎಸ್ಪಿ ಡಾ.ಅರುಣ್ ಕೆ. ಹೇಳಿದ್ದಾರೆ. ಇದೇ ತಿಂಗಳ ಜೂನ್ 16ರಂದು ಉಡುಪಿಯಲ್ಲಿ ಈ ಘಟನೆ ನಡೆದಿತ್ತು. ಚರಣ್ ಮತ್ತು ಸ್ನೇಹಿತರ ಮೇಲೆ ಹಳೆ ದ್ವೇಷದಿಂದ ಯುವಕರ ಗುಂಪು ಉಡುಪಿಯ ಪುತ್ತೂರು ಎಂಬಲ್ಲಿ ತಲವಾರಿನಿಂದ ಕೊಲೆಯತ್ನ ಮಾಡಿತ್ತು. ಬಳಿಕ ಚರಣ್ ಅವರ ವಾಹನಕ್ಕೂ ದುಷ್ಕರ್ಮಿಗಳ ತಂಡ ಹಾನಿ ಉಂಟು ಮಾಡಿತ್ತು. ಈ ಸಂಬಂಧ ಅಭಿ , ಪ್ರವೀಣ್ ಕಟ್ಪಾಡಿ ಮತ್ತು ದೇಶ್ ರಾಜ್ ಎಂಬ ಮೂವರನ್ನು ಬಂಧನ ಮಾಡಿದ್ದೇವೆ. ಶೀಘ್ರ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಅಂತ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ.